Friday, 30 December 2011

Farmer (Published)


ರೈತನ ಕಣ್ಣೊರೆಸಿ




ಇಂದು ಎಲ್ಲರೂ ಪಾಶ್ಚಿಮಾತ್ಯ ಬೆಳವಣಿಗೆಗೆ ಮಾರು ಹೋಗುತ್ತಿದ್ದಾರೆ, ನೂತನ ಯುಗದಲ್ಲಿ ತಂತ್ರಜ್ಞಾನ ತನ್ನದೇ ಆದ ಪ್ರಭಾವ ಬೀರುತ್ತದೆ. ಎಲ್ಲರೂ ಆಸೆಯಿಂದ ಹಣ ಗಳಿಕೆ ಮಾರ್ಗ ಹುಡುಕುತ್ತಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ ಅನ್ನ ನೀಡುವ ಭೂ ತಾಯಿಯನ್ನೇ ಮರೆತಿದ್ದಾರೆ. ಹಣದ ಆಸೆಗಾಗಿ ಭೂಮಿ ಮಾರುತ್ತಿದ್ದಾರೆ, ಕೃಷಿ ಮರೆಯುತ್ತಿದ್ದಾರೆ.

ಭಾರತ ಹಳ್ಳಿಗಳ ದೇಶ ಹಾಗೂ 'ಕರಷಿ ಪ್ರಧಾನ ರಾಷ್ಟ್ರ' ಮುಂದುವರೆಯುತ್ತಿರುವ ದೇಶ. ಅದಕ್ಕೆ ಕೃಷಿಯೇ ಕಾರಣ. ಉತ್ತಿ, ಬಿತ್ತಿ ಬೆಳೆದ ಬೀಜಗಳು, ಧಾನ್ಯಗಳು ರಫ್ತಾಗುತ್ತವೆ. ಎಲ್ಲರಿಗೆ ಅನ್ನ ನೀಡಿ ಕಣೊರೆಸುವವನು ರೈತ, ಇಂದು ರೈತನೇ ಕಣ್ಣಿರಿಡುವ ಪರಿಸ್ಥಿತಿ ಉಂಟಾಗಿದೆ. ಸಾಲ ಮಾಡಿ ಬೆಳೆದ ಬೆಲೆಯಿಲ್ಲ. ಮಧ್ಯವತರ್ಿಗಳ ಆವಳಿ ಹೆಚ್ಚಾಗುತ್ತದೆ.

ರೈತನ ಉತ್ಪನ್ನಗಳಿಗೆ ನಿಗಧಿತ ಬೆಲೆ ನೀಡುವ ಕಾರ್ಯವನ್ನು ಸಕರ್ಾರ ಮಾಡಬೇಕಾಗಿದೆ. ಬೆಳೆಗೆ ತಕ್ಕ ಬೆಲೆ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ಸಾಮಾನ್ಯವಾಗುತ್ತಿದೆ. ಧಾನ್ಯದ ಬೆಲೆ ಗಗನಕ್ಕೇರಿ ಬಡತನ, ಹಸಿವಿನಿಂದ ಜನ ಆತ್ಮಹತ್ಯೆ ಮಾಡಿಕೊಇಳ್ಳುವ ಪರಿ ಇನ್ನೊಂದು ಕಡೆ. ಈ ವ್ಯವಸ್ಥೆಯಿಂದ ಹೊರಬರಬೇಕಾದರೆ ಯುವಕರು ಎಚ್ಚೆತ್ತುಕೊಳುಬೇಕು. ಇಲ್ಲವಾದರೆ ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದರೆಂಬಂತೆ ಆಗುತ್ತದೆ.

ಓದು ನೌಕರಿಗಾಗಿ ಅಲ್ಲ ಜ್ಞಾನಕ್ಕಾಗಿ, ಎಷ್ಟೋ ಜನ ಡಿಗ್ರಿ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸಫಲರಾದವರೂ ಇದ್ದಾರೆ. ವಿದ್ಯಾಥರ್ಿಗಳು ಹೊ ಹೊಸ ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಭಾಗವಹಿಸಿದರೆ ದೇಶಕ್ಕೆ ಅನ್ನದ ಬರ ಇರುವದಿಲ್ಲ. ಈ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯ.

ಕಣ್ತೆರೆದು ರೈತನಾದ ಅನ್ನದಾತನನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಬೇಕಾಶಗಿದೆ. ದೇಶ ಕಾಪಾಡುವವನು ಸೈನಿಕನಾದರೆ, ಅನ್ನದಾತನಾಗಿರುವ ರೈತನನ್ನು ಕಾಪಾಡುವದು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ರೈತನನ್ನು ಕಾಪಾಡಿ ಕೃಷಿಗೆ ಹೆಚ್ಚು ಒತ್ತು ನೀಡುವದು ಆದ್ಯ ಕರ್ತವ್ಯ.



-ಅಮರೇಶ ನಾಯಕ ಜಾಲಹಳ್ಳಿ 
Cell-9945268059               

No comments:

Post a Comment