Monday, 9 January 2012

Jnanaganga Campus Youth Festival-2011


ಜ್ಞಾನಗಂಗೆಯಲ್ಲಿ ಸಾಂಸ್ಕೃತಿಕ ಉತ್ಸಾಹದ ರಂಗು
ಯುವಜನೋತ್ಸವ-2011



ಚ್ಚ ಹಸುರಿನ ವಿಶ್ವವಿದ್ಯಾಲಯದ ಜ್ಞಾನಗಂಗೆಯ ಆವರಣದಲ್ಲಿ ಸಡಗರ, ಸಂಭ್ರಮಕ್ಕೆ ಇಂಥಹ ದಿನ ಇರಬೇಕೆಂದೇನಿಲ್ಲ. ಆ ಸಂತೋಷದ,  ಉಲ್ಲಾಸದ ವಾತಾವರಣಕ್ಕೆ ಇತ್ತೀಚೆಗೆ ನಡೆದ ಅಂತರ್ ಮಹಾವಿದ್ಯಾಲಯ ಯವಜನೋತ್ಸವ ಕಾರ್ಯಕ್ರಮವೇ ಈ ಉತ್ಸವಕ್ಕೆ  ಕಾರಣವಾಯಿತು. ಜನಪದ ಸಂಸ್ಕೃತಿಯ ನೆಲೆಯಲ್ಲಿ ಹಲವಾರು ವರ್ಷಗಳ ಕಾಲ ಕಲಾಸೇವೆ ಮಾಡಿ, ದೂರದರ್ಶನ ಕೇಂದ್ರದಲ್ಲಿ ನಿದರ್ೇಶಕರಾಗಿ ಸೇವೆ ಮಾಡಿರುವ ಖ್ಯಾತ ಜಾನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ ಮುಖ್ಯ ಅತಿಥಿಯಾಗಿ ಡೊಳ್ಳು ವಾದ್ಯವನ್ನು ಬಾರಿಸುವುದರ ಮೂಲಕ ಈ ಯುವಜನೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಬೀದರ್, ಗುಲಬಗರ್ಾ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ವಿವಿಧ ತಾಲೂಕಿನ 33 ಕಾಲೇಜಿನ 190 ವಿದ್ಯಾಥರ್ಿಗಳು ಹಾಗೂ 198 ವಿದ್ಯಾಥರ್ಿನಿಯರು ಒಟ್ಟು 388 ವಿದ್ಯಾಥರ್ಿಗಳು ಭಾಗವಹಿಸಿದ್ದು ವಿಶೇಷ. ಈ ಸಮಾರಂಭದಲ್ಲಿ ಹಮ್ಮಿಕೊಂಡ ಸ್ಪಧರ್ಾ ಕಾರ್ಯಕ್ರಮಗಳಾದ ವಾದ್ಯ ಸಂಗೀತ, ಪಾಶ್ಚಿಮಾತ್ಯ ಸಂಗೀತ, ಹಾಡುಗಾರಿಕೆ, ಶಾಸ್ತ್ರೀಯ ಹಾಗೂ ಜನಪದ ನೃತ್ಯಗಳು, ಮೂಕಾಭಿನಯ, ಅನುಕರಣೆ/ಪ್ರಹಸನ, ಏಕಾಂಕ ನಾಟಕಗಳು, ಕಾಟರ್ೂನಿಂಗ್, ಕ್ಲೇ ಮಾಡಲ್, ರಂಗೋಲಿ, ರಸಪ್ರಶ್ನೆ, ಚಚರ್ಾಸ್ಪಧರ್ೆ, ವಾಕ್ಪಟುತ್ವ ಸ್ಪಧರ್ೆ, ಛಾಯಾಚಿತ್ರ ಸ್ಪಧರ್ೆ, ಹಲವಾರು ಸ್ಪಧರ್ೆಗಳು ಕಾಲೇಜು ವಿದ್ಯಾಥರ್ಿಗಳ ಪ್ರತಿಭಾ ಪ್ರದರ್ಶನಕ್ಕೆ ಭೂಮಿಕೆ ಒದಗಿಸಿದಂತಾಗಿತ್ತು.

ಬೆಳಿಗ್ಗೆ 9 ಗಂಟೆಗೆ ಶರುವಾಗಿ ಮುಖವಾಡ, ಬುಡಕಟ್ಟು ಜಾನಪದ ವೇಷ ತೊಟ್ಟ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಯುವಕರ ಅಮಿತೋತ್ಸವ ಕಂಡ ಅತಿಥಿಗಳು ತರುಣರಂತೆ ಕುಣಿದು ನಲಿದರು. ಜಾನಪದ ಗಾಯಕ ಬಾನಂದೂರು ಕೆಂಪಯ್ಯ ಜಾನಪದ, ತತ್ವಗೀತೆ ಹಾಡಿ ರಂಜಿಸಿದರು. ಎಲ್ಲಿ ನೋಡಿದರೂ ಹಚ್ಚ ಹಸಿರಿನ ಪಚ್ಚ ಮೈ ತುಂಬಿಕೊಂಡ ಬೃಹತ್ ಕಟ್ಟಡಗಳು, ವಿವಿಧ ಬಗೆಯ ವೇಷ-ಭೂಷಣ ತೊಟ್ಟು ನಿಂತಲ್ಲಿ ನಿಲ್ಲದೆ ಅತ್ತಿಂದತ್ತ ವೈನಾಗಿ ಕುಣಿಯುವ ಯುವಕರ ದಂಡು ಅಲ್ಲಿತ್ತು. ಎಲ್ಲರ ಮುಖದಲ್ಲೂ ಉತ್ಸಾಹದ ಕಳೆ ತುಂಬಿತ್ತು. ಎಲ್ಲಿ ನೋಡಿದರಲ್ಲಿ ವಾಧ್ಯ, ಮೇಳಗಳ ನಾದ-ನಿನಾದ ತುಂಬಿಕೊಂಡಿತ್ತು. ಗಿಡ, ಮರಗಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಕಟ್ಟಿ ನವ ವಧುವಿನಂತೆ ಸಿಂಗರಿಸಲಾಗಿತ್ತು. ಆರಂಭದ ದಿನದಂದು ಕಂಡುಬಂದ ದೃಶ್ಯಗಳಿವು. ಯುವಜನನೋತ್ಸವದ ಮೆರವಣಿಗೆಯು ಪ್ರಾಣಿಶಾಸ್ತ್ರ ವಿಭಾಗದಿಂದ ಪ್ರಾರಂಭವಾಗಿ ಕಾರ್ಯಸೌಧ ಮಹಾತ್ಮಾ ಗಾಂಧಿ ಸಭಾಂಗಣವನ್ನು ಪ್ರವೇಶಿಸುವುದರೊಂದಿಗೆ ಬೋಸ್ಹಾಲ್, ಭಾಸ್ಕರಹಾಲ್, ಫ್ಯಾಶ್ಚರ್ ಹಾಲ್ ಹಾಗೂ ಭಾಭಾ ಸಭಾಂಗಣಗಳಲ್ಲಿ ಸ್ಪಧರ್ೆಗಳು ಜರುಗಿದವು. ಮೊದಲ ದಿನದಂದು ಇಂಡಿಯನ್ ಗ್ರೂಫ್ ಸಾಂಗ್, ವೆಸ್ಟ್ರನ್ ವೊಕಲ್ ಸೊಲೊ, ಕ್ಲಾಸಿಕಲ್ ವೊಕಲ್ ಸೊಲೊ, ವೆಸ್ಟ್ರನ್ ಗ್ರೂಫ್ ಸಾಂಗ್, ಎಲೊಕ್ಯೂಷನ್, ಡಿಬೆಟ್ ಪೊಸ್ಟರ್ ಮೇಕಿಂಗ್, ಕ್ಲೇ ಮಾಡೆಲಿಂಗ್, ಒನ್ ಆಕ್ಟ್ ಪ್ಲೇ, ಮತ್ತು ಸ್ಕಿಟ್ ಸ್ಪಧರ್ೆಗಳನ್ನು ನಡೆಸಲಾಯಿತು.







ಎರಡನೇ ದಿನದಂದು ಹಾಡು ನೃತ್ಯ, ಮುಂತಾದ  ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯುವಕರು ಹುಮ್ಮಸ್ಸಿನಂದ ನೆರೆದಿದ್ದರು. ಮೊದಲ ದಿನ  ನಡೆದ  ಪೇಂಟಿಂಗ್, ಕ್ಲೇ ಮಾಡಲಿಂಗ್ ಸ್ಪಧರ್ೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು. ಶುಕ್ರವಾರದಂದು ಯಾತಕ್ಕೆ ಮಳೆ ಹೋದವೊ ಶಿವ.. ಯಾತಕ್ಕೆ ಮಳೆ ಹೋದವೂ... ಎಂಬ ಹಾಡಿಗೆ ತಕಂ್ಕತೆ ಕೋಲು ಹಾಕಿ ಯುವಕರು ಪಡೆ ಸಂಭ್ರಮಿಸಿತು. ಈ ಮೂಲಕ  ಗ್ರಾಮೀಣ ಪ್ರದೇಶದ  ಸೊಗಡನ್ನ ಮತ್ತೆ  ಮರುಕಳಿಸುವಂತೆ  ಮಾಡಿದರು. ದೋತಿ, ಕಾಟನ್ ಬನಯನ್, ರೇಷ್ಮೆ ರುಮಾಲು ತೊಟು,್ಟ ಅವರು ಅಪ್ಪಟ ರೈತನ ಹೆಜ್ಜೆ ಹಾಕುತ್ತಿದ್ದರೆ, ಸಭೆಯಲ್ಲಿ ಕುಳಿತವರೆಲ್ಲರೂ ಮಗ್ನರಾಗಿ ಮೈ ಮರೆತಿದ್ದರು. ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಸೊಲೊ, ಲೈಟ್ ವೊಕಲ್ ಸೊಲೊ, ಪೋಕ್ ಆಕರ್ೆಸ್ಟ್ರ, ಕ್ವಿಜ್ ಸ್ಪಾಟ್ ಪೋಟೋಗ್ರಫಿ, ಸ್ಪಾಟ್ ಪೈಂಟಿಂಗ್, ರಂಗೋಲಿ, ಮೈಮ್, ಫೋಕ್ ಡ್ಯಾನ್ಸ್, ಕ್ಲಾಸಿಕಲ್ಡ್ಯಾನ್ಸ್, ಮಿಮಿಕ್ರಿ ಸ್ಪಧರ್ೆಗಳನ್ನು ನಡೆಸಲಾಯಿತು. ಲಂಬಾಣಿ ಉಡುಗೆ ತೊಟ್ಟು ಜ್ಞಾನಗಂಗೆಯ ವಿದ್ಯಾಥರ್ಿನಯರು ಸಾಂಪ್ರದಾಯಿಕ ಹಾಡಿಗೆ ಮೈ, ಮಾಟದೊಂದಿಗೆ ಕುಣಿಯುತ್ತಿದ್ದರೆ, ಅವರಿಗೆ ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆಯ ಬೆಂಬಲ ಪ್ರೋತ್ಸಾಹ ಸಿಕ್ಕಿತು. ಹುಯ್ಯೋ, ಹುಯ್ಯೋ ಮಳೆರಾಯ ಎಂಬ ಹಾಡಿನ ತಾಳಕ್ಕೆ ತಕ್ಕಂತೆ ಜಾನಪದ ನೃತ್ಯ ಪ್ರದಶರ್ಿಸಿದ ಯುವ ಪಡೆ ಸ್ವಲ್ಪ ಹೊತ್ತು ಸಾಂಸ್ಕೃತಿಕ ಮಳೆ ಬರುವಂತೆ ಮಾಡಿದರು.



ಕ್ರೂರ ಪ್ರಾಣಿ. ಹುಲಿಯನ್ನು  ಕೊಲ್ಲುವ ಬುಡಕಟ್ಟು ಜನಾಂಗದ ಹಾಡಿನ ರೂಪದ ನೃತ್ಯ ಮನುಷ್ಯನ   ಮೃಗೀಯ ಸ್ವಬಾವನ್ನು ಬಿಂಬಿಸುವಂತಿತ್ತು. ನಾಡು-ನುಡಿ  ನಮ್ಮ ಸಂಪ್ರದಾಯವನ್ನು ಮೆಲುಕು ಹಾಕುವಂತಹ ತಾನ ತಂದನಾ... ತಾನ ತಾನ ತಂದನ್.. ಎಂಬ ಹಾಡಿನ ನೃತ್ಯ ಪ್ರಸ್ತುತ ಪಡಿಸಿದ  ವಿದ್ಯಾಥರ್ಿ, ವಿದ್ಯಾಥರ್ಿನಿಯರು ಹಳೆಯ ಹಾಡಿಗೆ  ನಮ್ಮ ನಡೆ ಎಂಬುದನ್ನು ಮನಗಾನಿಸಿ, ಬಾಯಿ ಬಿಚ್ಚಿ ಮಾತಾಡಿ ಗಿಲ್ ಗಿಲ್ .. ಕಾಲ ಗೆಜ್ಜೆ  ಥಳಕ' ಎಂಬ ಹಾಡಿನ ಭರ್ಜರಿ ನೃತ್ಯ ಮಾಡಿದ ವಿದ್ಯಾಥರ್ಿನಿಯರು ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ ಹರಿದು ಬರುವಂತೆ ಮಾಡಿದರು. ನಂತರ ನಡೆದ ರಂಗೋಲಿ ಸ್ಪಧರ್ೆಯಲ್ಲಿ ಚಿತ್ತ,್ರ ಚಿತ್ತಾರದ ರಂಗವಲ್ಲಿ ಬಿಡಿಸಿದ ಯುವತಿಯರು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ರಂಗು ಬಿಡಿಸಿದರು.

ಮೂರನೇ ದಿನದಂದು ಕಾಟರ್ೂನಿಂಗ್, ಕಲೇಗ ಸ್ಪಧರ್ೆಗಳು ನಡೆದವು. ಸ್ಪಧರ್ೆಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಜ್ಞಾನಗಂಗಾ ಆವರಣದಲ್ಲಿ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಇದೊಂದು ಸಂಭ್ರಮದ ಸಮಾರಂಭವಾಗಿತ್ತು, ಅವರು 'ಜ್ಞಾನಗಂಗಾ' ಪತ್ರಿಕೆಯ ಪ್ರಾಯೋಗಿಕ ವರದಿಗಾಗಿ ಬೇರೆ ಬೇರೆ ವಿಭಾಗಗಳಲ್ಲಿ ನಡೆದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವರದಿ ತಯಾರಿಸುವದು ಅವರ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿತ್ತು. ಅದೇ ರೀತಿ ಕ್ಯಾಮರಾ ಹಿಡಿದು ಸಿಕ್ಕ ಸಿಕ್ಕಂದರಲ್ಲಿ ಫೋಟೋ ಕ್ಲಿಕ್ಕಿಸುತ್ತಾ ಓಡಾಡುವದು ಸಹಜವಾಗಿತ್ತು. ಪತ್ರಿಕೋದ್ಯಮ ವಿಭಾಗಕ್ಕೆ ಒಳಪಟ್ಟಿರುವ 'ಬಹುಮಾಧ್ಯಮ ಕೇಂದ್ರ'ದವರು ಕಾರ್ಯಕ್ರಮದ ವೇಳಾಪಟ್ಟಿ ಹಿಡಿದುಕೊಂಡು ಕೊರಳಲ್ಲಿ ಯುವಜನೋತ್ಸವದ ಗುರುತಿನ ಪತ್ರವನ್ನು ಹಾಕಿಕೊಂಡು ಪುರುಸೊತ್ತಿಲ್ಲದೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಪ್ರತಿಯೊಂದು ವಿಭಾಗಕ್ಕೆ ಬೇಟಿ ನಡಿ ಅಲ್ಲಿ ನಡೆದಿರುವಂತಹ ಕಾರ್ಯಕ್ರಮಗಳ ಛಾಯಾಚಿತ್ರ ಹಾಗೂ ವೀಡಿಯೋ ಕವರೇಜ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಬೇರೆ ಕಡೆಯಿಂದ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ, ಶಿಕ್ಷಕರಿಗೆ ರುಚಿ ರುಚಿಯಾದ ಊಟದ ವ್ಯವಸ್ಥೆಯು ಇತ್ತು. ವಸತಿ ಸೌಕರ್ಯವನ್ನು ಕೂಡ ಮಾಡಲಾಗಿತ್ತು.


ಇಲ್ಲಿಯ ಒಂದು ಉತ್ತಮ ಪರಿಸರ ಎಲ್ಲರನ್ನೂ ಮನಸೂರೆಗೊಳ್ಳುವಂತೆ ಮಾಡಿತು ಉದ್ಯಾನವನಗಳು ಹೂ, ಬಳ್ಳಿಗಳಿಂದ ವಿಶೇಷ ಗಿಡಗಳಿಂದ ಜ್ಞಾನಗಂಗಾ ಕ್ಯಾಂಪಸ್ ಸುಂದರವಾಗಿ ಕಾಣಿಸುತ್ತಿದೆ. ಸಸ್ಯಶಾಸ್ತ್ರ ವಿಭಾಗದಲ್ಲಿ ಹಲವಾರು ಔಷದೀಯ ಗುಣವುಳ್ಳ ಸಸ್ಯಗಳು, ಗಿಡಗಳು ಸುಂದರವಾಗಿದ್ದವು. ವಿಶ್ವವಿದ್ಯಾಲಯದ ಕುಲಪತಿಗಳು ಡೊಳ್ಳು ಬಾರಿಸುವುದರ ಮೂಲಕ ಯುವಕರಿಗೆ ಹುರಿದುಂಬಿಸಿದರು, ಪ್ರತಿಯೊಬ್ಬ ವಿದ್ಯಾಥರ್ಿಯು ತನ್ನ ಪ್ರತಿಭೆಯನ್ನು ತೋರಿಸಲು ಇದು ಒಂದು ವೇದಿಕೆಯಾಗಿ ಮಾರ್ಪಟ್ಟಿತ್ತು. ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿ ಕೌಶಲ್ಯ, ಪ್ರತಿಭೆ ಇರುತ್ತದೆ, ಅದನ್ನು ತೋರಿಸಲು ಅವನಿಗೊಂದು ಅವಕಾಶ ಬೇಕಾಗುತ್ತದೆ. ಅವಕಾಶ ಎಂಬ ತಾಯಿಗೆ, ಪ್ರಯತ್ನ ಎಂಬ ತಂದೆಗೆ ಜನಿಸುವ ಮಗು ಅದೃಷ್ಟ ಎಂದು ಹೇಳಬಹುದು. ಅವಕಾಶ ನಮಗಾಗಿ ಕಾಯುವದಿಲ್ಲ ಅವಕಾಶ ಒದಗಿ ಬಂದಾಗ ನಾವು ಅದನ್ನು ಬಳಸಿಕೊಂಡು ನಮ್ಮ ಕಾರ್ಯ ಸಾಧಿಸಬೇಕಾಗುತ್ತದೆ. ಒಂದೇ ಬಾರಿಗೆ ಯಾರೂ ವಿಜೇತರಾಗುವದಿಲ್ಲ, ಅದಕ್ಕೆ ದಿನನಿತ್ಯದ ಅಭ್ಯಾಸವಿರಬೇಕು, ಓದುವದರೊಂದಿಗೆ ಪ್ರತಿಭೆ ಬೆಳೆಸಿಕೊಳ್ಳುವದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ

ಯುವಜನೋತವ್ಸಕ್ಕೆ ಶನಿವಾರ ತೆರೆ ಬಿದ್ದಿದ್ದು. ಎನ್.ವಿ ವಿನ್ನರ್, ವಿ.ವಿ ರನ್ನರ್ ಸ್ಥಾನದಲ್ಲಿದೆ. ಗುಲಬಗರ್ಾದ ಎನ್,ವಿ ಪದವಿ ಕಾಲೇಜಿಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ. ಗುಲಬಗರ್ಾ ವಿಶ್ವವಿದ್ಯಾಲಯ ಎರಡನೇ ಸ್ಥಾನ ಗಳಿಸಿಕೊಂಡಿದೆ. ಖ್ಯಾತ ಅಂತರಾಷ್ಟ್ರೀಯ ಕಲಾವಿದ ನರಸಿಂಹಲು ವಡವಾಟಿ ಮತ್ತು ವಿಶ್ವವಿದ್ಯಾಲಯದ ಕುಲ;ಪತಿ ಪ್ರೊ. ಈ.ಟಿ.ಪುಟ್ಟಯ್ಯ ನೂತನ ವಿದ್ಯಾಲಯ ಪದವಿ ಕಾಲೇಜಿಗೆ ಸಮಗ್ರ ಪ್ರಶಸ್ತಿ ವಿತರಿಸಿದರು. ಮೂರು ಚಿನ್ನದ ಪದಕ ಸೇರಿದಂತೆ ಒಟ್ಟು 17 ಪದಕಗಳನ್ನು ಎನ್.ವಿ ತನ್ನ ಮಡಿಲಿಗೆ ಹಾಕಿಕೊಂಡಿತು. ಎಲ್ಲ ಸ್ಪಧರ್ೆಗಳು ಕರಾರುವಕ್ಕಾಗಿ ಅತ್ಯಂತ ಶಿಸ್ತಿನಿಂದ ಜರುಗಿದವು. ಕನರ್ಾಟಕ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನಿಣರ್ಾಯಕರು ಸ್ಪಧರ್ಿಗಳಲ್ಲಿದ್ದ ಉತ್ಸಾಹ ಮತ್ತು ಪ್ರತಿಭೆಗಳನ್ನು ಕಂಡು ಪ್ರಶಂಸಿಸಿದರು. ಈ ಯುವಜನೋತ್ಸವ ವ್ಯವಸ್ಥಿತವಾಗಿ ಜರುಗಲು 16 ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಉಪಸಮಿತಿಗಳ ಅಧ್ಯಕ್ಷರು, ಸಂಯೋಜಕರು, ಸದಸ್ಯರು ಹಾಗೂ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾಥರ್ಿಗಳು, ವಿವಿಯ ಸಿಬ್ಬಂದಿ ವರ್ಗದವರು ಹಗಲಿರುಳು ಶ್ರಮಿಸಿ ದಕ್ಷವಾಗಿ ಕಾರ್ಯನಿರ್ವಹಿಸಿ ಯುವಜನೋತ್ಸವದ ಯಶಸ್ಸಿಗೆ ಸಹಕರಿಸಿದರು.

ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಭಾರತೀಯ ಮೂಲ ಸಂಸ್ಕೃತಿ ನಶಿಸುತ್ತಿದ್ದು, ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ. ಸಮಾಜವನ್ನು ಸದಾ ಜೀವಂತವಾಗಿಡುವ ಕಲೆಗಳು ಯುವ ಮನಸ್ಸುಗಳನ್ನು ಸೆರೆಹಿಡಿಯುತ್ತವೆ. ಜಾನಪದ ಸಂಸ್ಕೃತಿ ಉಳಿಸಿಕೊಳ್ಳವುದರ ಜೊತೆಗೆ ಮೂಲ ಆಶಯಗಳಿಗೆ ದಕ್ಕೆ ಬಾರದ ರೀತಿಯಲ್ಲಿ ನಿಜ ಸಂಸ್ಕೃತಿಯನ್ನು ಉಳಿಸಿಕೊಂಡು ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾಥರ್ಿಯು ಈ ಕರ್ತವ್ಯವನ್ನು ಅರ್ಥಮಾಡಿಕೊಂಡು ತಮ್ಮ ಪ್ರತಿಭೆಯಿಂದ ಕನ್ನಡವನ್ನು, ಕನ್ನಡ ಸಂಸ್ಕೃತಿಯನ್ನು ಕಾಪಾಡಬೇಕಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು ಹೆಮ್ಮೆಯ ವಿಷಯ, ಅದನ್ನು ಚಿರಕಾಲ ಉಳಿಸಿಕೊಂಡು ಹೋಗುವದು ನಮ್ಮ ವಿಷಯ.



-ಅಮರೇಶ ನಾಯಕ.ಜಾಲಹಳ್ಳಿ
ಮೊ-9945268059. 


Saturday, 31 December 2011

Anche Chiti Sangrha (Published)


ಸಂಗಮೇಶನ ಅಂಚೆ ಚೀಟಿ ಸಂಗ್ರಹ ಕಲೆ...

ಇಂದಿನ ಬಿಡುವಿಲ್ಲದ ಕಾಲದಲ್ಲಿ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಾಗುತ್ತದೆ, ಯಾವುದೇ ಕೆಲಸ ಪೂರ್ಣಗೊಳ್ಳಬೇಕಾದರೆ ಸಹನೆ, ಧೃಡಸಂಕಲ್ಪ, ಅಛಲ ಆತ್ಮವಿಶ್ವಾಸ ಅತ್ಯಗತ್ಯ. ಸ್ಪಧರ್ಾತ್ಮಕತೆ ಹೆಚ್ಚಾಗಿರುವ ಈ ಕಾಲದಲ್ಲಿ ಜನರು ಏನಾದರೊಂದು ಸಾಧಿಸಬೇಕೆಂದು ಅತಿ ವೇಗದಿಂದ್ಲ ಸಾಗುತ್ತಾರೆ. ಸಾಧಿಸಬೇಕೆನ್ನುವ ಛಲ, ಜೀವನದಲ್ಲಿ ಒಂದು ಗುರಿ, ಆದರ್ಶ ಇರಬೇಕು, ನಮ್ಮ ಹಿಂದೆ ಮಾರ್ಗದರ್ಶನ ಮಾಡಿ, ಗುರಿಯೆಡೆಗೆ ಸಾಗುವಂತೆ ಮಾಡುವ ಗುರು ಇರಬೇಕು, ಆಗ ಅಂದುಕೊಂಡದನ್ನು ಸಾಧಿಸಲು ಸಬಲ ಶಕ್ತಿ ದೊರೆಯುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಓದುವ, ಬರೆಯುವ, ಕ್ರೀಡೆ ಇದೆ ರೀತಿ ಇನ್ನಿತರ ಚಟುವಟಿಕೆಯಾಗಿರಬಹುದು. ಅವರು ರೂಢಿಸಿಕೊಂಡ ರೀಯಲ್ಲಿರುತ್ತದೆ. ಕೆಲವರಲ್ಲಿ ವಿಶಿಷ್ಠ ಕೌಶಲ್ಯಗಳು ಅಡಗಿರುತ್ತವೆ. ಅದನ್ನು ಹೊರಹಾಕಿದಾಗ, ಪ್ರದಶರ್ಿಸಿದಾಗ, ಇನ್ನೊಬ್ಬರ ಅರಿವಿಗೆ ಬರುತ್ತದೆ. ಇದು ಅವರ ವಿಶಿಷ್ಟ ಮನೋಭಿಲಾಷೆಗೆ, ಅವರ ಹವ್ಯಾಸಕ್ಕೆ ಮೆರಗು ಬರುತ್ತದೆ. ಅಂತಹ ವಿಶಿಷ್ಠ ಶೈಲಿಯ ಅಭಿರುಚಿಯುಳ್ಳ ವ್ಯಕ್ತಿಗಳು ಸಾಕಷ್ಟು ಜನರಿದ್ದಾರೆ, ವೇದಿಕೆ ದೊರೆತವರು ಗುರುತಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಎಲೆಮರೆಕಾಯಿಯಂತೆ ಹಿಂದೆ ಉಳಿಯುತ್ತಾರೆ. 

ನಮ್ಮಲ್ಲಿ ಒಬ್ಬ ವಿದ್ಯಾಥರ್ಿ ಇದ್ದಾನೆ. ಆತನಿಗೆ ಪ್ರತಿಯೊಂದು ಹಳೆಯ ವಸ್ತುವನ್ನು ಸಂಗ್ರಹಿಸುವದೆಂದರೆ ಇಷ್ಟವಂತೆ ಆ ವ್ಯಕ್ತಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದನ್ನೂರು ಗ್ರಾಮದ ಸಂಗಮೇಶ.ಆರ್.ಹಿಪ್ಪಳಗೆಮಠ, ಪ್ರಸ್ತುತ ಗುಲಬಗರ್ಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ಸೆಮಿಸ್ಟರ್ನಲ್ಲಿ ವ್ಯಾಸಂಗ ನಡೆಸಿದ್ದಾನೆ. ಆತ ಏನಾದರೊಂದು ಸಂಗ್ರಹಿಸುತ್ತಲೇ ಇರುತ್ತಾನೆ. ಏನಾದರೊಂದು ಸಂಗ್ರಹ ಮಾಡುವದೆಂದರೆ, ಸಂಶೋಧನೆ ಮಾಡಿದಂತೆಯೇ ಸರಿ, ಸಮಯದ ಮಹತ್ವ ಅರಿತು ಇರುವ ಸಮಯವನ್ನೇ ಸದ್ಬಳಕೆ ಮಾಡಿಕೊಂಡು ಜೀವಿಸುವದು ಅಗತ್ಯವಾಗಿದೆ ಎನ್ನುತ್ತಾನೆ. ದಿನದಿಂದ ದಿನಕ್ಕೆ ಸಮಯ ಕಡಿಮೆಯಾಗುತ್ತಾ, ಕಲಸಗಳು ಹೆಚ್ಚಾಗುತ್ತಿವೆ. ವಿದ್ಯಾಥರ್ಿ ಜೀವನ ಅತಿ ಅಮೂಲ್ಯವಾಗಿದೆ. ವಿದ್ಯಾಥರ್ಿ ಜೀವನವನ್ನು ಕೇವಲ ಶಿಕ್ಷಣಕ್ಕೆ ಮೀಸಲಿಟ್ಟಿರೆ ಸಾಲದು. ಸಾಮಾಜಿಕ, ಆಥರ್ಿಕ, ರಾಜಕೀಯ, ಧಾಮರ್ಿಕ ಇತಿಹಾಸ ಉಳಿಸುವ ಚಟುವಟಿಕೆಗಳ ಬಗೆಗೂ ಚಿಂತನೆ ನಡೆಸುವಂತಹ ಕೆಲಸವಾಗಬೇಕು. ಇತಿಹಾಸ ಬಲ್ಲವನು, ಇತಿಹಾಸ ಸೃಷ್ಟಿಸಬಲ್ಲನು. ಇತಿಹಾಸ ತಿಳಿಯದವನು, ಇತಿಹಾಸ ಸೃಷ್ಟಿಸಲಾರನು. ಅಂದರೆ ನಾವು ಜೀವನದಲ್ಲಿ ಹಿಂದೆ ನೋಡಿಕೊಂಡು ಮುಂದೆ ಸಾಗಬೇಕು, ಹಿಂದೆ ನಡೆದ ಘಟನೆಗಳ ಬಗ್ಗೆ ಅರಿತುಕೊಂಡರೆ, ಗತಕಾಲದ ವೈಭವದ ಬಗ್ಗೆ, ಸಂಸ್ಕೃತಿಯ ಬಗ್ಗೆ, ಹಿಂದಿನ ಆಡಳಿತ ವ್ಯವಸ್ಥೆಯ ಬಗ್ಗೆ, ಜೀವನ ಕ್ರಮವನ್ನು ತಿಳಿದು ನಡೆಯಬೇಕಾಗುತ್ತದೆ.

ಗತಕಾಲದ ಯಾವುದೇ ವಸ್ತುವನ್ನಾಗಲಿ ಸಂಗ್ರಹಿಸಿಡಬೇಕಾಗುತ್ತದೆ. ಹಳೆಯ ವಸ್ತುಗಳಿಗೆ ತುಂಬಾ ಬೆಲೆ ಇದೆ, ಅದಕ್ಕೆ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಾರೆ. ರಾಜ-ಮಹಾರಾಜರ ಕಾಲದಲ್ಲಿ ಬಳಕೆಯಾದ ವಸ್ತುಗಳನ್ನು ಕಲೆ ಹಾಕಿ ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕೆ ಇಡುವದುಂಟು. ಅದೇ ರೀತಿ ಈತನು ಸಂಗ್ರಹ ಮಾಡಿರುವ ವಸ್ತುಗಳೆಂದರೆ ನಿಜಾಮನ ಕಾಲದ ಬಾಂಡ್ ಪೇಪರ್ಗಳು, ನಾಣ್ಯಗಳು, ಹಲವು ರೀತಿಯ ವಸ್ತುಗಳು, ಬ್ರಿಟಿಷ ಈಸ್ಟ್ ಇಂಡಿಯ ಕಂಪನಿಯ ನಾಣ್ಯಗಳು (1616, 1717, 1818, 1937, 1917 ಇಸವಿಯ ನಾಣ್ಯಗಳು), ಪ್ರತಿಯೊಂದು ನಾಣ್ಯದ ಮೇಲೆ ಒಂದು ಬದಿಯಲ್ಲಿ ಬ್ರಟಿಷರ ಚಿಹ್ನೆ, ಮತ್ತೊಂದು ಬದಿಯಲ್ಲಿ ಭಾರತೀಯ ದೇವತೆಗಳ ಚಿಹ್ನೆ ಹೊಂದಿವೆ. 12 ಮತ್ತು 13ನೇ ಶತಮಾನದ ನಾಣ್ಯಗಳಿವೆ. ರಾಷ್ಟ್ರೀಯ ವಿಶೇಷ ದಿನಗಳಂದು (ಅಗಸ್ಟ್ 15, ಜನವರಿ 26, ಅಕ್ಟೋಬರ್ 2, ನವೆಂಬರ್ 14, ಸೆಪ್ಟೆಂಬರ್ 5, ನವೆಂಬರ್ 1) ಪ್ರತಿಯೊಂದು ದಿನಪತ್ರಿಕೆಯನ್ನು ಸಂಗ್ರಹಿಸಿ ಮಾಹಿತಿ ಕಲೆ ಹಾಕುವದು. 130 ನಮೂನೆಯ ಮ್ಯಾಚ್ ಬಾಕ್ಸ್ಗಳನ್ನೂ ಸಹ ಕಲೆಕ್ಟ್ ಮಾಡಿದ್ದಾರೆ. ಕ್ರಿಕೇಟ್ ಸ್ಟಾರ್ಗಳು, ಟೆನಿಸ್ ಕ್ರೀಡಾಪಟುಗಳ ಹಾಗೂ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳನ್ನು, ಪ್ರಮುಖ ವ್ಯಕ್ತಿಗಳ ಸಂದರ್ಶನ ಮಾಡಿ ಅವರ ಸಂಪೂರ್ಣ ವಿವರದ ಮಾಹಿತಿ ಪಡೆದು ಭಾವಚಿತ್ರವನ್ನು ಕಲೆಕ್ಟ್ ಮಾಡುವ ಹವ್ಯಾಸ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತ್ತಕೋತ್ತರ ಪದವಿಯವರೆಗೂ ತನಗೆ ಕಲಿಸಿದ ಗುರುಗಳ ಭಾವಚಿತ್ರ ಸಹಿತ ಮಾಹಿತಿ ಸಂಗ್ರಹಿಸಿ ಅವರ ಹುಟ್ಟುಹಬ್ಬ ಅಥವಾ ವಿಶೇಷ ದಿನದಂದು ಅವರಿಗೆ ಶುಭಾಶಯಗಳನ್ನು ತಿಳಿಸುವ ರೂಢಿ. ಇದು ಈ ಕಾಲದಲ್ಲಿಯೂ ಗುರುಗಳ ಮೇಲಿರುವ ಅಪಾರವಾದ ಭಕ್ತಿಯನ್ನು ತೋರಿಸುತ್ತದೆ. ಇತಿಹಾಸ ಪ್ರಸಿದ್ಧ ಕೋಟೆಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಸಂಗ್ರಹಿಸಿ ಚಿತ್ರಗಳನ್ನು ಸೆರೆ ಹಿಡಿಯುವದು, ನಿಸರ್ಗ ತಾಣಗಳಿಗೆ ಭೇಟಿ ನೀಡುವದು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಸೆರೆಹಿಡಿದು ವನ್ಯ ಮೃಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು. ಇದು ಒಂದು ಪರಿಸರ ಸ್ನೇಹಿ ಭಾವನೆ ತೋರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತಹ ದುಶ್ಚಟಗಳಗೆ ಬಲಿಯಾಗದೆ ತಮ್ಮ ಬಂಗಾರದಂತಹ ರಸಮಯ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಪ್ಯಾಕೇಟ್ಗಳ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿದ್ದರೂ ಸಹ ಅದನ್ನು ಸೇವಿಸುವದು ಎಷ್ಟರಮಟ್ಟಿಗೆ ಸರಿ? ಈ ಕಾರಣಕ್ಕಾಗಿ ಹಲವಾರು ರೀತಿಯ ಗುಟ್ಕಾ ಪ್ಯಾಕೇಟ್ಗಳನ್ನು ಸಂಗ್ರಹಿಸಿ ಯುವಕರಿಗೆ ಅದರ ಬಗ್ಗೆ ಜಾಗೃತಿ ಮೂಢಿಸುವಂತಹ ಹವ್ಯಾಸವಿದೆ. ಇಂದಿನ ಸಂಕೀರ್ಣ ಯುಗದಲ್ಲಿ ಪ್ರತಿಯೊಬ್ಬರಿಗೂ ಸಮಯ ಮಹತ್ವದ್ದಾಗಿದೆ. ಸಮಯ ಕಡಿಮೆ ಇದೆ, ಕೆಲಸದ ಒತ್ತಡ ಜಾಸ್ತಿ ಇದೆ. ಹಿಂದಿನ ಕಾಲದ ಅಂಚೆ ಚೀಟಿಗಳು, ಬಾಂಡ್ ಪೇಪರ್ಗಳು, ಫಸ್ಟ್ ಡೇ ಕವರ್ಗಳು, ದಿನಪತ್ರಿಕೆಯಲ್ಲಿನ ಇತಿಹಾಸ ನಾಯಕರುಗಳ ಘಟನೆ ಬಗ್ಗೆ ಮಾಹಿತಿ ಸಂಗ್ರಹಣೆ ಅವುಗಳನ್ನು ಕಲೆ ಹಾಕುವುದು. ಹಾಗೂ ಅಧಿಕಾರಿಗಳ, ಪ್ರಮುಖರ, ಪ್ರಸಿಧ್ಧ ವ್ಯಕ್ತಿಗಳ, ಮಾಹಿತಿ ಮತ್ತು ಹಸ್ತಾಕ್ಷರ ಪಡೆಯುವುದು ಅವರ ಹವ್ಯಾಸವಾನ್ನಾಗಿ ರೂಢಿಸಿಕೊಂಡಿದ್ದಾರೆ.

ಸುಮಾರು 6 ವರ್ಷಗಳಿಂದ ವಸ್ತುಗಳನ್ನು ಸಂಗ್ರಹಿಸಿರುವ ಇವರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ, ಪ್ರಮುಖವಾಗಿ ಆಥರ್ಿಕ ಸಮಸ್ಯೆ ಇರುವ ಇವರು ತಮ್ಮ ಹವ್ಯಾಸವನ್ನು ಮಾತ್ರ ಬಿಟ್ಟಿಲ್ಲ. ಇವರಿಗೆ ಮನೆಯವರ ಮತ್ತು ಸ್ನೇಹಿತರ ಸಹಕಾರ ಇದೆ. ಇವರು ಸಂಗ್ರಹಿಸಿರುವ ಕೆಲವೊಂದು ಅತ್ಯಮೂಲ್ಯ ನೋಟುಗಳು, ನಾಣ್ಯಗಳು ಕಳುವಾಗಿದ್ದವು. ಪದವಿಯಲ್ಲಿ ಎರಡು ಬಾರಿ ಪ್ರದರ್ಶನ ನೀಡಿ. ಬಿ.ಇಡಿ ಕೋಸರ್್ ಮಾಡುವಾಗ ಅಲ್ಲಮಪ್ರಭು ಮಹಾವಿದ್ಯಾಲಯ ಕರಡಿಯಾಳ್(ಕೆ)ದಲ್ಲಿ ಒಂದು ಸಲ ಪ್ರದರ್ಶನ, ಅದೇ ರೀತಿ ಗುಲಬಗರ್ಾ ವಿಶ್ವವಿದ್ಯಾಲಯದ ಅಂತರ ಮಹಾ ವಿದ್ಯಾಲಯ ಯುವಜನೋತ್ಸವ 2011ರಂದು ಹಿಂದಿನ ಕಾಲದ ಹಲವಾರು ಸಂಗ್ರಹಿತ ಅಂಚೆ ಚೀಟಿಗಳ ಪ್ರದರ್ಶನ ನೀಡಿದ್ದಾರೆ. 50 ವರ್ಷದ ಹಳೆಯ ಅಂಚೆ ಚೀಟಿ ಪತ್ರ ಹಾಗೂ ಪ್ರಸ್ತುತ ಚಲಾವಣೆಯ ಪತ್ರ ಅವರಲ್ಲಿವೆ. 1894 ರಿಂದ 1896, 1898, 1907, 1910, 1946 ರವರೆಗೆ ಬಾಂಡ್ ಪೇಪರ್ಗಳನ್ನು ಸಂಗ್ರಹಿಸಿದ್ದಾರೆ. ಏನಾದರೊಂದು ಹೊಸತನವನ್ನು ಸಾಧಿಸಬೇಕೆಂಬ ಅಛಲವಾದ ಗುರಿ ನನ್ನಲ್ಲಿದೆ ಎಂದು ಆತ ಮನ ಬಿಚ್ಚಿ ಹೇಳುತ್ತಾನೆ. ಹಳೆಯ ವಸ್ತುಗಳ ಸಂಗ್ರಹಣೆಯ ಅಭಿರುಚಿ ಇರುವದು ವಿಶೇಷವಾಗಿದೆ. ಕಸದಿಂದ ರಸ ಎನ್ನವಂತೆ ನಮ್ಮ ಸುತ್ತಮುತ್ತಲಿರುವ ವಸ್ತುಗಳನ್ನು ಬಳಸಿಕೊಂಡು ಹಲವಾರು ಜನ ತಮ್ಮ ಕೌಶಲ್ಯದಿಂದ ಹೊರಹೊಮ್ಮಿದ್ದಾರೆ.

ಯಾವುದೇ ಒಂದು ವಸ್ತುವನ್ನು ಕಾಪಾಡುವದು ಅಷ್ಟೊಂದು ಸುಲಭದ ಕೆಲಸವಲ್ಲ, ಅದಕ್ಕೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಎಲ್ಲಿ ನಮ್ಮ ಪ್ರೀತಿ ಇರುತ್ತದೆಯೋ, ಅಲ್ಲಿ ನಮ್ಮ ಮನಸ್ಸಿರುತ್ತದೆ. ಎಲ್ಲಿ ನಮ್ಮ ಮನಸ್ಸಿರುತ್ತದೆಯೋ, ಅಲ್ಲಿ ನಮ್ಮ ಏಕಾಗ್ರತೆ ಇರುತ್ತದೆ. ಏಕಾಗ್ರತೆ ಒಲಿದರೆ ನಾವು ಅಂದುಕೊಡದ್ದನ್ನು ಸಾಧಿಸುವುದು ಸುಲಭ ಸಾಧ್ಯವಾಗುತ್ತದೆ. ಈತನ ಒಂದು ಹಳೆಯ ವಸ್ತುಗಳ ಸಂಗ್ರಹಣಾ ಕಾರ್ಯ ಪ್ರತಿಯೊಬ್ಬ ವಿದ್ಯಾಥಿಗಳಿಗೆ ಮಾದರಿಯಾಗಬೇಕಾಗಿದೆ. 





-ಅಮರೇಶ ನಾಯಕ, ಜಾಲಹಳ್ಳಿ
ಮೊ-9945268059.

Chaladinda Geluvu (Published)


ಛಲವಿರಲಿ ಗೆಲುವಿರಲಿ...

ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಸ್ಪಧರ್ೆ ಮಾಡಿ ಗೆಲ್ಲುವದು ಅನಿವಾರ್ಯ. ಸರಕಾರ ನಿಗಧಿಪಡಿಸಿರುವ ಸ್ಪಧರ್ಾತ್ಮಕ ಪರೀಕ್ಷೆ ಎದುರಿಸಿ, ಉದ್ಯೋಗ ಗಿಟ್ಟಿಸಿ, ಜೀವನದಲ್ಲಿ ಸಾಫಲ್ಯತೆ ಪಡೆದುಕೊಳ್ಳಬೇಕು ಎಂಬುದು ಎಲ್ಲರ ಆಕಾಂಕ್ಷೆ. ಆದರೆ ಹಲವರು ಮಾತ್ರ ಸ್ಪದರ್ೆ ಎದುರಿಸಲು ತಕ್ಕ ಸಿದ್ದತೆ ಮಾಡಿಕೊಂಡು ಆ ನಿಟ್ಟಿನಲ್ಲಿ ನಿರಂತರಾಗುತ್ತಾರೆ. ಪ್ರಯತ್ನ ಪಡುವವರಿಗೇನೂ ಕಡಿಮೆಯಿಲ್ಲ, ಹೀಗೆ ಪ್ರಯತ್ನಪಟ್ಟವರಿಗೆ ತಕ್ಕುದಾದ ಪ್ರತಿಫಲ ದೊರೆಯುವದರಲ್ಲಿ ಸಂಶಯವೂ ಇಲ್ಲ. ಎಷ್ಟೋ ಜನ ಅದು ಮಾಡಬೇಕು, ಇದು ಮಾಡಬೇಕು ಎಂದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಪಡದೆ ಕಾಲಹರಣ ಮಾಡುವದನ್ನು ಕಾಣುತ್ತೇವೆ.

ಕನರ್ಾಟಕ ಲೋಕ ಸೇವಾ ಆಯೋಗ ನಡೆಸುವ ಎಸ್,ಡಿ,ಎ. ಎಫ್,ಡಿಎ. ಪಿ,ಡಿ,ಒ. ಗಳಂತಹ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಲಕ್ಷ ಲಕ್ಷ ಜನರು ಅಜರ್ಿ ಹಾಕುತ್ತಾರೆ. ಇಂತಹ ಪರೀಕ್ಷೆಯಲ್ಲಿ ಜನ ಸಾಧಿಸಲು ಪ್ರಯತ್ನ ಅಗತ್ಯ. ಪರೀಕ್ಷೆಗೆ ಸಜ್ಜಾಗಲು ಮೊದಲು ಏಕಾಗ್ರತೆಯನ್ನು ಗಳಿಸಿಕೊಳ್ಳಬೇಕು. ಪ್ರೀತಿ ಎಲ್ಲಿರುತ್ತದೆಯೋ, ಅಲ್ಲಿ ಮನಸ್ಸಿರುತ್ತದೆ. ಮನಸ್ಸು ಎಲ್ಲಿರುತ್ತದೆಯೋ ಅಲ್ಲಿ ಏಕಾಗ್ರತೆ ಇರುತ್ತದೆ. ಮೊದಲು ಇಷ್ಟವಿರುವ ವಿಷಯವನ್ನು ಆಯ್ದುಕೊಂಡು ಅದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬೇಕು. ಎಲ್ಲಾ ಪುಸ್ತಕಗಳನ್ನು ಕೂಡಿ ಹಾಕಿಕೊಂಡು ಅಭ್ಯಾಸಕ್ಕೆ ತೊಡಗುವದು ಒಳ್ಳೆಯ ಪದ್ದತಿಯಲ್ಲ. ಏಕೆಂದರೆ ಯಾವುದನ್ನು ಓದಬೇಕು, ಯಾವುದನ್ನು ಬಿಡಬೆಕು ಎಂದು ಗಲಿಬಿಲಿಗೊಳ್ಳುವಂತಾಗುತ್ತದೆ.

ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅಭ್ಯಾಸ ಮಾಡುವದು ಒಳ್ಳೆಯದು. ಕಳೆದು ಹೋದ ಸಮಯ ಮರಳಿ ಬಾರದು ಎಂಬ ಕಟುಸತ್ಯ ಪರೀಕ್ಷಾಥರ್ಿ ಅರಿತುಕೊಳ್ಳಬೇಕು. ಜೀವನದಲ್ಲಿ ಸಮಯ ಪಾಲನೆ ಅತ್ಯಗತ್ಯ. ಸಮಯದ ಮಹತ್ವ ತಿಳಿಯಬೇಕಾದರೆ ವರ್ಷಪೂತರ್ಿ ಓದಿಕೊಂಡು ಪರಿಕ್ಷೆಯಲ್ಲಿ ಫೇಲಾದ ವಿದ್ಯಾಥರ್ಿಯನ್ನು, ಬಸ್ಸು ನಿಲ್ದಾಣಕ್ಕೆ ಐದು ನಿಮಿಷ ತಡವಾಗಿ ಬಂದು ಬಸ್ಸು ತಪ್ಪಸಿಕೊಂಡವನನ್ನೂ, ಟಿಕೇಟು ಖರೀದಿಸಲು ನಿಂತು ಒಂದೇ ನಿಮಿಷದಲ್ಲಿ ರೈಲು ತಪ್ಪಿಸಿಕೊಂಡಾತನನ್ನು, ಓಲಂಪಿಕ್ಸ್ ಓಟದಲ್ಲಿ ಒಂದೇ ಸೆಕೆಂಡಿನಲ್ಲಿ ಚಿನ್ನದ ಪದಕ ಕಳೆದುಕೊಂಡ ಆಟಗಾರರನ್ನು ಕೇಳಬೇಕು. ಇದರಿಂದ ಸಮಯದ ಮಹತ್ವದ ಅರಿವಾಗುತ್ತದೆ, ವಿನಾಕಾರಣ ಸಮಯ ಕಳೆಯಲು ಪ್ರಯತ್ನಿಸಬೇಡಿ, ಇದ್ದ ಸಮಯದಲ್ಲೇ ಸಾಧಿಸುವದನ್ನು ಕಲಿತುಕೊಳ್ಳಿ.

 ಯಾವುದೇ ಕೆಲಸ ಅಥವಾ ಅಭ್ಯಾಸ ಮಾಡುವದನ್ನು ಮುಂದೂಡುವ ಪ್ರವೃತ್ತಿ ಸಲ್ಲದು. ನಾಳೆ ಮಾಡುವ ಕೆಲಸ ಇಂದೇ ಮಾಡು, ಇಂದು ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡಿ. ಜೀವನದಲ್ಲಿ ಯಶಸ್ವಿ ಸಾಧಿಸಿರುವ ವ್ಯಕ್ತಿಗಳು ಧೈನಂದಿನ ಕೆಲಸಗಳನ್ನೆ ಭಿನ್ನ ಭನ್ನ ರೀತಿ ಮಾಡಿ ಯಶ ಸಾಧಿಸಿದ್ದಾರೆ. ಸಾಧಿಸಬೇಕೆನ್ನುವ ಛಲ, ಆತ್ಮವಿಶ್ವಾಸ, ದೃಡನಿಧರ್ಾರ ಇದ್ದರೆ ಜೀವನದಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ. ಕದಿಯಲು ಸಾಧ್ಯವಾಗದ ವಸ್ತುವೆಂದರೆ ಜ್ಞಾನವೊಂದೆ, ಜ್ಞಾನ ಸಂಪಾದಿಸಿದರೆ ಎಂತಹ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸುವದು ಸುಲಭ. ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಪಸರಿಸಬೇಕು, ಪ್ರತಿಯೊಬ್ಬರಿಗೂ ತಿಳಿದುಕೊಳ್ಳೂವ ಜಿಜ್ಞಾಸೆ ಇರಬೇಕು, ತಿಳಿಸುವ ಆಸೆ ಇರಬೇಕು, ಕಲಿಕೆ ನಿರಂರವಾಗಿರಬೇಕು. ಇಂದಿನ ಯುವಜನತೆಯಲ್ಲಿ ಆತ್ಮವಿಶ್ವಾಸ ಇಲ್ಲದಿರುವದೇ ಬಹುದೊಡ್ಡ ಸಮಸ್ಯೆ.

 ಯುವಜನತೆಯಲ್ಲಿ ಉತ್ಸಾಹ ಪುಟಿದೇಳಬೇಕು, ತನ್ನಲ್ಲಿ ತನಗೆ ನಂಬಿಕೆ ಹುಟ್ಟಬೇಕು, ತನ್ನಲ್ಲೇ ಅಡಗಿರುವ ಶಕ್ತಿಯನ್ನು ಪ್ರಚುರಪಡಿಸಿ ಆತ್ಮ ಬಲದಿಂದ ಮುನ್ನುಗ್ಗಿ ಶ್ರದ್ದೆಯಿಂದ ಕಾರ್ಯ ಸಾಧಿಸಬೇಕು. ಶ್ರದ್ಧೆಯೇ ಸಿದ್ದಿಯ ಕೀಲಿ ಕೈ ಯಾವುದೇ ಕೆಲಸವನ್ನು ಮುಂದೂಡುವ ಪ್ರವೃತ್ತಿ ಸಲ್ಲದು. ಅದು ಅತ್ಯಂತ ಭಯಂಕರ ಲಕ್ಷಣ ಒರ್ವನಲ್ಲಿ ಸಾಮಥ್ರ್ಯವಿದ್ದೂ ಹಿಂದುಳಿಯುತ್ತಿದ್ದರೆ ಅದಕ್ಕೆ ಕಾರಣ ಮುಂದೂಡುವ ಪ್ರವೃತ್ತಿ. ಕೆಲಸವನ್ನು ಪದೇ ಪದೇ ಮುಂದೂಡುವದನ್ನು ರೂಢಿಸಿಕೊಂಡರೆ ಸೋಮಾರಿತನ ಹೆಗಲೇರಿ ಗಹಗಹಿಸುತ್ತದೆ. ಇದು ಪ್ರತಿಯೊಬ್ಬರಿಗೂ ಅನ್ವಯವಾಗುವ ಮಾತು. ಒಂದು ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ಓದುವದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ.



-ಅಮರೇಶ ನಾಯಕ ಜಾಲಹಳ್ಳಿ
Cell-9945268059



Learning English (Published)


ಇಂಗ್ಲೀಷ ಕಲಿಯಿರಿ ಬೆಳೆಯಿರಿ..

 ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಇಂಗ್ಲೀಷ ಕಲಿಕೆ ಅನಿವಾರ್ಯವಾಗಿದೆ. ಇಂಗ್ಲೀಷ ಅಂತರಾಷ್ಟ್ರಿಯ ಸಂಪರ್ಕ ಭಾಷೆಯಾಗಿರುವದರಿಂದ ಪ್ರತಿ ಕ್ಷೇತ್ರದಲ್ಲೂ ಇದು ಅತ್ಯವಶ್ಯಕ.ಹೀಗಾಗಿ ಪ್ರತಿಯೋರ್ವ ಉದ್ಯೋಗಕಾಂಕ್ಷಿ ಇಂಗ್ಲೀಷ ಜ್ಞಾನ ಹೊಂದುವದು ಅನಿವಾರ್ಯ ಎಂಬಂತಾಗಿದೆ. ಪ್ತಸ್ತುತ ದಿನಗಳಲ್ಲಿಖಾಸಗಿ ಕಂಪನಿಗಳು ಚನ್ನಾಗಿ ಇಂಗ್ಲೀಷ ಮಾತನಾಡುಬಲ್ಲ ಮತ್ತು ಕಂಪ್ಯೂಟರ್ ಜ್ಞಾನದಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದ್ದಾರೆ. ಇದಕ್ಕೆ ಕಾರಣ ಪರಿಪಕ್ವತೆ. ಇದು ಸಹಜ ಕೂಡ ಹೌದು. ಪದವಿ ಪೂರೈಸಿರುವ ಕೆಲವರು ತಮಗೆ ಇಂಗ್ಲೀಷ್ ಬರುವದಿಲ್ಲವೆಂದು ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಬಲ್ಲವರ ಪ್ರಕಾರ ಇಂಗ್ಲೀಷ್ ಕಲಿಕೆ ಮತ್ತು ಮಾತನಾಡುವದು ಅಷ್ಟೊಂದು ದೊಡ್ಡ ಸಮಸ್ಯೆಯೇನಲ್ಲ. ಕಲಿಯುವ ಮುನ್ನ ಕಠಿಣ ಎನಿಸಿದರೂ ಕಲಿತ ಮೇಲೆ ಸರಳವಾಗಿ ಕಾಣುತ್ತದೆ. ಅಭ್ಯಾಸದಿಂದ ಎಲ್ಲವೂ ಸಾಧ್ಯ.

 ಮೊದ ಮೊದಲು ಇಂಗ್ಲೀಷ ಮಾತನಾಡುವಾಗ ತಪ್ಪಾಗುವದು ಸಹಜ, ಅದರಿಂದ ಎದೆಗುಂದದೆ ತಪ್ಪಿಲ್ಲದೇ ಮಾತನಾಡಲು ಪ್ರಯತ್ನಿಸಿದಾಗ ತಪ್ಪುಗಳು ಕಡಿಮೆಯಾಗತ್ತವೆ. ತಪ್ಪುಗಳು ಹೆಚ್ಚಾಗಿದ್ದರೂ ನಂತರದ ದಿನಗಳಲ್ಲಿ ತಪ್ಪುಗಳು ಕಡಿಮೆಯಾಗಿ ಭಾಷೆಯಲ್ಲಿಯೂ ಪ್ರಬುದ್ಧತೆ ಕಂಡುಬರುತ್ತದೆ. ಕಲಿಕೆಯ ಬಗೆಗಿನ ವಿಚಾರಗಳು ನವೀನವಾಗಿರಲಿ, ಯೋಚನೆ, ಪ್ರಯತ್ನಗಳಲ್ಲಿ ಹುರುಪಿರಲಿ, ಯೋಚಿಸುವದನ್ನು, ಪ್ರಯತ್ನಪಡುವದನ್ನು ನಿಲ್ಲಿಸಿದರೆ ವಿಚಾರಗಳಿಗೆ, ವ್ಯಕ್ತಿತ್ವಕ್ಕೆ ತುಕ್ಕು ಹಿಡಿಯುತ್ತದೆ. ಇಂಗ್ಲೀಷ ಸರಳವಾಗಿ ಕಲಿಯಲು ಮೊದಲು ಮಾತನಾಡುವದನ್ನು ರೂಢಿ ಮಾಡಿಕೊಳ್ಳಬೇಕು. ಕಷ್ಟ ಎಂದು ಸುಮ್ಮನಿದ್ದರೆ ಅದು ಮತ್ತಷ್ಟು ಕ್ಲಿಷ್ಟಕರವಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಸಿದ್ದತೆ ಮಾಡಿಕೊಂಡು ಅದೇ ರೀತಿ ಅಭ್ಯಾಸ ಮುಂದುವರೆಸುತ್ತಾ ಬರಬೇಕು, ಅಭ್ಯಾಸವು ನಿಧಾನ ಮತ್ತು ನಿರಂತರ ಕ್ರಿಯೆಯಾಗಿರಬೇಕು.

ಈಜು ಕಲಿಯಬೇಕೆಂದುಕೊಂಡು ಬಾವಿ ಅಥವಾ ನದಿಯ ದಂಡೆಯ ಮೇಲೆ ಕುಳಿತರೆ ಈಜು ಕಲಿಯಲು ಸಾಧ್ಯವಿಲ್ಲ. ಈಜು ಕಲಿಯಬೇಕು ಎಂದಾದಲ್ಲಿ ಮೊದಲು ನೀರಿಗೆ ಧುಮುಕಬೇಕು, ಪ್ರಥಮವಾಗಿ ಕಷ್ಟವಾದರೂ ಕಾಲು ಬಡಿದಂತೆ ಅಭ್ಯಾಸ ಬಲದಿಂದ ಸರಳವಾಗಿ ಈಜು ಕಲಿಯಬಹುದು. ಇದು ಪ್ರಕೃತಿ ನಿಯಮ.. ಹೀಗೆಯೇ ಯಾವುದೇ ಭಾಷೆಯನ್ನು ಸರಾಗವಾಗಿ ಕಲಿತು ಮಾತನಾಡಬಲ್ಲ ಅನುಕರಣಿಯ ಶಕ್ತಿ ಎಲ್ಲರಲ್ಲೂ ಇರುತ್ತದೆ. ಅದನ್ನು ಬಳಸಿಕೊಂಡು ಏನನ್ನಾದರೂ ಸಾಧಿಸಬಹುದಾಗಿದೆ. ಎಲ್ಲಾ ಶಕ್ತಿಗಳೂ ನಮ್ಮಲ್ಲೇ ಅಡಗಿವೆ, ಅದನ್ನು ಪ್ರಚುರಪಡಿಸುವದು ನಮ್ಮಲ್ಲೇ ಅಡಗಿದೆ. ಪ್ರಪಂಚದಾದ್ಯಂತ ಸುಮಾರು ಮೂರು ಸಾವಿರದ ಐದುನೂರು ಭಾಷೆಗಳಿವೆ., ಅದರಲ್ಲಿ ಕೇವಲ ಐನುರು ಭಾಷೆಗಳು ಮಾತ್ರ ಲಿಪಿ ಹೊಂದಿವೆ. ಭಾಷೆಯ ಕಲಿಕೆಗೆ ಅನುಕರಣೆ ತುಂಬಾ ಅಗತ್ಯ.

 ನಾವು ಮಾತನಾಡುವ ಸಂದರ್ಭದಲ್ಲಿ ಎಷ್ಟೋ ಸಲ ಇಂಗ್ಲೀಷ ಶಬ್ದಗಳನ್ನು ಬಳಸುತ್ತಿರುತ್ತೇವೆ, ಎಷ್ಟೋ ಶಬ್ದಗಳಿಗೆ ಇರುವ ಕನ್ನಡದ ಅರ್ಥಗಳೇ ನಮಗೆ ತಿಳಿದಿರುವದಿಲ್ಲ. ಆದರೂ ಇಂಗಿಷ್ ಶಬ್ದಗಳನ್ನೇ ಬಳಸುತ್ತಿರತ್ತೇವೆ, ಅದೇ ರೀತಿ ಮಾತನಾಡುವ ಸಂದರ್ಭದಲ್ಲಿ ಬಳಸುವ ಶಬ್ದಗಳನ್ನೇ, ವ್ಯಾಕರಣಬದ್ದವಾಗಿ ಬಳಕೆ ಮಾಡಲು ಶುರು ಮಾಡಿದರೆ ಇಂಗ್ಲೀಷ ಭಾಷೆಯನ್ನು ರೂಢಿಸಿಕೊಳ್ಳುವದು ಅಷ್ಟು ಕಷ್ಟಕರವಲ್ಲ. ಭಾಷೆ ಕಲಿಕೆಯ ಸಂದರ್ಭದಲ್ಲಿ ನಿರಾಶೆ ಭಾವನೆ ತೊರೆದು ಆಶಾಭಾವನೆಯನ್ನು ಬೆಳೆಸಿಕೊಳ್ಳಬೇಕು, ಭಾಷೆ ಕಲಿಕೆಗೆ ವಯಸ್ಸಿನ ಮಾನದಂಡವಿಲ್ಲ. ಈ ಪ್ರಪಂಚದಲ್ಲಿ ಎಲ್ಲಾ ಹಂತಗಳು ಕಲಿಯುವದೇ ಆಗಿವೆ.
ಕಲಿಕೆಯ ಸಂದರ್ಭದಲ್ಲಿ ನಾವು ಮಕ್ಕಳಲ್ಲಿ ಮಕ್ಕಳಾಗಬೇಕು,

ಇಂಗ್ಲೀಷ್ ಕಲಿಕೆಗೆ ಖಾಸಗಿ ಸಂಸ್ಥೆಗಳು ಮುಂದಾಗಿವೆ. ಇವುಗಳ ಮೂಲಕವೂ ಕಲಿಯಬಹುದಾಗಿದೆ. ಭಾಷೆ ಕಲಿಕೆಯ ಸಂದರ್ಭದಲ್ಲಿ ಕಲಿತಿದ್ದನ್ನು ಮರೆಯುವಂತಾಗಬಾರದು. ಕಲಿಯುವ ಭಾಷೆ ದಿನಿತ್ಯದ ಸಂವಹನ ಕ್ರಿಯೆಯನ್ನಾಗಿ ಪರಿವರ್ತನೆ ಮಾಡಿಕೊಂಡಾಗ ಕಲಿಕೆ ಮತ್ತಷ್ಟು ಸರಳವಾಗುತ್ತದೆ. ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಇಂಗಿಳಷ್ ಕಲಿಕೆ ಅನಿವಾರ್ಯ. ಸಂಪರ್ಕ-ಸಂವಹನ ಕ್ರಿಯೆ ಬಲವಾಗಿದ್ದಷ್ಟು ವ್ಯಕ್ತಿಗೆ ತನ್ನನ್ನು ಗುರುತಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಸಾಧ್ಯ. ಭಾಷೆಯ ಜ್ಞಾನ ಇರದಿದ್ದರೆ ಉದ್ಯೋಗಕ್ಕೂ ಸಂಚಕಾರ. ಇಂಗ್ಲೀಷ ಕಬ್ಬಿಣದ ಕಡಲೆಯೇನೂ ಅಲ್ಲ. ಇಂಗ್ಲೀಷ್ ಕಲಿತು ಅರಳು ಹುರಿದಂತೆ ಮಾತನಾಡಬಹುದಾದ ಶಕ್ತಿ ನಮ್ಮಲ್ಲಿದೆ ಎಂಬುದನ್ನು ತೋರಿಸಿ ಕೊಡಬೇಕು.



-ಅಮರೇಶ ನಾಯಕ ಜಾಲಹಳ್ಳಿ
Cell-9945268059

Friday, 30 December 2011

Dreams (Published)



ಕನಸು ಕನಸಾಗಿ ಉಳಿಯದಿರಲಿ..

 ನಾ ವು ಏನಾದರೊಂದನ್ನು ಸಾದಿಸಬೇಕಾದರೆ ಬರೀ ಕನಸು ಕಾಣುತ್ತಾ ಕುಳಿತರೆ ಸಾಧ್ಯವಾಗುವದಿಲ್ಲ, ಕಂಡ ಕನಸನ್ನು ನನಸು ಮಾಡಿಕೊಳ್ಳುವ ಬಗ್ಗೆ ವಿಚಾರ ಮಾಡುತ್ತಾ, ಅದೇ ಪ್ರಕಾರ ಕಾರ್ಯ ಮಾಡುತ್ತಾ  ಬರಬೇಕಾಗುತ್ತದೆ. ಕಾರ್ಯ ಪ್ರವೃತ್ತರಾದರೆ ಅರ್ಧದಷ್ಟು ಕೆಲಸ ಮುಗಿದಂತೆಯೇ, ಆರಂಭದಲ್ಲಿ ಉತ್ಸಾಹ ತೋರಿ ಬರು ಬರುತ್ತಾ ಉತ್ಸಾಹ ಕಡಿಮೆಯಾದರೆ... ಕಾರ್ಯವು ಅಪೂರ್ಣವಾಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಒಳ್ಳೆಯ ಆಲೋಚನೆ, ಕನಸು ಬಂದೇ ಬರುತ್ತದೆ, ತಕ್ಷಣ ಅದನ್ನು ಮರೆತು ಹೋಗದಂತೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವದು ಉತ್ತಮ, ಆ ಕನಸು ನನಸಾಗುವ, ಆಲೋಚನೆ ಈಡೇರುವ ಕಾಲ ಬರಬಹುದು, ಅದನ್ನು ನೀವೇ ಮಾಡಬೇಕು, ಅದೊಂದು ಕನಸು ಎಂದು ಸುಮ್ಮನಿದ್ದರೆ ಜೀವನದಲ್ಲಿ ಯಾವುದನ್ನು ಸಾಧಿಸಲು ಸಾಧ್ಯವಾಗುದಿಲ್ಲ.

 ಕನಸಿನ ಬಗ್ಗೆ ಮಹಾನ್ ವಿದ್ವಾಂಸರು, ತತ್ವಜ್ಞಾನಿಗಳು ಈ ರೀತಿ ಹೇಳಿದ್ದಾರೆ. ನಾವು ಕಾಣುವ ಕನಸು ಕನಸಾಗಿ ಉಳಿಯಬಾರದು, ಕನಸನ್ನು ನನಸು ಮಾಡುವವರು ನಾವೇ ಆಗಬೇಕು...   ಮಲಗಿದ್ದಾಗ ಕಾಣುವ ಕನಸು ಕನಸಲ್ಲ, ಯಾವ ಕನಸು ಮಲಗಲು ಬಿಡುವದಿಲ್ಲವೋ ಅದು ಕನಸು, ನಾವು ಕಂಡ ಕನಸು ನನಸಾಗುವ ತನಕ ಪ್ರಯತ್ನ ಮಾಡುವದಷ್ಟೇ ನಮ್ಮ ಕೆಲಸ. ಸಾಧನೆಯತ್ತ ಸಾಗಬೇಕಾದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯ ಮಾಡಬೇಕು, ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ, ಮನುಷ್ಯನ ಆಲೋಚನೆಗಳೇ, ದೇಶವನ್ನು ಆಳುತ್ತವೆ ಎನ್ನುವದು ಸತ್ಯ.

ಮನುಷ್ಯನಿಗೆ ಕನಸು ಬೀಳುವದು ಸಾಮಾನ್ಯ, ಆ ಕನಸುಗಳೇ ಅವನ ಅವನ ಜೀವನದ ಹಾದಿಯನ್ನು ಬದಲಾಯಿಸಬಲ್ಲವು, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ದಿಟ್ಟ ನಿಧಾರ ಕೈಗೊಳ್ಳಬೇಕು, ನಾವು ಯಾವ ಬೀಜ ಬಿತ್ತುತ್ತೇವೋ ಅದಕ್ಕೆ ಸಂಬಂಧಪಟ್ಟ ಸಸಿ ಮಾತ್ರ ಮೊಳಕೆಯೊಡೆಯುತ್ತದೆ, ಹಾಗೆಯೇ ನಾವು ಏನನ್ನು ಆಲೋಚಿಸುತ್ತೇವೆಯೋ ಫಲ ಕೂಡ ಹಾಗೆ ಇರುತ್ತದೆ. ನಕಾರಾತ್ಮಕವಾಗಿ ಆಲೋಚಿಸಿದರೆ ಫಲಿತಾಂಶವು ನಕಾರಾತ್ಮಕವಾಗಿಯೇ ಇರುತ್ತದೆ, 'ನಾನು ಮಾಡಬಲ್ಲೆ, ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿ ಮೂಡಿದರೆ ... ಬಾಲ್ಯದಿಂದಲೂ ನಮ್ಮ ಮೆದುಳಿನಲ್ಲಿ ವಿವಿಧ ರೂಪಗಳಲ್ಲಿ ನಿಕ್ಷಿಪ್ತವಾಗಿರುವ ಶಕ್ತಿಯ ವಿಕಾಸಗೊಂಡು , ಹೊರಹೊಮ್ಮಿ ನಮ್ಮನ್ನು ಕಾಯರ್ೋನ್ಮುಖರನ್ನಾಗಿ ಮಾಡುತ್ತದೆ. ಸಕಾರಾತ್ಮಕ ಆಲೋಚನೆಗಳೇ ಗೆಲುವಿನ ರಹಸ್ಯಗಳೆಂದು ಹೇಳಬಹುದು.

 ಒಬ್ಬ ಬಡತನ ಕುಟುಂಬದ ವ್ಯಕ್ತಿಗೆ ವಿಜ್ಞಾನ ಶಾಸ್ತ್ರದ ಅಧ್ಯಯನ ಮಾಡುವ ಕೋರಿಕೆ ತೀವ್ರವಾಗಿತ್ತು. ಆ ದಿನಗಳಲ್ಲಿ ವಿಜ್ಞಾನ ಓದುವದೆಂದರೆ, ನವಾಬರ ಸಂತಾನಕ್ಕೆ ಸೀಮಿತವಾಗಿತ್ತು, ಆದರೆ ಆತನಲ್ಲಿ ಆಸೆ ಸಾಯಲಿಲ್ಲ, ತಾನೊಬ್ಬ ಉನ್ನತ ವಿಜ್ಞಾನಿಯಾಗಬೇಕೆಂಬ ಆಸೆ ಹತ್ತಿಕ್ಕಲಿಲ್ಲ, ಆ ಅಭಿಲಾಷೆಯಿಂದ ತನ್ನ ಮನಸ್ಸಿನ ತುಂಬ ಅದೇ ಆಲೋಚನೆಗಳನ್ನು ತುಂಬಿಕೊಂಡ ಹಠಾತ್ತನೆ ಆತನಿಗೊಂದು ಆಲೋಚನೆ ಹೊಳೆಯಿತು, ದೊಡ್ಡ ವಿಜ್ಞಾನಿ ಎಂದು ಹೆಸರು ಪಡೆದಿದ್ದ ಹ್ಯಾಂಘ್ರೀ ಡೇವಿಗೆ ನೇರವಾಗಿ ಕಾಗದ ಬರೆದ, ಆ ಪತ್ರದಲ್ಲಿ ತನ್ನ ವ್ಯಥೆಯನ್ನು ವಿವರಿಸಿ, ತನ್ನ ಕನಸು ನನಸಾಗಿಸಿಕೊಳ್ಳುವ ಮಾರ್ಗ ಏನಾದರೂ ಇದ್ದರೆ ಹೇಳಿ ಪುಣ್ಯ ಕಟ್ಟಿಕೊಳ್ಳುವಂತೆ ಪ್ರಾಥಿಸಿದ, ಡೇವಿ ಆ ಪತ್ರವನ್ನು ಓದಿ ಪ್ರತಿಕ್ರಿಯಿಸಿದರು, ಆತನಿಗೆ ಸಂದರ್ಶನಕ್ಕೆ ಬರುವಂತೆ ಆಹ್ವಾನಿಸಿದರು, ಸಂದರ್ಶನದಲ್ಲಿ ಆತನ ಜಿಜ್ಞಾಸೆಯನ್ನು ಗಮನಿಸಿದ ಡೇವಿ, ಆತನನ್ನು ತನ್ನ ಸಹಾಯಕನಾಗಿ ನೇಮಿಸಿಕೊಂಡ, ಅಲ್ಲಿ ಶಿಕ್ಷಣ ಯಶಸ್ವಿಯಾಗಿ ಸಾಗಿತು, ತಾನು ಪ್ರೀತಿಸಿದ ವಿಜ್ಞಾನ ಶಾಸ್ತ್ರದ ಅಧ್ಯಯನಕ್ಕೆ ಶ್ರಮಿಸಿದ, ತನ್ನ ಜೀವನವನ್ನು ಮುಡುಪಾಗಿರಿಸಿದ, ಮುಂದೆ ಶ್ರೇಷ್ಠ ವಿಜ್ಞಾನಿಯಾದ, ಆ ವ್ಯಕ್ತಿಯೇ ಮೈಖೆಲ್ ಫ್ಯಾರಡೇ, ಫ್ಯಾರಡೇಗೆ ಏನಾದರೂ ಸಕಾರಾತ್ಮಕ ದೃಷ್ಟಿ ಇಲ್ಲದೆ ಹೋಗಿದ್ದರೆ ವಿದ್ಯುತ್ ಸಂಶೋಧನಾ ರಂಗದಲ್ಲಿ ಬೆಳಕು ಬೀರುತ್ತಲೇ ಇರಲಿಲ್ಲ.

 ದಿನವೆಲ್ಲಾ ಮನುಷ್ಯ ಏನೆಲ್ಲಾ ಕುರಿತು ಆಲೋಚಿಸುತ್ತಾನೋ ಅದೇ ಆತನ ವ್ಯಕ್ತಿತ್ವಕ್ಕೆ ನಿದರ್ಶನವಾಗಿ ಬದಲಾವಣೆ ಹೊಂದುತ್ತದೆ. ವಿಜೇತರಾಗಿ ಜೀವಿಸಲು ನಿಮಗೆ ಅಗತ್ಯವಾದ ಆ ಸ್ಪೂತರ್ಿ-ಪ್ರೋತ್ಸಾಹ ಸಮೃದ್ದವಾಗಿ ಲಭಿಸಿದಾಗಲೇ ಕನಸನ್ನು ನನಸಾಗಿಸಿಕೊಳ್ಳುತ್ತಾ, ಅಸಾಧ್ಯವೆನಿಸಿದ್ದನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.

-ಅಮರೇಶ ನಾಯಕ ಜಾಲಹಳ್ಳಿ
-9945268059

Farmer (Published)


ರೈತನ ಕಣ್ಣೊರೆಸಿ




ಇಂದು ಎಲ್ಲರೂ ಪಾಶ್ಚಿಮಾತ್ಯ ಬೆಳವಣಿಗೆಗೆ ಮಾರು ಹೋಗುತ್ತಿದ್ದಾರೆ, ನೂತನ ಯುಗದಲ್ಲಿ ತಂತ್ರಜ್ಞಾನ ತನ್ನದೇ ಆದ ಪ್ರಭಾವ ಬೀರುತ್ತದೆ. ಎಲ್ಲರೂ ಆಸೆಯಿಂದ ಹಣ ಗಳಿಕೆ ಮಾರ್ಗ ಹುಡುಕುತ್ತಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ ಅನ್ನ ನೀಡುವ ಭೂ ತಾಯಿಯನ್ನೇ ಮರೆತಿದ್ದಾರೆ. ಹಣದ ಆಸೆಗಾಗಿ ಭೂಮಿ ಮಾರುತ್ತಿದ್ದಾರೆ, ಕೃಷಿ ಮರೆಯುತ್ತಿದ್ದಾರೆ.

ಭಾರತ ಹಳ್ಳಿಗಳ ದೇಶ ಹಾಗೂ 'ಕರಷಿ ಪ್ರಧಾನ ರಾಷ್ಟ್ರ' ಮುಂದುವರೆಯುತ್ತಿರುವ ದೇಶ. ಅದಕ್ಕೆ ಕೃಷಿಯೇ ಕಾರಣ. ಉತ್ತಿ, ಬಿತ್ತಿ ಬೆಳೆದ ಬೀಜಗಳು, ಧಾನ್ಯಗಳು ರಫ್ತಾಗುತ್ತವೆ. ಎಲ್ಲರಿಗೆ ಅನ್ನ ನೀಡಿ ಕಣೊರೆಸುವವನು ರೈತ, ಇಂದು ರೈತನೇ ಕಣ್ಣಿರಿಡುವ ಪರಿಸ್ಥಿತಿ ಉಂಟಾಗಿದೆ. ಸಾಲ ಮಾಡಿ ಬೆಳೆದ ಬೆಲೆಯಿಲ್ಲ. ಮಧ್ಯವತರ್ಿಗಳ ಆವಳಿ ಹೆಚ್ಚಾಗುತ್ತದೆ.

ರೈತನ ಉತ್ಪನ್ನಗಳಿಗೆ ನಿಗಧಿತ ಬೆಲೆ ನೀಡುವ ಕಾರ್ಯವನ್ನು ಸಕರ್ಾರ ಮಾಡಬೇಕಾಗಿದೆ. ಬೆಳೆಗೆ ತಕ್ಕ ಬೆಲೆ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ಸಾಮಾನ್ಯವಾಗುತ್ತಿದೆ. ಧಾನ್ಯದ ಬೆಲೆ ಗಗನಕ್ಕೇರಿ ಬಡತನ, ಹಸಿವಿನಿಂದ ಜನ ಆತ್ಮಹತ್ಯೆ ಮಾಡಿಕೊಇಳ್ಳುವ ಪರಿ ಇನ್ನೊಂದು ಕಡೆ. ಈ ವ್ಯವಸ್ಥೆಯಿಂದ ಹೊರಬರಬೇಕಾದರೆ ಯುವಕರು ಎಚ್ಚೆತ್ತುಕೊಳುಬೇಕು. ಇಲ್ಲವಾದರೆ ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದರೆಂಬಂತೆ ಆಗುತ್ತದೆ.

ಓದು ನೌಕರಿಗಾಗಿ ಅಲ್ಲ ಜ್ಞಾನಕ್ಕಾಗಿ, ಎಷ್ಟೋ ಜನ ಡಿಗ್ರಿ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸಫಲರಾದವರೂ ಇದ್ದಾರೆ. ವಿದ್ಯಾಥರ್ಿಗಳು ಹೊ ಹೊಸ ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಭಾಗವಹಿಸಿದರೆ ದೇಶಕ್ಕೆ ಅನ್ನದ ಬರ ಇರುವದಿಲ್ಲ. ಈ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯ.

ಕಣ್ತೆರೆದು ರೈತನಾದ ಅನ್ನದಾತನನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಬೇಕಾಶಗಿದೆ. ದೇಶ ಕಾಪಾಡುವವನು ಸೈನಿಕನಾದರೆ, ಅನ್ನದಾತನಾಗಿರುವ ರೈತನನ್ನು ಕಾಪಾಡುವದು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ರೈತನನ್ನು ಕಾಪಾಡಿ ಕೃಷಿಗೆ ಹೆಚ್ಚು ಒತ್ತು ನೀಡುವದು ಆದ್ಯ ಕರ್ತವ್ಯ.



-ಅಮರೇಶ ನಾಯಕ ಜಾಲಹಳ್ಳಿ 
Cell-9945268059               

Pratibhe


ಪ್ರತಿಭೆ ಗುರುತಿಸಿ ಸ್ಪೂತರ್ಿಯಾಗಿ..

 ಪ್ರತಿಯೊಬ್ಬರೂ ಜೀವನದಲ್ಲಿ ಇನ್ನೊಬ್ಬರಿಂದ ಸಹಾಯ ಪಡೆಯಬೇಕಾದ ಸ್ಥಿತಿ ಒದಗಬಹುದು, ಯಾವ ಮನುಷ್ಯನನ್ನು ಕೀಳಾಗಿ ಕಾಣುವ, ಉದಾಸೀನ ತೋರುವ ಮನೋಭಾವ ಇರಬಾರದು. ಅವರು ಹೇಗೆ ಇರಲಿ, ಆತ್ಮೀಯತೆ, ಮಾನವೀಯತೆಯಿಂದ ಕಾಣಬೇಕಾದುದು ಮನುಷ್ಯನ ಧರ್ಮ. ಯಾರೇ ಆದರೂ ಇನ್ನೊಬ್ಬರಿಗೆ ಸಹಾಯ ಮಾಡುವಂತಹ ಗುಣ ಹೊಂದಬೇಕು. ಸಹಾಯ ಮಾಡಲು ಮುಂದಾಗಬೇಕು, ಆಗ ಮಾತ್ರ ಮತ್ತೊಬ್ಬರು ನಮಗೆ ನೆರವಾಗಲು ಬಯಸುತ್ತಾರೆ. ನಮಗೆ ಆ ಇಚ್ಚೆ ಇಲ್ಲದಿದ್ದರೆ, ಇನ್ನೊಬ್ಬರು ಬಂದು ಸಹಾಯ ಮಾಡಲು ಹೇಗೆ ಸಾಧ್ಯ? ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕಾಗುತ್ತದೆ, ಪ್ರತಿಫಲಾಫೇಕ್ಷೆ ಸಲ್ಲದು, ಇದೊಂದು ಹೆಲ್ಪಿಂಗ್ ನೇಚರ್, ಈ ಗುಣವನ್ನು ಎಲ್ಲರೂ ಬೆಳೆಸಿಕೊಂಡರೆ ಸಮಯ, ಸಂದರ್ಭ ಬಂದಾಗ, ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವವರು ಇರುತ್ತಾರೆ.

ಪ್ರತಿಯೊಬ್ಬರನ್ನು ಅವಲಭಿಸಿ ಜೀವಿಸುವದರಿಂದ ಜವಾನನಿಂದ, ದಿವಾನರತನಕವೂ ಸಹಾಯ ಕೇಳಬೇಕಾದ ಪರಿಸ್ಥಿತಿ ಉಂಟಾಗಬಹುದು, ಆದ್ದರಿಂದ ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣುವದು ಸರಿಯಲ್ಲ, ಯಾವ ಹುತ್ತಿನಲ್ಲಿ ಯಾವ ಹಾವು ಇರುತ್ತದೆಂದು ಯಾರು ಬಲ್ಲರು. ಪ್ರತಿಯೊಬ್ಬ ಮನುಷ್ಯನಲ್ಲಿ ಪ್ರತಿಭೆ ಇರುತ್ತದೆ, ಆ ಪ್ರತಿಭೆಯಿಂದ ಆತ ಬೆಳೆಯಲು ಸಹಾಯ ಮಡಬೇಕು. ಪ್ರತಿಭೆ ಗುರುತಿಸಿ ಪರಿಚಯಿಸುವದು, ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರಗು ನೀಡಿ. ಆತನ ಜೀವನದಲ್ಲಿ ಆಶಾಕಿರಣ ಬೆಳಗಿಸಿದಂತಾಗುತ್ತದೆ, ನಮ್ಮ ಬೆನ್ನನ್ನು ನಾವೇ ನೋಡಿಕೊಳ್ಳುವ ಸಾಧ್ಯತೆ ಇಲ್ಲ, ಇನ್ನೊಬ್ಬರು ಹೇಳಿದಾಗ ನಮ್ಮ ಬೆನ್ನ ಮೇಲಿರುವ ಕಲೆಗಳು ತಿಳಿಯುವಂತೆ, ನಮ್ಮಲ್ಲಿ ಹುದುಗಿರುವ ಕಲೆ ನಮಗೆ ಗೊತ್ತಾಗುವದಿಲ್ಲ, ಅದು ಬೇರೆಯವರಿಗೆ ತಿಳಿದಿರುತ್ತದೆ. ಆ ಕಲೆಯನ್ನು ಗುರುತಿಸಿ ಪರಿಚಯಿಸಬೇಕು, ಅದಕ್ಕೆ ಪ್ರೋತ್ಸಾಹ ನೀಡಬೇಕು. ಇದು ಅ ವ್ಯಕ್ತಿ ಕ್ರಿಯಶೀಲನಾಗಲು ಕಾರಣವಾಗುತ್ತದೆ.


ಸಾಧನೆ ಮಾಡಬೇಕೆಂದು ಛಲ ಇರುವವರಿಗೆ ಸ್ಪೂತರ್ಿ ಬೇಕಾಗುತ್ತದೆ, ಸ್ಪೂತರ್ಿಯನ್ನು ತುಂಬುವ ವ್ಯಕ್ತಿಗಳಾಗಿ, ನಿಮಗೂ ಇನ್ನೊಬ್ಬರು ಸ್ಪೂತಿಯ ಸೆಲೆಯಾಗಿ ನಿಲ್ಲಬಲ್ಲರು. ಇನ್ನೊಬ್ಬರ ಯಶಸ್ಸಿಗೆ ಕಾರಣರಾಗಿ ಅದರಿಂದ ಸಿಗುವ ಸಂತೋಷದ ಅನುಭವ ಪಡೆಯಿರಿ, ಇನ್ನೊಬ್ಬರ ಸಂತೋಷಕ್ಕೆ ಕಾರಣ ನೀವಾಗಿ, ಆದರೆ ಆ ಸಂತೋಷದಲ್ಲಿ ಭಾಗಿಯಾಗಬೇಡಿ, ಇನ್ನೊಬ್ಬರ ದು:ಖದಲ್ಲಿ ಭಾಗಿಯಾಗಿ, ಆದರೆ ಆ ದು:ಖಕ್ಕೆ ಕಾರಣ ನೀವಾಗಬೇಡಿ. ದೀಪವು ತನ್ನನ್ನು ಸುಟ್ಟುಕೊಂಡು ಎಲ್ಲರಿಗೂ ಬೆಳಕು ನೀಡುತ್ತದೆ, ಆದ್ದರಿಂದ ಆ ದೀಪಕ್ಕೆ ತುಂಬಾ ಮಹತ್ವ ವಿದೆ, ಅದು ಬೆಳಕು ಚೆಲ್ಲುವದರಿಂದ ಕತ್ತಲೆ ನಿವಾರಣೆಯಾಗುತ್ತದೆ, ಇನ್ನೊಬ್ಬರ ಬದುಕಿಗೆ ಬೆಳಕು ನೀಡುವ ಮಾರ್ಗದರ್ಶಕರಾಗಿ ಹೊರಹೊಮ್ಮಿರಿ.

ಪ್ರತಿಯೊಬ್ಬರೂ ವಿಶಿಷ್ಟ ಶಕ್ತಿ, ಸಾಮಥ್ರ್ಯಗಳನ್ನು ಹೊಂದಿರುತ್ತಾರೆ, ಅವರ ಆ ವಿಶಿಷ್ಠ ಗುಣಗಳ ಲಾಭ ಇನ್ನೊಬ್ಬರು ಪಡೆಯಬೇಕು, ಅದಕ್ಕೆ ಪ್ರತಿಯೊಬ್ಬರ ಸಹಕಾರ, ಸಹಾನುಭೂತಿಗಳು ಅಗತ್ಯ, ಸಮಾಜದ ಒಳಿತಿಗಾಗಿ ಅದರ ಬಳಕೆ ಆಗಬೇಕು, ಸಮಾಜಕ್ಕೆ ಅವರ ವಿಶಿಷ್ಟ ಕೊಡುಗೆ ದೊರೆಯಬೆಕಾದರೆ ಅವರೂ ಸಹ ಆ ನಿಟ್ಟಿನಲ್ಲಿ ಕಾರ್ಯ ಮಾಡಿ ತೋರಿಸುವ ಸಾಮಥ್ರ್ಯ ಹೊಂದಬೇಕಾಗುತ್ತದೆ. ಇರುವೆಗಳ ಸಂಘ ಜೀವನವು ಮನುಷ್ಯನಿಗೆ ಒಂದು ನೀತಿ ಕಥೆಯನ್ನೇ ತಿಳಿಸುತ್ತದೆ. ನಾವು ನಮ್ಮವರು ಎನ್ನುವ ಭಾವನೆಯಿಂದ ಕೂಡಿ ಬಾಳುವದು ವಿವಿಧತೆಯಲ್ಲಿ ಏಕತೆ ತೋರಿಸುತ್ತದೆ.

ಇಂದು ಮತೊಬ್ಬರನ್ನು ನೋಯಿಸಿ, ಹಿಂಸಿಸಿ ಬದುಕುವವರನ್ನು ಕಾಣುತ್ತೇವೆ, ಅದು ಮಾನವೀಯ ಮೌಲ್ಯಗಳಿಗೆ ಕುಂದು ತರುವಂತಹ ಕೆಲಸ. ಅಮಾನವೀಯ ಲಕ್ಷಣ. ಅಂತಹ ವ್ಯಕ್ತಿಗಳು ಇವತ್ತು ಇನ್ನೊಬ್ಬರನ್ನು ನೋಯಿಸುವಂಥಾ ಕೆಲಸವನ್ನು ಮಾಡಿಲ್ಲ, ಇವತ್ತು ನನ್ನ ಆತ್ಮಸಾಕ್ಷಿಗೆ ವಿರುದ್ದವಾದ ನಿಧರ್ಾರಕ್ಕೆ ಬದ್ದನಾಗಲಿಲ್ಲ, ಇವತ್ತು ಕೈಲಾದಷ್ಟು ಪರೋಪಕಾರ ಮಾಡಿದ್ದೀನಿ ಎಂದು ತಮಗೆ ತಾವೇ ಹೇಳಿಕೊಂಡು ಮಾನವನಾಗಿ ಬಾಳಲು ಪ್ರಯತ್ನಪಡಬೇಕು, ಇದು ನಾಳೆಗೆ ಬೇಕಾದ ಮನೋಸ್ಥೈರ್ಯ, ಉತ್ಸಾಹವನ್ನು ಕೊಡುತ್ತದೆ, ಜೀವನದಲ್ಲಿ ಹುಮ್ಮಸ್ಸಿನಿಂದ ಬದುಕಲು ಸಹಾಯವಾಗುತ್ತದೆ.

ಮಹಾತ್ಮರು ಹೇಳಿದಂತೆ ಜೀವನ ಅಲ್ಪಕಾಲದ್ದು, ಅದು ಅರ್ಥಪೂರ್ಣವಾಗುವಂತೆ ಬದುಕುವದು ಒಳಿತು, ಕಷ್ಟಗಳು ನಮ್ಮಲ್ಲಿರುವ ಧೈರ್ಯವನ್ನು ಪರೀಕ್ಷೆಗೆ ಒಡ್ಡುತ್ತವೆ ಎನ್ನಬಹುದು, ಧೈರ್ಯ ಎಂಬುದು ಭಯದ ಮೇಲೆ ಸವಾರಿ ಮಾಡುವ ಯಜಮಾನನಿದ್ದಂತೆ. ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎನ್ನುವಂತೆ ಜೀವನವು ಸ್ವಾರಸ್ಯಮಯವಾಗಿದೆ. ಜೀವನದಲ್ಲಿ ಸುಖವೂ ಬರುತ್ತದೆ, ಕಷ್ಟವೂ ಬರುತ್ತದೆ ಯಾವುದೂ ಸ್ಥಿರವಲ್ಲ, ಕಾಲಚಕ್ರದಂತೆ ತಿರುಗುತ್ತಿರುತ್ತದೆ, ಕಾಲಚಕ್ರದಲ್ಲಿ ಬಿದ್ದು ಒದ್ದಾಡುವದಕ್ಕಿಂತ ಪರೋಪಕಾರಿಯಾಗಿ ಜೀವಿಸಬೇಕು. ಅಲ್ಪ ಕಾಲದ ಜೀವನದಲ್ಲಿ ಅಪಕಾರಿಗಳಾಗುವದಕ್ಕಿಂತ ಉಪಕಾರಿಗಳಾಗುವದು ಲೇಸು. ಇದನ್ನು ಅರಿತು ಬಾಳುವದು ಇನ್ನೂ ಲೆಸು.
ಜೀವನದಲ್ಲಿ ಬರುವಂತಹ ಅವಕಾಶಗಳನ್ನು ಕಳೆದುಕೊಳ್ಳದೆ, ಅದನ್ನು ಸದುಪಯೋಗ ಮಾಡಿಕೊಂಡು ನೀವಿಟ್ಟುಕೊಂಡ ಗುರಿಗಳನ್ನು ಸಾಧಿಸುವತ್ತ ನಿಮ್ಮ ವಿಚಾರ ಲಹರಿ ಹರಿದು ಬರಲಿ, ಪ್ರತಿಭೆಗಳನ್ನು ಗುರುತಿಸಿ ಬೆಳೆಸುವದು ಸುಲಭದ ಮಾತಲ್ಲ ಅದೊಂದು ಕಲೆ ಎನ್ನಬಹುದು. 





-ಅಮರೇಶ ನಾಯಕ ಜಾಲಹಳ್ಳಿ
Cell-9945268059.