Monday, 16 January 2012

Apoorva Sangama E-Kanasu (Published)


ಅಪೂರ್ವ ಸಂಗಮ ಈ-ಕನಸು...


ಲೇಖನ ಬರೆಯಬೇಕೆಂಬ ನನ್ನ ಈ ಕನಸುಗಳಿಗೆ ಜೀವ ತುಂಬಿದ್ದು. ಗೆಳೆಯ ಅಹ್ಮದ್ ಅದೊಂದು ದಿವಸ ಗುಲಬಗರ್ಾ ವಿವಿಯಲ್ಲಿ ಸ್ನಾತ್ತಕೋತ್ತರ ಪದವಿಗೆ ವಿದ್ಯಾಥರ್ಿಗಳ ಆಯ್ಕೆ ನಡೆದಿತ್ತು. ತನ್ನ ಗೆಳೆಯನ ಅಡ್ಮಿಷನ್ ಸಲುವಾಗಿ ಆತ ಇಲ್ಲಿಗೆ ಬಂದಿದ್ದ. ನಾನು ಭೇಟಿ ಮಾಡಿ ಬಹಳ ವರ್ಷಗಳೇ ಕಳೆದಿದ್ದವು. ಆಕಸ್ಮಿಕವಾಗಿ ಭೇಟಿಯಾದ ಆತನ ಕುಶಲೋಪರಿ ವಿಚಾರಿಸಿದೆ. ಅಲ್ಲಿರುವ ಸುಂದರವಾದ ಪಾಕರ್್, ಅಲ್ಲಿ ಕುಳಿತು ಮಾತನಾಡುತ್ತಿದ್ದಾಗ, ನಿನ್ನ ಲೇಖನಗಳ ಬರವಣಿಗೆ ಎಲ್ಲಿಗೆ ಬಂತು ಎಂದು ಕೇಳಿದೆ. ಕೆಲವೊಂದು ಲೇಖನಗಳು ಪತ್ರಿಕೆಗಳಲ್ಲಿ ಹಾಗೂ ಈ-ಕನಸು.ಕಾಂ ವೆಬ್ಸೈಟ್ನಲ್ಲೂ ಪ್ರಕಟಗೊಂಡಿವೆ ಎಂದು ತಿಳಿಸಿದ. ಕುತೂಹಲದಿಂದ ಕೇಳಿದಾಗ ವೆಬ್ಸೈಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ. ನಾನು ಕೂಡ ಈ ವೆಬ್ಸೈಡ್ಗೆ ಲೇಖನಗಳನ್ನು ಕಳಿಸಬೇಕೆಂದು ತೀಮರ್ಾನಿಸಿದೆ. ಅದಾಗಲೇ ನಾನು ಬರೆದ ಹತ್ತಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಒಂದು ಸಲ ಆ ವೆಬ್ಸೈಟ್ (ಈ-ಕನಸು.ಕಾಂ) ಸಚರ್್ ಮಾಡಿ ನೋಡಿದೆ. 

ಇಲ್ಲಿ ಪ್ರಸ್ತುತಪಡಿಸುವಂತಹ ವೈವಿಧ್ಯಮಯ ಸುದ್ದಿಗಳು, ಹಲವು ವಿಚಾರಧಾರೆಯ ಲೇಖನಗಳು, ಮನಮೋಹಕವಾದಂತಹ ಚಿತ್ರಗಳು, ಯಾವುದೋ ಕಲ್ಪನಾ ಲೋಕಕ್ಕೆ ಕರೆದೊಯ್ಯುವಂತಿದ್ದವು. ಪ್ರತಿನಿತ್ಯ ಇದನ್ನು ಓದುತ್ತಾ ಇದರ ಅಭಿಮಾನಿಯಾದೆ. ಹೊಸ ಬಗೆಯ ಲೇಖನಗಳು, ಪ್ರಚಲಿತ ಘಟನೆಗಳನ್ನು ಕುರಿತು ಲೇಖನಗಳನ್ನು ಬರೆಯಲು ಇದು ಸ್ಪೂತರ್ಿಯಾಯಿತು. ನಾನಿರುವದು ವಸತಿ ನಿಲಯದಲ್ಲಿ, ಆಗತಾನೇ ಸ್ಪಧರ್ಾತ್ಮಕ ಪರೀಕ್ಷೇಗಳು ಹತ್ತಿರವಾಗುತ್ತಿದ್ದವು. ಕೆಲವರು ಓದಲು ಮಗ್ನರಾದರೆ, ಹಲವರು ಪರೀಕ್ಷೇಗಳು ಇನ್ನೂ ಮುಂದೆ ಇವೆ, ನಾವು ಯಾಕೆ ಟೆನ್ಷನ್ ಮಾಡಿಕೊಂಡು ಓದಬೆಕು ಎನ್ನುತ್ತಾ ಕಾಲವನ್ನು ಮುಂದಕ್ಕೆ ಹಾಕುತ್ತಿದ್ದರು. ಈ ದೃಷ್ಟಿಕೋನ ಇಟ್ಟುಕೊಂಡು ಲೇಖನ ಬರೆಯ ತೊಡಗಿದೆ. ನಾಳೆ ಮಾಡುವ ಕೆಲಸ ಇವತ್ತೆ ಮಾಡು, ಇವತ್ತೇ ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡು ಎಂಬ ಮಾತಿದೆ. ಕಳೆದು ಹೋದ ಸಮಯ ಮತ್ತೆ ಬರಲಾರದು. ಕಾಲಗಳು ಉರುಳುವವು, ಗಳಿಗೆಗಳು ಹೊರಳುವವು ಇದನ್ನರಿತುಕೊಂಡು ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಸರಿಯಾದ ಕ್ರಮದಲ್ಲಿ ಓದಿ, ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಒಂದು ಲೇಖನ ಸಿದ್ಧಪಡಿಸಿದೆ.

ಮುಂದೂಡುವ ಪ್ರವೃತ್ತಿ ಸಲ್ಲದು. ಎಂಬ ತಲೆಬರಹದೊಂದಿಗೆ ಈ-ಕನಸು.ಕಾಂನಲ್ಲಿ ಲೇಖನ ಪ್ರಕಟವಾಯಿತು. ಆ ದಿನ ಸಾಯಂಕಾಲ 7 ಘಂ. ಸುಮಾರಿಗೆ ನನಗೆ ಒಂದು ಕರೆ ಬಂತು. ಆ ಕರೆ ಬೇರೆ ಯಾರದೂ ಅಲ್ಲ... ವೆಬ್ಸೈಟ್ ಎಡಿಟರ್ ಕರೆ ಮಾಡಿದ್ದರು!! ಅವರು ಲೇಖನದ ಸರಿ ತಪ್ಪುಗಳನ್ನು ನನಗೆ ತಿಳಿಸುತ್ತಾ, ಇನ್ನೂ ಚನ್ನಾಗಿ ಲೇಖನ ಬರೆಯಲು ಹುರಿದುಂಬಿಸಿದರು. ಹೊಸ ಹೊಸ ವಿಷಯಗಳತ್ತ ಗಮನ ಹರಿಸುವದು, ಓದುಗರಿಗೆ ಅಭಿರುಚಿ ಇರುವಂತಹ ವಿಷಯಗಳ ಬಗ್ಗೆ, ಪ್ರಚಲಿತ ಘಟನೆಗಳ ಕುರಿತು ಲೇಖನವಿರಬೇಕು. ಪ್ರತಿಯೊಂದು ವಿಷಯಕ್ಕೆ ಹೊಂದಿಕೊಳ್ಳುವಂತಹ ಭಾವಚಿತ್ರಗಳಿದ್ದರೆ ಲೇಖನ ಸ್ವಾರಸ್ಯಕರವಾಗಿರುತ್ತದೆ. ಎಂದು ತಿಳಿಸಿಕೊಟ್ಟ ಅವರ ಮಾತುಗಳು ಇಂದಿಗೂ ಅವಿಸ್ಮರಣೀಯ.

ಲೇಖನ ಬರೆಯಬೇಕೆಂಬ ಹಂಬಲ, ತುಡಿತ ನನಗೆ ಇನ್ನೂ ಹೆಚ್ಚಾಯಿತು. ನನ್ನ ಈ ಅಭಿಲಾಷೆಯಿಂದ ಇದೀಗ ಹತ್ತು ಲೇಖನಗಳು ಈ-ಕನಸು.ಕಾಂನಲ್ಲಿ ಪ್ರಕಟಗೊಂಡಿವೆ. ನನ್ನ ಮನೋಭಿಲಾಷೆಗೆ ಇದು ಸ್ಪೂತರ್ಿಯ ಸೆಲೆಯಾಯಿತು. ಹೊಸ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟು, ಯುವಲೇಖಕರಲ್ಲಿ ಉತ್ಸಾಹವನ್ನು ತುಂಬುವದರ ಜೊತೆಗೆ ಅವರ ಗುರಿಯನ್ನು ಸಾಧಿಸಲು ಸಹಾಯಕವಾಗಿದೆ. ಯುವ ಮನಸ್ಸಿನ ಮನದಂಗಳಕೆ ಬರವಣಿಗೆಯ ಭರವಸೆ ಮೂಡಿಸುತ್ತಿರುವ ಈ ವೆಬ್ಸೈಟ್ ಪತ್ರಿಕೆ ನಿಜಕ್ಕೂ ಶ್ಲಾಘನೀಯವಾದುದು.  ಬರವಣಿಗೆ ಎನ್ನುವದು ಒಂದು ಕಲೆ. ಅದು ಎಲ್ಲರಿಗೂ ಸಿದ್ದಿಸುವುದಿಲ್ಲ ಎನ್ನುವದು ಬಹಳ ಜನರ ಅಭಿಮತ. ಆದರೆ ಪ್ರಪಂಚದಲ್ಲಿ ಇಷ್ಟೊಂದು ಬರಹಗಾರರು ಇರುವಾಗ, ಅವರಲ್ಲಿ ನಾವೇಕೆ ಒಬ್ಬರಾಗಬಾರದು? ಮನಸ್ಸಿನಲ್ಲಿರುವದನ್ನು ಬರವಣಿಗೆಯ ರೂಪಕ್ಕೆ ಇಳಿಸಲು ಪ್ರಯತ್ನ ಮಾಡಬೇಕು, ಅಕ್ಷರದ ಮೂಲಕ ವ್ಯಕ್ತಪಡಿಸಲು ಸಮರ್ಥರಾಗಬೇಕು. ನಾವು ಬರೆಯುವಂತಹ ಲೇಖನಗಳಲ್ಲಿ ಸತ್ವವಿದ್ದರೆ ಅದು ಖಂಡಿತಾ ಪ್ರಕಟಣೆಗೆ ಒಳಪಡುತ್ತದೆ. ಬನ್ನಿ ಬರಹಗಾರರಾಗೋಣ, ಈ-ಕನಸು, ಇದು ವರ್ಷದ ಕನಸು. ಇದೊಂದು ಅಪೂರ್ವ ಸಂಗಮ.
     
-ಅಮರೇಶ ನಾಯಕ ಜಾಲಹಳ್ಳಿ
  Cell-9945268059.

Prof.Khandoba Interview (Published)


ಜನಪದ ಸಂಸ್ಕೃತಿಯ ಸಂಶೋಧಕ ಪ್ರೊ.ಖಂಡೋಬಾ

ಜನಪದ ಸಾಹಿತ್ಯದಲ್ಲಿ ವಿಶಿಷ್ಟ ಕೃಷಿ ಮಾಡಿ ಬರಹಗಾರರಾಗಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಅಪರ್ಿಸಿರುವ ಡಾ.ಪಿ.ಕೆ.ಖಂಡೋಬಾ ಅವರು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಶಿರೂರದಲ್ಲಿ ನಡೆದ ಬಾಗಲಕೋಟೆ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಾಕ್ಷರಾಗಿದ್ದರು.
ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮ ಪ್ರೊ. ಪಿ.ಕೆ.ಖಂಡೋಬಾ ರವರ ಜನ್ಮಭೂಮಿಯಾದರೂ, ಕರ್ಮಭೂಮಿ ಕಲಬುಗರ್ಿ. 1953 ರಲ್ಲಿ ತಾಂಡಾ ಸಂಸ್ಕೃತಿಯ ಮನೆತನದಲ್ಲಿ ಜನಿಸಿರುವ ಇವರು, ಗುಲಬಗರ್ಾ ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿರುವ ಅವರ ಸಾಧನೆ ಅಪೂರ್ವವಾದುದು. ಲಂಬಾಣಿ ಬುಡಕಟ್ಟಿಗೆ ಸೇರಿದ ಇವರ ಬದುಕು ಸುಖ ದು:ಖಗಳನ್ನು ಅನುಭವಿಸಿದೆ.
ಪ್ರೊ.ಖಂಡೋಬಾ ಅವರು ಪ್ರಾಥಮಿಕ ಶಿಕ್ಷಣವನ್ನು ಬಾಗಲಕೋಟೆ ತಾಲೂಕಿನ ಶಿರೂರು ತಾಂಡಾದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕೆಲವಡಿ (ಬಾದಾಮಿ) ಯಲ್ಲಿ, ಪ್ರೌಢ ಶಿಕ್ಷಣ ಶಿರೂರುನಲ್ಲಿ, 1974 ರಲ್ಲಿ ಗದುಗಿನ ಜಗದ್ಗುರು ಕಾಲೇಜಿನಲ್ಲಿ ಪದವಿ, 1976 ರಲ್ಲಿ ಸ್ನಾತ್ತಕೋತ್ತರ ಶಿಕ್ಷಣವನ್ನು ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯಲ್ಲಿ ಪೂರೈಸಿದರು. 'ಕನರ್ಾಟಕದ ಲಂಬಾಣಿಗಳು- ಒಂದು ಸಾಂಸ್ಕೃತಿಕ ಅಧ್ಯಯನ ಮಹಾಪ್ರಬಂಧವನ್ನು ಕನರ್ಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ 1984 ರಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಹಾಗೂ ಅದೇ ವಿಶ್ವವಿದ್ಯಾಲಯದಿಂದ ಭಾಷಾಂತರ ಡಿಪ್ಲೋಮಾ ಪದವಿಯನ್ನು ಪಡೆದುಕೊಂಡಿದ್ದಾರೆ.

ಬಾಲ್ಯದ ಶಾಲಾ ದಿನಗಳಿಂದಲೇ ಶಿಸ್ತಿನ ಸಿಪಾಯಿ, ಸಂಸ್ಕೃತಿಯ ಚಿಂತಕ,  ಹಳ್ಳಿಯ ಜನಪದ ಪರಿಸರ, ರೀತಿ ರಿವಾಜು ನಂಬಿಕೆ, ಆಚಾರ, ವಿಚಾರಗಳು ಹಾಗೂ ಕಲೆ ಇತ್ಯಾದಿಗಳು ಅವರ ಮನಸ್ಸನ್ನು ಆಕಷರ್ಿಸಿದವು. ರಜಾ ದಿನಗಳಲ್ಲಿ ಲಂಬಾಣಿ ಬುಡಕಟ್ಟು ಸಂಸ್ಕೃತಿಯನ್ನು ಕುರಿತು ಆಕರಗಳ ಸಂಗ್ರಹ, ಕುತೂಹಲಕಾರಿ ಸಂಗತಿಗಳ ಬಗೆಗೆ ಚಚರ್ೆ, ಸಂವಾದ, ವಿವರಣೆ ಹಾಗೂ ವಿಶ್ಲೇಷಣೆಗಳಿಗೆ ತೊಡಗಿಕೊಳ್ಳುವುದು, ಓದಿನಲ್ಲಿ ಹೆಚ್ಚಿನ ಆಸಕ್ತಿ, ಕಡು ಬಡತನದಲ್ಲಿದ್ದರೂ ಅಚ್ಚು ಕಟ್ಟುತನ, ಶಿಸ್ತನ್ನು ಮೈಗೂಡಿಸಿಕೊಂಡ ಇವರ ಸಂಸ್ಕೃತಿ ಬಗೆಗಿನ ಅನ್ವೇಷಣೆಯೇ ಮುಂದೆ ಡಾಕ್ಟರೇಟ್ ಪದವಿಯ ವಿಷಯಕ್ಕೆ ಕಾರಣವಾಗಿದೆ.
ಗುಲಬಗರ್ಾ ವಿಶ್ವವಿದ್ಯಾಲಯದಲ್ಲಿ 1987 ರಲ್ಲಿ ಸಹ ಪ್ರಾಧ್ಯಾಪಕ ಹುದ್ದೆ ಸೇರಿದ ಇವರು, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಪ್ರಸಾರಾಂಗದ ನಿದರ್ೆಶಕ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಡೀನ್, ಸಿಂಡಿಕೇಟ್ ಸದಸ್ಯರಾಗಿ, ಅಲ್ಲದೆ 2003 ರಲ್ಲಿ ಹಂಗಾಮಿ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಕನ್ನಡ ಅಧ್ಯಯನದ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಮೊದಲ ಕೃತಿ 'ಲಂಬಾಣಿ ಸಂಸ್ಕೃತಿ' (1988), ಅಲ್ಲಿಂದ ಆರಂಭವಾದ ಇವರ ಸಾಹಿತ್ಯ ಇದುವರೆಗೂ 20 ಸಂಶೋಧನಾ ಕೃತಿಗಳು, 20 ಪಠ್ಯ ಪುಸ್ತಕಗಳ ಸಂಗ್ರಹ ಹಾಗೂ ಸಂಪಾದನೆ, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹೊರ ತಂದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಸಮ್ಮೇಳನ, ಕಾಯರ್ಾಗಾರಗಳಲ್ಲಿ ಪ್ರಬಂಧ ಮಂಡನೆ, ರಾಷ್ಟ್ರೀಯ, ಅಂತರಾಷ್ಟ್ರೀಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.  ಯು.ಜಿ.ಸಿಯ ಎರಡು ಪ್ರಧಾನ ಸಂಶೋಧನಾ ಯೋಜನೆ, ಕನರ್ಾಟಕ ಸಕರ್ಾರದ ಕನ್ನಡ ಸಂಸ್ಕೃತಿ ಇಲಾಖೆಯ ಶಾಸ್ತ್ರೀಯ ಭಾಷಾ ಯೋಜನೆಗಳನ್ನು ಕೈಗೊಂಡಿದ್ದಾರೆ.

ಇವರ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ 2005 ರಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ. ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿಯ ವಿಜಯ ಶ್ರೀ ಪ್ರಶಸ್ತಿ. 1998 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುರಸ್ಕಾರ. 1997 ರಲ್ಲಿ ಕನರ್ಾಟಕ ಜಾನಪದ ತಜ್ಞ ಪ್ರಶಸ್ತಿ. 1989 ರಲ್ಲಿ ಗುಲಬಗರ್ಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲಾಗಿದೆ.





ಕನ್ನಡ ಶಾಸ್ತ್ರೀಯ ಭಾಷೆ ಕಾರ್ಯ ತೃಪ್ತಿ ತಂದಿದೆಯೇ?

ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವದು ದಾಖಲೆಗಳಿಂದ ಸ್ಪಷ್ಟವಾಗಿದೆ. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭದಲ್ಲಿ ಕನ್ನಡಕ್ಕೂ ಲಭಿಸಬೇಕಾಗಿತ್ತು. ತಡವಾಗಿಯಾದರೂ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಸಂತೋಷದ ಸಂಗತಿ. ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒಂದು ಕಿರೀಟ ಇದ್ದಂತೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತೆ ಕಟ್ಟಿ ಕೊಡುವಂತಹ ಕೆಲಸ ಮಾಡಬೇಕಾಗಿದೆ. ಎಲ್ಲಾ ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳಿಗೂ ಕನರ್ಾಟಕ ಸರಕಾರ ಎರಡೆರಡು ಕೋಟಿ ಅನುದಾನ ನೀಡಿದೆ. ಕನ್ನಡ ಕಟ್ಟುವ ಕೆಲಸ ಹಿಂದೆಂದಿಗಿಂತ ಹೆಚ್ಚು ಶಾಸ್ತ್ರೀಯ ಭಾಷೆಯ ಹಿನ್ನೆಲೆಯೊಳಗೆ ಭರದಿಂದ ಸಾಗಿದೆ, ತೃಪ್ಪಿಕರವಾಗಿದೆ. ಯಾವುದೇ ಒಂದು ರಾಜ್ಯದ ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿದೆ.

ಸಾಹಿತ್ಯ ಬರವಣಿಗೆಗೆ ಬೇಕಾದ ಅಂಶಗಳೇನು?

ಸಾಹಿತ್ಯ ಬರವಣಿಗೆಗೆ ಬಹಳ ಮುಖ್ಯವಾಗಿ ಓದು ಬೇಕು, ಗಂಭೀರವಾದಂತಹ ಓದು ಬೇಕು. ಶಿಸ್ತುಬದ್ಧ ಅಧ್ಯಯನ, ಇಲ್ಲದಿದ್ದರೆ ಅವ್ಯವಸ್ಥಿತ ಬರವಣಿಗೆಯಾಗುತ್ತದೆ. ಬಹಳ ವ್ಯವಸ್ಥಿತವಾದಂತಹ ಬರವಣಿಗೆ ಬೇಕು. ಲೇಖಕನ ಶಿಸ್ತು, ಸೂಕ್ತವಾದ ಅಧ್ಯಯನ, ಭಾಷೆಯ ಹಿಡಿತ ಮೇಲಾಗಿ ಲೇಖಕನಿಗೆ ಆಸಕ್ತಿ ಮುಖ್ಯವಾದದ್ದು.
್ಡ 'ಜನಪದ ಸಾಹಿತ್ಯವೆಂದರೆ ಭಾರತೀಯ ಸಂಸ್ಕೃತಿಯ ಬೇರು' ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಎಲ್ಲಾ ಭಾಷೆಗಳಿಗೂ ಜನಪದ ಸಾಹಿತ್ಯ ತಾಯಿ ಬೇರು. ಬರೀ ಕನ್ನಡಕ್ಕೆ ಮಾತ್ರ ಅಲ್ಲ ಪ್ರಪಂಚದ ಯಾವುದೇ ಭಾಷೆಯಾಗಿರಬಹುದು. ಮೊದಲು ಜನಪದ ಸಾಹಿತ್ಯ ಆಮೇಲೆ ಶಿಷ್ಠ ಸಾಹಿತ್ಯ. ಜನಪದ ಸಾಹಿತ್ಯದ ಪರಿಷ್ಕೃತ ಭಾಗವೇ ಈ ಶಿಷ್ಠ ಸಾಹಿತ್ಯವಾಗಿದೆ.

'ನಗರ ಸಂಸ್ಕೃತಿ ಬೆಳೆದು, ಗ್ರಾಮ ಸಂಸ್ಕೃತಿ' ಮಾಯಾವಾಗುತ್ತಿಲ್ಲವೇ?

ಖಂಡಿತಾ, ನಮ್ಮ ಗ್ರಾಮೀಣ ಪ್ರದೇಶದ ಜನ ಇಂದು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ನಗರದ ಸಂಸ್ಕೃತಿಗೆ ಅವರು ಹೊಂದಿಕೊಳ್ಳುತ್ತಿದ್ದಾರೆ. ಗ್ರಾಮೀಣ ಸಂಸ್ಕೃತಿ ಕ್ರಮೇಣ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಹತ್ತು ವರ್ಷಗಳ ಹಿಂದಿನ ಸಂಸ್ಕೃತಿ ಇವತ್ತು ನಮ್ಮ ಮಧ್ಯೆ ಇಲ್ಲ. ಇಂದಿನ ಸಂಸ್ಕೃತಿ ನಾಳೆ ಇರುವದಿಲ್ಲ. ಸಂಸ್ಕೃತಿ ಚಲನ ಶೀಲವಾಗಿರುವಂಥದ್ದು. ಅದನ್ನು ತಡೆಗಟ್ಟುವದಕ್ಕೆ ಆಗುವದಿಲ್ಲ. ಸಂಸ್ಕೃತಿ ನಿಂತ ನೀರಾಗಬಾರದು. ಇದು ಪರಿವರ್ತನಾಶೀಲವಾಗಿರುವಂಥದ್ದು, ಯಾವತ್ತೂ ಬದಲಾವಣೆಗೆ ಒಳಪಡುವಂಥದ್ದು. ವಿಶಿಷ್ಠವಾದಂತಹ ನಮ್ಮ ಮೌಲ್ಯಗಳನ್ನು ಉಳಿಸಿಕೊಂಡು, ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು.

ಜಾಗತೀಕರಣದ ಪ್ರಭಾವದಿಂದ ಜನಪದ ಸಂಸ್ಕೃತಿಯ ಮಹತ್ವ ಕಡಿಮೆಯಾಗಿದೆಯೇ?

ಜಾಗತೀಕರಣದಿಂದ ಜನಪದ ಸಾಹಿತ್ಯದ ಮಹತ್ವ ಕಡಿಮೆ ಎಂಬುದಿಲ್ಲ. ಜನಪದದ ಸತ್ವ ಕ್ಷೀಣಿಸುವದಿಲ್ಲ. ಜಾಗತೀಕರಣದ ಪ್ರಭಾವ ಎಷ್ಟೇ ಆದರೂ ತನ್ನ ಮೂಲ ಸತ್ವ ವನ್ನು ಉಳಿಸಿಕೊಂಡು ಬರುತ್ತದೆ. ಇದರಿಂದ ಕೆಲವು ಬದಲಾವಣೆಗಳಾಗಬಹುದು, ವಿಪಯರ್ಾಸಗಳಾಗಬಹುದು, ಹೊಸ ಅಲೆಗಳು ಮೂಡಬಹುದು ಅಂದ ಮಾತ್ರಕ್ಕೆ ಇಡೀ ಸಂಸ್ಕೃತಿ ಬದಲಾಗುತ್ತದೆ, ಜನಪದ ಹಾಗೂ ನಮ್ಮ ಸಂವೇದನೆ ಬದಲಾಗುತ್ತದೆ, ಎನ್ನುವಂಥದ್ದಲ್ಲ. ಎಲ್ಲೋ ಮೇಲೆತ್ತರದಲ್ಲಿ ಪ್ರಭಾವ ಬೀರಬಹುದು. ನೇರವಾಗಿ ನಮ್ಮ ಜನಪದದ ಮೇಲೆ ಪರಿಣಾಮ ಆಗುವದಿಲ್ಲ.

ಮಾದ್ಯಮ ಪ್ರಭಾವದಿಂದ ಮೂಲ ಸಂಸ್ಕೃತಿಗೆ ಪೆಟ್ಟು ಬಿದ್ದಿದೆಯೇ?

ಸಂಸ್ಕೃತಿ ಚಲನಶೀಲವಾಗಿರುವದು, ಪರಿವರ್ತನಾಶೀಲವಾಗಿರುವಂಥದ್ದು. ಆಧುನಿಕ ಮಾದ್ಯಮಗಳ ಪ್ರಭಾವದಿಂದ ಮೂಲ ಸಂಸ್ಕೃತಿಗೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ. ಆಧುನಿಕ ಮಾಧ್ಯಮಗಳು ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿವೆ.ಜೊತೆಗೆ ಸಂಸ್ಕೃತಿಯ ಆಶಯಗಳನ್ನು ಜನ ಸಾಮಾನ್ಯರಲ್ಲಿ ಬಿತ್ತಿ ಬೆಳೆಸಿ ಪ್ರಸಾರ ಮಾಡುವ ಜವಾಬ್ದಾರಿ ಸಮೂಹ ಸಂವಹನ ಮಾಧ್ಯಮಗಳದ್ದಾಗಿದೆ. ಸಂಸ್ಕೃತಿಯ ವೈವಿಧ್ಯತೆ ಮತ್ತು ವಿಶಿಷ್ಟತೆಯ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ಅಧ್ಯಯನ, ಸಂಶೋಧನೆಗೆ ಮಾರ್ಗದರ್ಶನ ಮಾಡುವ ಮೂಲಕ ಸಂಸ್ಕೃತಿಯ ಬಗೆಗಿನ ಕಾಳಜಿ ಮತ್ತು ಸಮುದಾಯದೊಂದಿಗೆ ಸಂಸ್ಕೃತಿಯ ಬೆಸುಗೆ ಮಾಡುತ್ತಿವೆ.

ಯುವಸಮುದಾಯವನ್ನು ಸಾಹಿತ್ಯದೆಡೆಗೆ ಆಕಷರ್ಿಸುವದು ಹೇಗೆ?

ಯುವಕರನ್ನು ಸಾಹಿತ್ಯದೆಡೆಗೆ ತರಲು ಚಚರ್ೆ, ವಾದ, ಸಂವಾದಗಳಲ್ಲಿ ಭಾಗವಹಿಸುವಂತೆ ಮಾಡಬೆಕು. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಬೆಕು. ತಾಲೂಕ, ಜಿಲ್ಲಾ, ರಾಜ್ಯಮಟ್ಟದವರೆಗೆ ಸಾಹಿತ್ಯ ಸಮ್ಮೆಳನಗಳು, ವಿಚಾರ ಸಂಕಿರಣಗಳು ನಡೆಯುತ್ತಿರಬೇಕು. ಸಾಹಿತ್ಯದ ಬರವಣಿಗೆಯ ಕಮ್ಮಟಗಳನ್ನು ನಡೆಸಬೇಕು. ಅದು ಭಾಷಾಂತರ ಕಮ್ಮಟ ಆಗಿರಬಹುದು, ಸಾಹಿತ್ಯ ರಚನೆ, ಸೃಜನ ಕ್ರಿಯೆಯಂತಹ ಕಮ್ಮಟಗಳಲ್ಲಿ ಯುವಕರು ಭಾಗಿಯಾಗುವಂತೆ ಮಾಡಿ ಸಾಹಿತ್ಯ ದೃಷ್ಟಿಗೆ, ಸೃಜನ ಕ್ರಿಯೆಗೆ ತೊಡಗಿಸಿಕೊಳ್ಳಬೇಕಾಗಿದೆ.

ಶಿಕ್ಷಣದಲ್ಲಿ ಜನಪದ ಸಾಹಿತ್ಯದ ಕಲಿಕಾ ಆಸಕ್ತಿ ಮೂಡಿಸುವದು ಹೇಗೆ?

ನಮ್ಮಲ್ಲಿ ಸಾವಿರಾರು ಕನ್ನಡ ಪ್ರಾಥಮಿಕ ಶಾಲೆಗಳಿವೆ. ದೈಹಿಕ ಶಿಕ್ಷಣ ನೀಡುವಂತೆ, ಕಲೆ ನಾಟಕ ತರಬೇತಿ ಕೊಡುವಂತೆ ಜಾನಪದ ಕಲಿಕೆಗೆ ಆಸಕ್ತಿ ಮೂಡಿಸಲು ಜಾನಪದ ಹಾಡುಗಾರರನ್ನು, ಜಾನಪದ ಶಿಕ್ಷಕರನ್ನು, ವಾದನಕಾರರನ್ನು, ಜನಪದ ವೇಷ ಭೂಷಣಗಳನ್ನು ತರಬೇತಿ ರೂಪದೊಳಗೆ ಪ್ರತಿಯೊಬ್ಬ ಜಾನಪದ ಕಲಾವಿದರನ್ನು ಪ್ರಾಥಮಿಕ ಶಾಲೆಗಳಿಗೆ ನೇಮಕ ಮಾಡಬೇಕು. ಜಾನಪದ ಕಲಾವಿದರಿಗೆ ಮಹತ್ವ ಹಾಗೂ ಮಾನ್ಯತೆ ದೊರೆತು, ಕಲೆಯನ್ನು ಉಳಿಸಿದಂತಾಗುತ್ತದೆ. ಇಂಥಹ ಒಂದು ಕ್ರಮವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕು. ನಾಳಿನ ವಿದ್ಯಾಥರ್ಿಗಳಿಗೆ ಜನಪದ ಕಲಿಕೆಯ ಬಗೆಗೆ ಆಸಕ್ತಿ ಮೂಡಿಸುವಂತಾಗುತ್ತದೆ. ಕಲೆ, ಸಂಸ್ಕೃತಿ ಉಳಿಸಿ, ಮುಂದಿನ ಪೀಳಿಗೆಗೆ ಜನಪದ ಸಂಸ್ಕೃತಿಯನ್ನು ರವಾನೆ ಮಾಡಬೇಕು.

'ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಬೇಕು' ಎಂದಿದೆ ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮೂರ್ಖತನದ ಪರಮಾವಧಿ. ಇದೇ 78ನೇ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಕನ್ನಡ ಶಾಲೆಗಳು ರದ್ದಾಗುವದಿಲ್ಲ ಎಂದಿದ್ದಾರೆ. ಹಾಗೇನಾದರೂ ಆದರೆ ಬಹಳ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಇಂಗ್ಲೀಷ ಶಾಲೆಗಳನ್ನು ಮುಚ್ಚಬೇಕೆ ಹೊರತು, ಕನ್ನಡ ಶಾಲೆಗಳನ್ನಲ್ಲ. ಸಂಸ್ಕೃತಿ ಶಾಲೆಯಿಂದಲೇ ಆರಂಭಗೊಳ್ಳುತ್ತದೆ. ಅದನ್ನು ಮುಚ್ಚಿದರೆ ವಿದ್ಯಾಥರ್ಿಗಳು ಶಾಲೆಗೆ ಬರಲಾರದೆ, ಚಿಕ್ಕ ಮಕ್ಕಳು ಕೂಲಿ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಶಾಲೆ ಮುಚ್ಚುವ ನಿಧರ್ಾರ ಸರಕಾರ ಕೈ ಬಿಡಬೇಕು ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಇದು ಕಾರಣವಾಗುತ್ತದೆ.

-ಅಮರೆಶ ನಾಯಕ ಜಾಲಹಳ್ಳಿ
Cell-9945268059






Wednesday, 11 January 2012

Dr.Rajappa Dalavai Interview (Published)


ಕ್ರಿಯಾಶೀಲ ರಂಗ ನಿರ್ದೇಶಕ ಡಾ.ದಳವಾಯಿ..

ಪರಿಣತಿ ಸಾಧಿಸುವದು ಒಂದು ಸವಾಲು, ಆದರೆ ಅಂತಹ ವಿಚಾರಗಳಲ್ಲಿ ಸವಾಲುಗಳನ್ನು ಆಸಕ್ತಿಯಿಂದ ಸ್ವೀಕರಿಸಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿ, ಗಟ್ಟಿಯಾಗಿ ನೆಲೆ ನಿಂತವರು ಕೆಲವೇ ವ್ಯಕ್ತಿಗಳು, ಅಂತಹ ಸಾಧಕರಲ್ಲಿ ರಂಗ ರತ್ನ ಪ್ರಶಸ್ತಿ ವಿಜೇತ ಡಾ.ರಾಜಪ್ಪ ದಳವಾಯಿ ಒಬ್ಬರು. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ, ವೈವಿಧ್ಯಮಯವಾದ ಕ್ಷೇತ್ರಗಳಲ್ಲಿ ತೊಡಗಿಕೊಂಡು ವಿಶಿಷ್ಟ ಶೈಲಿಯ ಕಲೆಯನ್ನು ರೂಡಿಸಿಕೊಂಡಿರುವ ಇವರು ವಿಮರ್ಶಕರಾಗಿ, ಸಂಪಾದಕರಾಗಿ, ಸಿನಿಮಾ ನಿದರ್ೇಶಕರಾಗಿ, ರಂಗಭೂಮಿ, ಜಾನಪದ, ಸಂಗೀತ ಹೀಗೆ ಹಲವಾರು ಕೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಶಿವನಿ ಬಳಿಯ ಅನುವನಹಳ್ಳಿಯ ಕುರುಬ ಜನಾಂಗದ ಕಡು ಬಡತನ ಕುಟುಂಬದಲ್ಲ್ಲಿ ಜನಿಸಿರುವ ಇವರು ಮಾಡಿದ ಸಾಧನೆ ಅಮೋಘವಾಗಿದೆ. ಕಷ್ಟ, ಸುಖಗಳನ್ನು ಅನುಭವಿಸಿದ ಇವರ ಬದುಕು ಏಳು, ಬೀಳುಗಳನ್ನು ಕಂಡಿದೆ. ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ 1985ರಲ್ಲಿ ಎಂ.ಎ ಪದವಿ ಪಡೆದು, ಎಂ.ಎಂ, ಪಿ.ಜಿ.ಡಿ.ಎಫ್, ಎಂ.ಫಿಲ್, ಪಿಎಚ್.ಡಿ, ಪದವಿಗಳನ್ನು ಪಡೆದಿದ್ದಾರೆ.

 'ಸ್ವಾತಂತ್ರ್ಯಪೂರ್ವದ ಕನ್ನಡ ಕಾದಂಬರಿಗಳಲ್ಲಿ ಚಾರಿತ್ರಿಕ ವಸ್ತುಗಳು' ಎಂಬ ವಿಷಯ ಕುರಿತು ಸಂಶೋಧನೆ ನಡೆಸಿದ್ದಾರೆ. ಕಪ್ಪು ದಾರಿಯ ಕೆಂಪು ಚಿತ್ರ, ಸಗಟು ಕವಿಯ ಚಿಲ್ಲರೆ ಪದ್ಯಗಳು, ನೆನಪುಗಳು ಸಾಯುವದಿಲ್ಲ, ಹಕ್ಕಿ ಪಿಕ್ಕಿಯರ ಸಂಸ್ಕೃತಿ, ಏಳೂರು ದೇವರ ಕಾಳಗ, ಇವು ಇವರ ಕೃತಿಗಳು. ಅಂತರ್ಗಟ್ಟೆವ್ವ, ರಕ್ತದ ಬಣ್ಣ ಕಪ್ಪು, ಚಲನ, ಡೋಲಿ, ತಿಳಿವಳಿಕೆ, ಓದು-ಬರಹ, ಸಿನಿಮಾ ಮೀಮಾಂಸೆ, ಕೃತಿ ಆಕೃತಿ, ಉಳುಮೆ, ಸಂಸ್ಕೃತಿ ನಿರ್ವಚನ, ಬೆಳೆ ಮತ್ತು ಸುಯೋಧನ ಎಂಬ ಹನ್ನೆರಡು ಕೃತಿಗಳು ಏಕಕಾಲದಲ್ಲಿ ಪ್ರಕಟಗೊಂಡ ದಳವಾಯಿ ಡಜನ್ ಕೃತಿಗಳೆನಿಸಿಕೊಂಡಿವೆ.

ಕದ್ದವರ್ಯಾರಣ್ಣ ಬೀಜಗಳ, ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ ಎಂಬ ಬೀದಿ ನಾಟಕಗಳು, 'ಕುಲಂ' ಎಂಬ ಪಂಪಭಾರತದ ಕರ್ಣನನ್ನು ಕುರಿತ ಪ್ರಸಿದ್ಧ ನಾಟಕವಾಗಿದೆ.. ಇವರ ಹಲವಾರು ಸಂಶೋದನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ಕನರ್ಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗೆ ಡಾ.ನಲ್ಲೂರು ಪ್ರಸಾದ್ ಪ್ರಶಸ್ತಿ, ಇವರ ಮುಡಿಗೇರಿವೆ. ವಿವಿಧ ಸಂಘ, ಸಂಸ್ಥೆಗಳಿಂದ ಗೌರವ, ಸನ್ಮಾನಗಳು ದೊರೆತಿವೆ.

ಪ್ರಸ್ತುತ ಇವರು ಗುಲಬಗರ್ಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಕವೇ ಕೈಲಾಸವೆಂದು ತಿಳಿದು ತಮ್ಮ ಕಾರ್ಯದಲ್ಲಿ ಮಗ್ನರಾಗಿ ಕ್ರಿಯಾಶೀಲ, ನಿತ್ಯಪರಿವರ್ತನಾಶೀಲ ಗುಣ ಸ್ವಭಾವ ಅಳವಡಿಸಿಕೊಂಡಿರುವ ಇವರು ತಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.

ನಾಟಕ ಅಕಾಡೆಮಿ ಪ್ರಶಸ್ತಿ, ನಲ್ಲೂರು ಪ್ರಶಸ್ತಿ ದೊರೆತ ಬಗ್ಗೆ ನಿಮ್ಮ ಅನಿಸಿಕೆ?

ನಾಟಕ ಅಕಾಡೆಮಿ ಪ್ರಶಸ್ತಿ ಒಂದು ವಿಶೇಷ ಸಂದರ್ಭ ಪ್ರಶಸ್ತಿ. ಸಾಹಿತ್ಯ ಅಕಾಡೆಮಿ ಆರಂಭವಾಗಿ ಐವತ್ತು ವರ್ಷ ಗತಿಸಿದೆ. ಈ ಅವಧಿಯಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿ, ಐವತ್ತು ಜನಕ್ಕೆ ಸನ್ಮಾನಿಸಿ ಜೀವಮಾನದ ಸಾಧನೆ ಹಿನ್ನೆಲೆಯಲ್ಲಿ ಪ್ರಶಸ್ತಿ ವಿತರಿಸಲಾಗಿದೆ. ನಾಟಕಕಾರ, ವಿಮರ್ಶಕ, ರಂಗಕಮರ್ಿ ಪರವಾಗಿ ನನ್ನನ್ನು ಗುರುತಿಸಿದ್ದಾರೆ. ಒಳ್ಳೆಯ ಅಧ್ಯಾಪಕನಿಗೆ ರಂಗಭೂಮಿಯ ನಂಟಿರಬೇಕು ಹಾಗೂ ರಂಗಭೂಮಿ ಕುರಿತು ಅಂಕಣ ಬರೆಯುತ್ತಿದ್ದ್ದೇನೆ. ಪ್ರಶಸ್ತಿಗಳನ್ನು ನಾವು ಬಯಸಿರುವದಿಲ್ಲ. ಪ್ರಶಸ್ತಿಗಳು ದೊರೆತ ಸಂದರ್ಭದಲ್ಲಿ ಭರವಸೆ ಮೂಡುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ಮಾಡಲು ಪ್ರೋತ್ಸಾದಾಯಕವಾಗಿರುತ್ತದೆ.

ನಿಮಗೆ ಬರವಣಿಗೆಯ ಬದುಕಾಗಲು ಕಾರಣ?

ನಾನು ಮೊದಲು ನಿರುದ್ಯೋಗಿ, ಬದುಕಿನ ಅನಿವಾರ್ಯತೆಗಳು, ಹತ್ತಾರು ವರ್ಷ ಬಳಲಿದ ಅನುಭವ ಬರಹಗಾರನಾಗಲು ಪ್ರೇರೇಪಿಸಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಯುವದು ಒಂದು ಹಂತ. ಬದುಕಿನಿಂದ ಕಲಿಯುವ ಕಲಿಕೆ ಮನುಷ್ಯನ ಜೀವನ ರೂಪಿಸುತ್ತದೆ. ಜೀವನದಲ್ಲಿ ಬರುವಂತಹ ಅನಿವಾರ್ಯ ಸಂದರ್ಭಗಳು ಕವಲು ದಾರಿಗಳಾಗಿ ಒಂದು ಹಂತಕ್ಕೆ ತಂದು ನಿಲ್ಲಿಸುತ್ತವೆ. ವಿಶ್ವವಿದ್ಯಾಲಯದಿಂದ ಸಮಾಜ ಅಪಾರವಾದುದನ್ನು ಬಯಸುತ್ತದೆ. ಮೂಲತ: ನಾನು ಚಿತ್ರ ಕಲಾವಿದ, ಆಮೇಲೆ ಸಾಹಿತ್ಯದ ವಿದ್ಯಾಥರ್ಿ, ಸಿನಿಮಾ, ನಾಟಕ, ಸಂಗೀತ ಈ ಎಲ್ಲಾ ಕ್ಷೆತ್ರಗಳಲ್ಲಿ ಕೆಲಸ ಮಾಡಿದ ಅನುಭವ ಒಬ್ಬ ಒಳ್ಳೆಯ ಅಧ್ಯಾಪಕನನ್ನಾಗಿ ರೂಪಿಸಿವೆ.

ನಾಟಕ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗಾಯಿತು?

ಬಾಲ್ಯದಿಂದಲೂ ನನಗೆ ನಾಟಕದಲ್ಲಿ ಆಸಕ್ತಿ, ನಮ್ಮ ಹಳ್ಳಿಯಲ್ಲಿ ಬಯಲಾಟ ತುಂಬಾ ಪ್ರಸಿದ್ಧ, ಬಯಲಾಟದಲ್ಲಿ ನಾನು ಭಾಗವಹಿಸುತ್ತಿದ್ದೆ. ಪ್ರಸಿದ್ಧ ರಂಗ ನಿದರ್ೇಶಕ ಅಶೋಕ ಬಾದರದಿನ್ನಿ ನನ್ನ ಮೊದಲ ರಂಗ ಗುರು. ಅವರು 'ಎ ಮಿಸ್ಸೆಮರ್ ನೈಟ್ ಡ್ರೀಮ್ಸ್' ಷೇಕ್ಸ್ಪಿಯರ್ನ ನಾಟಕ ಕಲಿಸಿದ್ದರು. ಅದರಲ್ಲಿ ನನ್ನದೊಂದು ಚಿಕ್ಕ ಪಾತ್ರ, ಅವರು ಮಾಡಿದ ರಂಗಭೂಮಿಯ ಸಿದ್ದಾಂತ, ಅದರ ಕುರಿತ ವ್ಯಾಖ್ಯಾನಗಳು ಇವೆಲ್ಲವೂ ನನ್ನನ್ನು ರಂಗಭೂಮಿ ಕಡೆಗೆ ಆಕéಷರ್ಿಸಿದವು. ಆಗ ಮೈಸೂರಿನಲ್ಲಿ ರಂಗಭೂಮಿ ಶುರುವಾಗಿತ್ತು. ರಂಗಾಯಣದ ನಾಟಕಗಳನ್ನು ನೋಡುತ್ತ ಎರಡು ದಶಕಗಳು ಕಳೆದವು, ರಂಗಾಯಣ ಒಂದು ರೀತಿಯಲ್ಲಿ ನಾಟಕಕಾರನನ್ನಾಗಿ ರೂಪಿಸಿತು. ಒಳ್ಳೆಯ ನಾಟಕಗಳನ್ನು ನೋಡಿದರೆ ನಾಟಕಕಾರನಾಗಲು ಸಾಧ್ಯವಿಲ್ಲ. ಅದರಲ್ಲಿ ಭಿನ್ನವಾಗಿ ತೊಡಗಿಕೊಳ್ಳಬೇಕು. ರವೀಂದ್ರ ಕಲಾ ಕ್ಷೇತ್ರದ ಒಬ್ಬ ಸಾಮಾನ್ಯ ಪ್ರೇಕ್ಷಕ ನಾನು, ಮುಂದೊಂದು ದಿನ ನಾನೊಬ್ಬ ನಾಟಕಕಾರ ಆಗಬಹುದು, ಇದೇ ರಂಗಮಂದಿರದಲ್ಲಿ ನಿದರ್ೇಶನ ಮಾಡಬಹುದು ಎಂದು ನಾನು ಕಲ್ಪಿಸಿಕೊಂಡೇ ಇರಲಿಲ್ಲ.

ಕನ್ನಡ ರಂಗಭೂಮಿಯ ಪ್ರಸ್ತುತ ಸ್ಥಿತಿಗತಿ ಹೇಗಿದೆ?

ಕನ್ನಡ ರಂಗಭೂಮಿ ಸೃಜನಶೀಲ ಮಾಧ್ಯಮವಾಗಿದ್ದು ಅತ್ಯಂತ ಪ್ರಯೋಗಶೀಲವಾಗಿದೆ. ಇಂದು ಆಸಕ್ತ ಕಲಾವಿದರು ಹಾಗೂ ಯುವಕರು ಈ ಕ್ಷೇತ್ರದ ಕಡೆ ಹೆಚ್ಚು ಹೆಚ್ಚು ಆಕಷರ್ಿತರಾಗಿದ್ದಾರೆ ಪ್ರಸಕ್ತ ದಿನಮಾನಗಳಲ್ಲಿ ತಾಂತ್ರಿಕ ಮಾಧ್ಯಮಗಳಾದ ದೂರದರ್ಶನ, ಸಿನಿಮಾ ಮಾಧ್ಯಮಗಳು ಸೃಷ್ಟಿಯಾಗಿವೆ. ಅದಾಗ್ಯೂ ಕನ್ನಡ ರಂಗಭೂಮಿ ಜೀವಂತ ಮಾಧ್ಯಮವಾಗಿದ್ದು ಇಂದು ಪ್ರಯೋಗಶೀಲವಾಗಿದೆ. ಹಾಗೂ ಸಕ್ರಿಯವಾಗಿದೆ ಆದರೆ ಆದಾಯಕ್ಕಿಂತ ಪರಿಣಾಮಕಾರಿ ಜನ ಮಾಧ್ಯಮವಾಗಿದೆ. ಸಿನಿಮಾದಲ್ಲಿ ಗ್ಲಾಮರ್ ಇರುತ್ತದೆ, ಆದಾಯ ಹೆಚ್ಚು. ರಂಗಭೂಮಿಯಲ್ಲಿ ಹೆಚ್ಚು ಆದಾಯದ ಸಾಧ್ಯತೆಗಳು ಕಡಿಮೆ, ರಂಗಭೂಮಿಯಲ್ಲಿ ಲಾಭ ಇಲ್ಲ. ಆದರೆ ಅದು ಪ್ರತಿಭೆಗಳನ್ನು ನಿಮರ್ಾಣ ಮಾಡುತ್ತದೆ.

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಬೀರಿದೆಯೇ?

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿ ಪ್ರಭಾವ ಇದೆ. ಮೊದಲು ಬೇರೆ ಭಾಷೆಯ ರಂಗಭೂಮಿ ಭಾರತೀಯ ಸಂಸ್ಕೃತಿ, ಜೀವನ ಶೈಲಿ ಮತ್ತು ಭಾಷೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ದೇಶಿಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕನ್ನಡ ರಂಗಭೂಮಿ ದೇಶಿಯ ಸಂಸ್ಕೃತಿಯ ಜೊತೆಗೆ ಪಾಶ್ಚಿಮಾತ್ಯ ರಂಗಭೂಮಿಯ ಕೆಲವು ಸಾಹಿತ್ಯಗಳ ಪ್ರಭಾವದಿಂದ ಪ್ರಭಾವಿತವಾಗಿರುವುದು ಉಂಟು.  ಭಾರತೀಯ ರಂಗಭೂಮಿ ಕೂಡ ಪಾಶ್ಚಾತ್ಯರ ಮೇಲೆ ಪ್ರಭಾವ ಬೀರಿದೆ, ಪೀಟರ್ ಬ್ರೂಕ್ ಎನ್ನುವವರು ಹನ್ನೆರಡು ಘಂಟೆಗಳ ಕಾಲ 'ಮಹಾಭಾರತ' ನಿದರ್ೇಶನ ಮಾಡಿದರು. ನಾಟಕ ಒಂದು ಜಾಗತಿಕ ಭಾಷೆ. ಸಿನಿಮಾ ನಾಟಕದಲ್ಲಿ ಭಾಷೆ ಮುಖ್ಯ ಅಲ್ಲ. ಅನುಭವ ಮುಖ್ಯ. ಅದೊಂದು ಜಾಗತಿಕ ವ್ಯಾಕರಣ ಕ್ಷೇತ್ರ. ಕನ್ನಡದ ಅಗ್ನಿ ಮತ್ತು ಮಳೆ ಅಮೇರಿಕನ್ ನಾಟಕದ ಮೇಲೆ ಪ್ರಭಾವ ಬೀರಿದೆ. ರಂಗಭೂಮಿಯ ವೈಶಿಷ್ಟ್ಯ ಎಲ್ಲಿದ್ದರೂ ಪ್ರಭಾವ ಬೀರುತ್ತದೆ.

ಭಾರತೀಯ ಸಂಸ್ಕೃತಿಗೆ ರಂಗಭೂಮಿಯ ಕೊಡುಗೆ?

ನಾಟಕಗಳು ಮನುಷ್ಯ ಸಂಸ್ಕೃತಿಯ ನಿಜಸ್ವರೂಪದ ಪ್ರತಿಬಿಂಬಗಳಾಗಿವೆ. ಸಮಾಜದ ವಾಸ್ತವ ವಸ್ತು ಸ್ಥಿತಿಯನ್ನು ನಿಮರ್ಾಣ ಮಾಡುವ ನಾಟಕಗಳು ಜನರ ಜೀವನ ಕಲೆಯನ್ನು ಓರೆಗೆ ಹಚ್ಚುತ್ತದೆ. ಅಲ್ಲದೆ ಸ್ವಸಾಮಥ್ರ್ಯದಿಂದ ಸ್ಥಳೀಯ ಸಂಸ್ಕೃತಿ, ಆಚಾರ ವಿಚಾರ, ಜನಜೀವನ ಶೈಲಿ, ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಪ್ರಭಾವಿ ಮಾಧ್ಯಮವಾಗಿ, ಕನ್ನಡ ರಂಗಭೂಮಿ ಕನಸ್ಸನ್ನು ಕಟ್ಟಿ ಕೊಡುತ್ತಾ ಬದುಕನ್ನು ಅರ್ಥ ಮಾಡಿಸುತ್ತದೆ. ಬದುಕು ಕಟ್ಟಿಕೊಳ್ಳುವದನ್ನು ಹೇಳುತ್ತದೆ. ಬೇರೆ ಶಿಷ್ಟ ಮಾಧ್ಯಮಗಳು ಜನರ ಬದುಕು ಹೇಗಿರಬಹುದಿತ್ತು ಎಂದು ತಿಳಿಸುತ್ತದೆ. ಬದುಕು ಹೇಗಿರಬೇಕೆಂದು ತಿಳಿಸುವದೇ ರಂಗಭೂಮಿ. ಇದೇ ಭಾರತೀಯ ಸಂಸ್ಕೃತಿಗೆ ಕೊಟ್ಟಿರುವ ಕೊಡುಗೆ.

ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರಗಳಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರಶಸ್ತಿಗಳ ಆಯ್ಕೆಯಲ್ಲಿ ಅನೇಕ ವಿಚಾರಗಳನ್ನು ಚಚರ್ೆ ಮಾಡಿ ನಿದರ್ಿಷ್ಟವಾದ ಮಾನದಂಡಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ಕೊಡಲಾಗುತ್ತದೆ. ನಾನು ಕೂಡ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಕೆಲಸ ನಿರ್ವಹಿಸಿದ್ದೇನೆ. ಅನೇಕ ವಿಷಯಗಳನ್ನು ಚಚರ್ೆಗೆ ತಂದು, ಸದಸ್ಯರು ಯಾರನ್ನು ಒಪ್ಪಿಕೊಳ್ಳುತ್ತಾರೆ, ಆ ವ್ಯಕ್ತಿಯ ಬಗ್ಗೆ  ಕೂಲಂಕಷವಾಗಿ ತಿಳಿದು ಚಚರ್ೆ ನಡೆಸಲಾಗುತ್ತದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಶಸ್ತಿಗಳು ಪ್ರಜಾಪ್ರಭುತ್ವದಿಂದ ಕೂಡಿರುತ್ತವೆ. ಕೆಲವು ಸಾರಿ ಕೆಲವರ ಪ್ರಾಬಲ್ಯ ಅಧಿಕವಾಗಿರುತ್ತದೆ. ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರ ಹೇಳಬಹುದು, ಏಕೆಂದರೆ ಆಪೇಕ್ಷಿತರ ಪಟ್ಟಿ ಅಧಿಕವಾಗಿರಬಹುದು. ಕ್ಷೇತ್ರದಲ್ಲಿ ಗಣನೀಯ ಸಾಧನೆ, ಕೊಡುಗೆಗಳನ್ನು ಪರಿಗಣಿಸಿ ಚೆನ್ನಾಗಿ ಕೆಲಸ ಮಾಡಿದವರನ್ನು ಯಾವ ಪ್ರಸಸ್ತಿಗಳು ಮರೆತಿಲ್ಲ.

ನಾಟಕ ಸಾಹಿತ್ಯ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆಗಳೇನು?

ಸಾಹಿತ್ಯ ಅಭಿರುಚಿ ಬೆಳೆಯಲು ಮೊದಲು ನಿರಂತರವಾದ ಓದು, ವಿಭಿನ್ನ ರೀತಿಯಲ್ಲಿ ಓದುವದು ಬಹಳ ಅಗತ್ಯವಾಗಿದೆ. ವ್ಯವಸ್ಥಿತವಾದ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಸಾಹಿತ್ಯ ರುಚಿ ಮೂಡಿದರೆ ಅಭ್ಯಾಸದಿಂದ ಸಾಧನೆ ಸಾಧ್ಯ. ನಿರಂತರ ಓದುವವರು ಮಾತ್ರ ಸಾಹಿತ್ಯ ಕಲಿಕೆಗೆ ಸೇರಬೇಕು. ಈ ದಿಶೆಯಲ್ಲಿ ವಿದ್ಯಾಥರ್ಿಗಳು ಅಭ್ಯಾಸದಲ್ಲಿ ನಿರತರಾಗಬೇಕು.


-ಅಮರೇಶ ನಾಯಕ ಜಾಲಹಳ್ಳಿ
Cell-9945268059

Prof.K.Lingappa Interview (Published)


ಬಹುಮುಖ ವ್ಯಕ್ತಿತ್ವದ ಪ್ರೊ.ಕೆ.ಲಿಂಗಪ್ಪ

ವಾರವೇಳು ಕಾಲ ಹದಿನೆಂಟು ಎಂಬರಯ್ಯ
ಅದನಾವು ಅಲ್ಲವೆಂಬವು
ಇರುಳೊಂದು ವಾರ, ಹಗಲೊಂದು ವಾರ
ಭವಿಯೊಂದು ಕುಲ, ಭಕ್ತನೊಂದು ಕುಲ
ನಾವು ಬಲ್ಲುದು ಕಾಣಾ ಕೂಡಲ ಚೆನ್ನ ಸಂಗಮದೇವಾ||

ಚೆನ್ನಬಸವಣ್ಣನವರ ವಚನಗಳಂತೆ, ಕನಕದಾಸರು ಹೇಳಿದಂತೆ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ? ಸಾಮಾಜಿಕ ಶೋಷಣೆಗೆ ಒಳಗಾಗಿ, ನೋವು ಅನುಭವಿಸಿ,  ಅದರಿಂದ ಪಾಠ ಕಲಿತು, ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಹೋರಾಟಕ್ಕೆ ನಿಂತ ಧೀಮಂತ ವ್ಯಕ್ತಿ.

ಸಾಮಾಜಿಕ ಕಳಕಳಿಯ ಬಹುಮುಖ ಪ್ರತಿಭೆಯುಳ್ಳ ಪ್ರೊ. ಕೆ. ಲಿಂಗಪ್ಪ ಭಾನಾಮತಿ, ಮೂಢನಂಬಿಕೆ, ಅವೈಜ್ಞಾನಿಕ, ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಿಕೊಂಡು ಬಂದವರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಡಾ.ಕೆ.ಲಿಂಗಪ್ಪ 1962 ರಲ್ಲಿ ರಾಯಚೂರು ಜಲ್ಲೆಯ ಲಿಂಗಸೂರು ತಾಲೂಕಿನ ಚಿನ್ನದ ಗಣಿಗೆ ಖ್ಯಾತಿ ಪಡೆದಿರುವ ಹಟ್ಟಿ ಇವರ ಹುಟ್ಟೂರು. ಬಳ್ಳಾರಿ ಸೇಂಟ್ಜಾನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ, ಲಿಂಗಸೂರು ಸರಕಾರಿ ಜ್ಯೂನಿಯರ್ ಕಾಲೆಜಿನಲ್ಲಿ ಪಿ.ಯು.ಸಿ, ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪದವಿ, ಗುಲಬಗರ್ಾ ವಿವಿಯ ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಹಾಗೂ 1994ರಲ್ಲಿ ಪಿ.ಎಚ್ಡಿ (ಡಾಕ್ಟ್ರೇಟ್) ಶಿಕ್ಷಣವನ್ನು ಮುಗಿಸಿದರು. ಇವರು ಡಾ.ಎನ್.ಎಸ್.ಪಡಶೆಟ್ಟಿ ಅವರ ಮಾರ್ಗದರ್ಶನದಲ್ಲಿ 'ದ್ರಾಕ್ಷಿಯ ಬದಲು ಹುಣಸೆ ಹಣ್ಣಿನಿಂದ' ವೈನ್ ತಯಾರಿಸುವ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು.

ಇವರು 1987ರಲ್ಲಿ ತಾವು ಅಧ್ಯಯನ ಮಾಡಿದ ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲೇ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಹಂತ ಹಂತವಾಗಿ ಬಡ್ತಿ ಹೊಂದಿದರು. ಪ್ರಸ್ತುತ ಇವರು ಗುಲಬಗರ್ಾ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾಥರ್ಿ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು 8ಜನ ಪಿ.ಎಚ್ಡಿ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿ ಅವರ ಬದುಕಿನಲ್ಲಿ ಆಶಾಕಿರಣ ಮೂಡಿಸಿದ್ದಾರೆ. ಪ್ರಸ್ತುತ 6ಜನ ಪಿ.ಎಚ್ಡಿ ಹಾಗೂ 10ಜನ ಎಂ.ಪಿಲ್ ವಿದ್ಯಾಥರ್ಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಸುಮಾರು 35 ಪ್ರಬಂಧಗಳನ್ನು ಮಂಡಿಸಿದ್ದಾರೆ.  3 ಯು. ಜಿ. ಸಿ ಪ್ರಾಜೆಕ್ಟ್ಗಳನ್ನು ಯಶಸ್ವಿಯಾಗಿ ನಿಬಾಯಿಸಿದ್ದಾರೆ. 3 ಶೈಕ್ಷಣಿಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

 ಗುಲಬಗರ್ಾ ವಿವಿಯ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಅಧ್ಯಕ್ಷರಾಗಿ, ಪರಿಪಾಲಕರು ಹಾಗೂ ಮುಖ್ಯ ಪರಿಪಾಲಕರಾಗಿ, ವಿದ್ಯಾಥರ್ಿ ಕಲ್ಯಾಣಾಧಿಕಾರಿಯಾಗಿ ಶೈಕ್ಷಣಿಕ ರಂಗದಲ್ಲೂ ಜವಾಬ್ದಾರಿ ನಿರ್ವಹಿಸಿದ್ದಾರೆ. 2006-08 ರವರೆಗೆ ಭಾರತ ಜ್ಞಾನ ವಿಜ್ಞಾನದ ಜಿಲ್ಲಾಧ್ಯಕ್ಷರಾಗಿ, 2008-11 ರವರೆಗೆ ಭಾರತ ಜ್ಞಾನ ವಿಜ್ಞಾನದ ಉಪ ರಾಜ್ಯಾಧ್ಯಕ್ಷರಾಗಿ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗುಲಬಗರ್ಾ ಸಮುದಾಯದ ಜಿಲ್ಲಾ ಕಾರ್ಯದಶರ್ಿಯಾಗಿ ಜನ ಸೇವೆಯಲ್ಲಿ ನಿರತರಾಗಿದ್ದಾರೆ ಅಲ್ಲದೆ, ಜಿಲ್ಲೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿಮರ್ಿಸಲು ಸಮುದಾಯದ ಮೂಲಕ ಹೊಸ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.


ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಹೇರಿ ವತಿಯಿಂದ 2011ನೇ ರಾಜ್ಯ ವಚನ ಮಹೋತ್ಸವದ ಅಂಗವಾಗಿ ಅಕ್ಟೋಬರ್ 17ರಂದು ಬಿಜಾಪುರದ ಕಂದಗಲ್ ಹನುಮಂತ್ರಾಯ ರಂಗಮಂದಿರದಲ್ಲಿ ಇವರಿಗೆ 'ಬಸವ ಶ್ರೀ ಪ್ರಶಸ್ತಿ' ನೀಡಿ ಸನ್ಮಾನಿಸಲಾಗಿದೆ.


ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ 2011ನೇ 'ಮಹಾತ್ಮ ಜ್ಯೋತಿ ಬಾಪುಲೆ' ರಾಷ್ಟ್ರೀಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಡಿಸೆಂಬರ್ 11ರಂದು 27ನೇ ರಜತ ಜಯಂತಿ ಸಮಾರಂಭದಂದು ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಅವರು ತಮ್ಮ ಜೀವನ ಪಯಣದ ಕಷ್ಟದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

'ಜ್ಯೋತಿಬಾ ಪುಲೆ' ಅವಾಡರ್್ ಪಡೆದಿರುವ ನಿಮ್ಮ ಮನದಲ್ಲಾದ ಭಾವನೆಗಳೆನು?

ಬಹಳ ಖುಷಿಯಾಗಿದೆ. ಮಹಾತ್ಮ ಜ್ಯೋತಿಬಾ ಪುಲೆ ಬಹಳ ದೊಡ್ಡ ವ್ಯಕ್ತಿಗಳು. ಸಮಾಜದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿ. ಅವರ ಹೆಸರಿನಲ್ಲಿ ಪ್ರಶಸ್ತಿ ಲಭಿಸಿರುವದು ಸಂತೋಷದ ವಿಷಯ. ಸಮಾಜಕ್ಕೆ ನನ್ನಿಂದ ಒಂದು ಅಳಿಲು ಸೇವೆಯಾಗಿರಬಹುದು. ಅದನ್ನು ಗುರುತಿಸಿ ಪ್ರೋತ್ಸಾಹಿಸಿರುವದು ಸಾಮಾಜಿಕ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಇದು ನನ್ನನ್ನು ಪ್ರೇರೆಪಿಸಿದೆ.

ಚಿಕ್ಕ ವಯಸ್ಸಿನಲ್ಲಿ ಅಧ್ಯಯನ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಲು ಹೇಗೆ ಸಾಧ್ಯವಾಯಿತು?

ನಾನು ಬಹಳ ಬಡತನ ಕುಟುಂಬದಿಂದ ಬಂದವನು. ಕಷ್ಟದಿಂದಲೆ ಅಧ್ಯಯನ ಮಾಡಿದವನು. ಕಹಿ ಅನುಭವಗಳಿಂದ ನುರಿತವನು. ನನಗೆ ಆಥರ್ಿಕ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ನಾನು ಹುದ್ದೆಗೆ ಅಜರ್ಿ ಹಾಕಬೇಕಾದರೂ ನನಗೆ ಸಹಾಯ ಮಾಡಿದ್ದು ನನ್ನ ಗೆಳೆಯ. ನನಗೆ ಡಾಕ್ಟರ್ ಆಗಬೇಕೆಂಬ ಕನಸಿತ್ತು, ಆಥರ್ಿಕ ಪರಿಸ್ಥಿತಿಯ ಒತ್ತಡದಿಂದ ಕನಸು ಕಮರಿ ಹೋಯಿತು. ಈ ಕ್ಷೇತ್ರಕ್ಕೆ ಬಂದಾಗ ನಾನು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ತುಡಿತ ಇತ್ತು. ಆ ದಿಶೆಯಲ್ಲಿ ಅವಕಾಶ ಸಿಕ್ಕಿದ್ದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೆ. ನನಗೆ ಪ್ರೋತ್ಸಾಹಿಸಿದವರು ಶಂಕರಯ್ಯ ಆರ್ ಘಂಟಿಯವರು, ಸಾಮಾಜಿಕ ಪಿಡುಗುಗಳಾದ ಅಸ್ಪೃಶ್ಯತೆ, ಮೂಢನಂಬಿಕೆ, ಭಾನಮತಿ, ಅನಕ್ಷರತೆ, ಅವೈಜ್ಞಾನಿಕತೆಯನ್ನು ತೊಡೆದು ಹಾಕುವಲ್ಲಿ ಜನಜಾಗೃತಿ ಮೂಡಿಸಲು ಪ್ರಯತ್ನ ಮಾಡಿದೆವು.

ಅಂದಿನ ಕಷ್ಟಗಳು ನಿಮ್ಮ ಅಧ್ಯಯನಕ್ಕೆ ತೊಡಕಾಗಲಿಲ್ಲವೇ?

ನಾನು ಕಷ್ಟದಲ್ಲಿಯೇ ಜೀವನ ನಡೆಸಿದವನು. ಆದರೆ, ಒಂದು ದಿವಸವೂ ಕಷ್ಟ ಎಂದು ಅಂದುಕೊಂಡಿಲ್ಲ. ಇದ್ದಿದರಲ್ಲಿ ತೃಪ್ತಿ ಪಡುವ ಸ್ವಭಾವ ನನ್ನದು. ಕಷ್ಟಗಳಿಗೆ ಪರಿಹಾರ ಹುಡುಕುತ್ತಿದ್ದೆ, ಅದನ್ನು ನಿಭಾಯಿಸುತ್ತಿದ್ದೆ. ನನ್ನ ತಾಯಿ ತಿಂಗಳಿಗೆ 5ರೂ. ಕಳಿಸುತ್ತಿದ್ದರು. ಅದರಲ್ಲೇ ನನ್ನ ಖರ್ಚನ್ನು ನೋಡಿಕೊಂಡು ಅಧ್ಯಯನ ನಡೆಸುತ್ತಿದ್ದೆ.
್ಡ ವಿಜ್ಞಾನ ಪ್ರಾಧ್ಯಾಪಕರಾದ ನಿಮಗೆ ಸಾಂಸ್ಕೃತಿಕ ಕ್ಷೇತ್ರದ ಆಸಕ್ತಿ ತಳೆಯಲು ಕಾರಣ?
ಈ ವಿಷಯದಲ್ಲಿ ಬಹಳ ಆಸಕ್ತಿ ಇತ್ತು. ನಾನು ಎಡಪಂಥೀಯ ವಿಚಾರಗಳನ್ನು ಮಾಡುತ್ತಿದ್ದೆ. ಮನೆಯಲ್ಲಿಯೂ ಈ ಧೋರಣೆ, ಇದನ್ನು ಹೋಗಲಾಡಿಸಬೇಕೆಂಬುದು ನನ್ನ ಮನಸ್ಸಿನಲ್ಲಿತ್ತು. ನಾನು ವಿಜ್ಞಾನ ವಿದ್ಯಾಥರ್ಿಯಾದುದರಿಂದ ಲ್ಯಾಬ್ನಲ್ಲಿ ಇರಬೇಕಾದುದು, ಸಂಶೋದನೆ ನಡೆಸುವದು ಬಿಟ್ಟರೆ ಏನೂ ಗೊತ್ತಿಲ್ಲ. ಶಂಕರಯ್ಯ ಘಂಟಿ ಸಮುದಾಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಾಯರ್ಾಗಾರ ಏರ್ಪಡಿಸುವದು, ನಾಟಕಗಳನ್ನು ಮಾಡುವದು ಇವೆಲ್ಲ ಜನರಿಗೆ ತಿಳುವಳಿಕೆ ಮೂಡಿಸುವಂತಹವು. 'ಅಸ್ಪೃಶ್ಯತೆಯ ಹಸಿರು ಮುಖಗಳು' ಎಂಬ ನಾಟಕ ಮಾಡಿದರು. ಮೊದಲೇ ಆಸಕ್ತಿ ಇದ್ದ ನನಗೆ ವೇದಿಕೆ ಸಿಕ್ಕಿತು. ನಾನು ಸಮುದಾಯಕ್ಕೆ ಸೇರಿದೆ, ಬೀದಿ ನಾಟಕಗಳಿಂದ ಅಸ್ಪೃಶ್ಯತೆ ಬಗ್ಗೆ ಜನಜಾಗೃತಿ ಮೂಡಿಸುವದು. ಈ ನಿಟ್ಟಿನಲ್ಲಿ ಕೆಲಸ ಮಾಡ ತೊಡಗಿದೆ.

ವಿಜ್ಞಾನಿಯಾದರೂ ಸಾಂಸ್ಕೃತಿಕವಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದೀರಿ. ಅದು ಹೆಗೆ ಸಾಧ್ಯವಾಯಿತು?

ನಾನು ಉಪನ್ಯಾಸಕನಾದರೂ ನನಗೆ ಸಭಾಕಂಪನದ ಅಂಜಿಕೆ ಮನಸ್ಸಿನಲ್ಲಿತ್ತು. ಸಮುದಾಯ ಸೇರಿದ ನಂತರ ಎಲ್ಲವನ್ನೂ ದಾಟಿ ನಡೆಯಲು ಕಲಿತೆ. ನನ್ನ ಗೆಳೆಯರ ಬಳಗ ಹಾಗೂ ಸಮುದಾಯ ನನಗೆ ಧೈರ್ಯ ತುಂಬಿದೆ. ಸಮಾಜದಲ್ಲಿ ಬದುಕುವ ಛಲ, ಜೀವನಕ್ಕೆ ಒಂದು ಇಮೇಜ್ ನೀಡಿದೆ. ಅನ್ಯಾಯವಾದರೆ ಕೇಳುವಂತಹ ಸಾಮಥ್ರ್ಯ ನನ್ನಲ್ಲಿ ಬೆಳೆದಿದೆ. ಒಬ್ಬನಲ್ಲಿ ಒಂದು ಕಲೆ ಇದ್ದರೆ ಸಮುದಾಯ ಎಲ್ಲವನ್ನೂ ಕಲಿಸಿ ಕೊಡುತ್ತದೆ. ಅದು ಸಮುದಾಯದ ಒಂದು ಶಕ್ತಿ ಎಂದು ಹೇಳಬಹುದು. ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಜಾಗೃತಿ ಮೂಡಿಸಲು ಬೀದಿ ನಾಟಕಗಳನ್ನು ಹಮ್ಮಿಕೊಂಡೆವು. ವಿದ್ಯಾಥರ್ಿ ಕಲ್ಯಾಣಾಧಿಕಾರಿಯಾಗಿ ವಿದ್ಯಾಥರ್ಿಗಳ ಸಮಸ್ಯೆಗಳಗೆ ಸ್ಪಂದಿಸುವದು. ಸರಕಾರ ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳತಹ ಯುವಜನೋತ್ಸವ ಕಾರ್ಯಕ್ರಮ ಏರ್ಪಡಿಸುವದು. ಯು.ಜಿ.ಸಿ ನಡೆಸುವ (ಓಇಖಿ-ಖಐಇಖಿ) ಸ್ಪಧರ್ಾತ್ಮಕ ಪರೀಕ್ಷೆಗನ್ನು ನಡೆಸುವದು. ಒಟ್ಟಾರೆಯಾಗಿ ವಿದ್ಯಾಥರ್ಿಗಳ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ.

ನಿಮ್ಮ ಸಾಧನೆಗೆ ಪ್ರೇರಣೆ ಏನು?

ಕಾಯಕವೇ ಕೈಲಾಸ ಎಂದು ತಿಳಿದ ನನಗೆ ಕಹಿ ಘಟನೆಗಳೇ ನನ್ನನ್ನು ಪ್ರೇರೇಪಿಸಿವೆ. ಗ್ರಂಥಪಾಲಕ ಎಂ. ಟಿ. ಕಟ್ಟಿಮನಿ ಹೋರಾಟದ ಮನೋಭಾವನೆಯುಳ್ಳವರು. ಅವರ ಮಾರ್ಗದರ್ಶನ, ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿತು. ಆಗತಾನೇ ಸಮುದಾಯ ಸೇರಿದ್ದೆ, ಸುಮಾರು ಏಳು ವರ್ಷಧ ಹಿಂದೆ ವಿವಿಯ ಎಸ್ಸಿ. ಎಸ್ಟಿ. ವಿದ್ಯಾಥರ್ಿಗಳು ಮಿನಿ ವಿಧಾನಸೌಧದ ಎದುರುಗಡೆ ಧರಣಿ ಕುಳಿತಿದ್ದರು. ಆಥರ್ಿಕ ಬಿಕ್ಕಟ್ಟು ಉಂಟಾಗಿತ್ತು. ಹೇಗಾದರೂ ಮಾಡಿ ದುಡ್ಡು ಹೊಂದಿಸಬೇಕೆಂದು ವಿನೂತನವಾದ ಕಾರ್ಯಕ್ರಮ ಹಮ್ಮಿಕೊಂಡೆವು, 'ಬೂಟ್ ಪಾಲಿಶ್' (ಬೆ. 9ರಿಂದ.11ಘಂ) ಮಾಡಿ ಅದರಿಂದ ಬರುವ ದುಡ್ಡು ವಿದ್ಯಾಥರ್ಿಗಳಗೆ ಕೊಡಲಾಯಿತು. ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರೂ ಹಾಗೂ ಪ್ರೊಫೆಸರ್ ಆಗಿರುವ ಇವರು ಈ ರೀತಿಯ ಕಾರ್ಯಕ್ರಮ ಮಾಡುವರೆಂದು ಸಮುದಾಯ ಬಳಗವೆಲ್ಲ ಸೇರಿ ಬೆಂಗಾವಲಾಗಿ ನಿಂತರು.

ಸಾಧಕರಿಗೆ ಪ್ರಶಸ್ತಿ ಮುಖ್ಯವೋ, ಸೇವೆ ಮುಖ್ಯವೋ?

ಸಾಧಕರಿಗೆ ಸೇವೆಯೇ ಮುಖ್ಯವಾಗುತ್ತದೆ. ಈ ಪ್ರಶಸ್ತಿಗಳು ಸಾಧಕರಿಗೆ ಉತ್ತೇಜನೆ ನೀಡುತ್ತವೆ ಹೊರತು ಅವರಿಗೆ ಇದೇ ಮುಖ್ಯವಲ್ಲ. ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಗೆ ಮಾಡುವ ಮೂಲಕ ಈ ಪ್ರಶಸ್ತಿಗಳು ಪ್ರೋತ್ಸಾಹದಾಯಕವಾಗಿರುತ್ತವೆ. ಮೊದಲು ನಾವು ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತೇವೆ. ಇಂಥಹ ಜವಾಬ್ದಾರಿಗಳು ದೊರೆತ ನಂತರ ನಾವು ಪ್ರಜ್ಞಾವಂತಿಕೆಯಿಂದ ಮತ್ತಷ್ಟು ಜವಾಬ್ದಾರಿಯಿಂದ ಹೆಜ್ಜೆ ಇಡಬೇಕಾಗುತ್ತದೆ.
್ಡ ಇಂದಿನ ವಿಜ್ಞಾನ ಅಧ್ಯಯನ ಮಾಡುವ ವಿದ್ಯಾಥರ್ಿಗಳಿಗೆ ನಿಮ್ಮ ಸಲಹೆಗಳೇನು?
ಅಧ್ಯಯನದ ಜೊತೆಗೆ ಸಾಮಾಜಿಕ ಕಳಕಳಿ ಇರಬೇಕು, ಪಾಠ ಹಾಗೂ ಸಂಶೋಧನೆಗಳ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸಗಳಲ್ಲಿ ಭಾಗಿಯಾಗಬೇಕು. ಬರೀ ಪಠ್ಯಕ್ಕೆ ಸೀಮಿತವಾಗಿರಬಾರದು. ವಿಶ್ವವಿದ್ಯಾಲಯ ಮಟ್ಟ ಬಿಟ್ಟು ಜನರ ಮಧ್ಯೆ ಸೇವೆ ಮಾಡುವಂತಹ ಔದಾರ್ಯ ಬೆಳೆಸಿಕೊಳ್ಳಬೆಕು. ಜನರನ್ನು ಮೂಢನಂಬಿಕೆಗಳಿಂದ ಹೊರಬರುವಂತೆ ಜಾಗೃತಿ ಮೂಡಿಸಬೇಕು, ವೈಜ್ಞಾನಿಕವಾಗಿ ಬೆಳೆಯುತ್ತಿರುವದರ ಬಗ್ಗೆ ಮಾಹಿತಿ ಒದಗಿಸಬೇಕು.

ಮುಂದಿನ ನಿಮ್ಮ ಗುರಿ ಏನು?

ಸಮಾಜವನ್ನು ಜಾತ್ಯಾತೀತವಾಗಿ ಪರಿವತರ್ಿಸುವ  ನಿಟ್ಟಿನಲ್ಲಿ ಹೋರಾಡುವದು. ಸಮಾಜದ ಓರೆ, ಕೋರೆಗಳನ್ನು ತಿದ್ದುವ ಕೆಲಸ ಮಾಡುವದು. ಜನರಲ್ಲಿ ಮನೆ ಮಾಡಿರುವ ಮೂಢನಂಬಿಕೆಯನ್ನು ಅಳಿಸಿ ಹಾಕುವದು. ವೈಜ್ಞಾನಿಕ ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವದು. ಸಂಶೋಧನೆಯ ಜೊತೆಗೆ ಸಮಾಜವನ್ನು ಒಳ್ಳೆಯ ದಿಕ್ಕಿನಲ್ಲಿ ಒಯ್ಯುವುದರ ಒಂದು ಪ್ರಯತ್ನ ಇದೆ.



-ಅಮರೇಶ ನಾಯಕ ಜಾಲಹಳ್ಳಿ,
Cell-9945268059

Dr.vikram Visaji Interview (Published)


'ಶ್ರೀವಿಜಯ' ಪ್ರಥಮ ಪ್ರಶಸ್ತಿಯ ಡಾ.ವಿಕ್ರಮ್ ವಿಸಾಜಿ

ಡಾ. ವಿಕ್ರಮ್ ವಿಸಾಜಿ ಕಿರಿಯ ವಯಸ್ಸಿನ ಹಿರಿಯ ಸಾಹಿತಿ... ಕನ್ನಡ ಸಾಹಿತ್ಯ ಪರಿಷತ್ತು 40 ವರ್ಷದೊಳಗಿನ ಸಾಹಿತಿಗಳಿಗಾಗಿಯೇ ಸ್ಥಾಪಿಸಿರುವ 'ಶ್ರೀವಿಜಯ' ಪ್ರಥಮ ಪ್ರಶಸ್ತಿಗೆ ಭಾಜನರಾಗಿ, ಕಿರಿಯ ವಯಸ್ಸಿನ ಹಿರಿಯ ಸಾಹಿತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾಹಿತ್ಯ ಪರಿಷತ್ತಿನ ಈ 'ಶ್ರೀವಿಜಯ' ಪ್ರಥಮ ಪ್ರಶಸ್ತಿಗೆ ಈ ಹೈದರಾಬಾದ್ ಕರ್ನಾಟಕ ದ ಯುವಕ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ.

ಡಾ. ವಿಕ್ರಮ್ ವಿಸಾಜಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನವರು. 1976ರಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಭಾಲ್ಕಿಯ ಸತ್ಯನಿಕೇತನ ಪ್ರೌಢ ಶಾಲೆಯಲ್ಲಿ ಪಡೆದು, ನಂತರ ಚನ್ನಬಸವೇಶ್ವರ ಕಾಲೇಜಿನಲ್ಲಿ ಪಿ.ಯು.ಸಿ. ಹಾಗೂ ಪದವಿ, ನಂತರ ಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್ಡಿ (ಡಾಕ್ಟರೇಟ್) ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿರುವ ಡಾ. ವಿಕ್ರಮ್ ವಿಸಾಜಿ, ಅಧ್ಯಯನ, ಅಧ್ಯಾಪನ ಎರಡರಲ್ಲೂ ಅನುಭವ ಸಂಪಾದಿಸಿರುವ ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿದವರು. ಉತ್ತಮ ಭಾಷಣಕಾರರು. ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ, ಎಂ.ಎ ಕನ್ನಡ ಹಾಗೂ ಪಿ.ಎಚ್ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ  ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೀವೇಕೆ ಕತ್ತಲ ಕಡೆ, ತಮಾಷಾ, ಗೂಡು ಕಟ್ಟುವ ಚಿತ್ರ, ಇವು ಇವರ ಕವನ ಸಂಕಲನಗಳಾಗಿವೆ. ಹುಚ್ಚು ದಾಳಿಂಬೆ ಗಿಡ ಇವರ ಗ್ರೀಕ್ ಕವಿತೆಗಳ ಅನುವಾದ. ಬೆಳಗಿನ ಮುಖ ಇವರ ವಿಮರ್ಶಾ ಕೃತಿ. ನಾದಗಳು ನುಡಿಯಾಗಲಿ ಇವರ ಸಂಶೋಧನಾ, ಕೃತಿ, ಡಾ.ಚಂದ್ರಶೇಖರ ಕಂಬಾರರ ನಾಟಕಗಳು ಇವರ ಸಂಪಾದನೆ ಕೃತಿಯಾಗಿದೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜು ವತಿಯಿಂದ ದ.ರಾ. ಬೇಂದ್ರೆ ಕಾವ್ಯಸ್ಪರ್ಧೆಯಲ್ಲಿ 6 ಸಲ ಬಹುಮಾನ ಪಡೆದಿದ್ದು, ಧಾರವಾಡದ ಜೆಸಸ್ ಕಾಲೇಜು ವತಿಯಿಂದ ಕವಿತೆಗಾಗಿ ಬಹುಮಾನ. ಚಂಪಾರವರ ಸಂಕ್ರಮಣ ಪತ್ರಿಕೆ ವತಿಯಿಂದ ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಎರಡು ಸಲ ಪುರಸ್ಕಾರ ಪಡೆದಿದ್ದಾರೆ. ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ತು ವತಿಯಿಂದ ಯುವ ಲೇಖಕ ಪ್ರಶಸ್ತಿ. ಪ್ರಥಮ ಬಾರಿಗೆ ನೂತನವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಕಟಿಸಿರುವ 'ಶ್ರೀವಿಜಯ' ಪ್ರಶಸ್ತಿಗೆ ಇದೀಗ ಭಾಜನರಾಗಿದ್ದಾರೆ. ಯುವಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ 40 ವರ್ಷದ ಒಳಗಿನವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ 'ಶ್ರೀವಿಜಯ' ಪ್ರಶಸ್ತಿಯನ್ನು ವಿತರಣೆ ಮಾಡಲಾಗುತ್ತದೆ. ಅದರ ಜೊತೆಗೆ 1,11,111 ರೂ ನಗದು ಬಹುಮಾನವನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುತ್ತಿದೆ. ಡಿಸೆಂಬರ್ (2011) ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ..

ಕಲ್ಯಾಣ ಕರ್ನಾಟಕದ ಗಡಿನಾಡು ಪ್ರದೇಶದ ಯುವ ಪ್ರತಿಭೆ, ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕೀರ್ತಿ ಇವರದು. ಈ ಭಾಗದಲ್ಲಿ ಹಲವಾರು ಜನ ಯುವ ಸಾಹಿತಿಗಳಿದ್ದಾರೆ. ಸರಕಾರ ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಈ ಯುವ ಲೇಖಕರಿಗೆ, ಯುವ ಸಾಹಿತಿಗಳು ಮಾದರಿ.

'ಶ್ರೀ ವಿಜಯ' ಪ್ರಶಸ್ತಿ ಲಭಿಸಿರುವ ನಿಮಗೆ ಏನನಿಸುತ್ತದೆ?

ಯುವ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಪ್ರಶಸ್ತಿ ದೊರೆತಿದೆ ಎಂದು ನನ್ನ ಅಭಿಪ್ರಾಯ. ಇನ್ನೂ ಹೆಚ್ಚಿನ ಬರವಣಿಗೆಗೆ ಇದು ಸೂಚನೆಯಾಗಿದೆ. ಜವಾಬ್ದಾರಿ ಹೆಚ್ಚಾಗಿದೆ, ನಿರೀಕ್ಷೆಗಳು ಜಾಸ್ತಿಯಾಗಿವೆ. ಸಾಹಿತ್ಯ ಪರಿಷತ್ತು ಇಟ್ಟಿರುವ ಭರವಸೆ ನಾವು ಪ್ರೀತಿಯಿಂದ, ಶ್ರದ್ಧೆಯಿಂದ ಬರವಣಿಗೆಯಲ್ಲಿ ತೊಡಗಿ ಕೊಳ್ಳಬೇಕಾಗಿದೆ ಎಂದು ತಿಳಿದಿದ್ದೇನೆ.
ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯಿಕ ವಲಯದಲ್ಲಿ ಅಗಾಧವಾದ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು?
ಮನೆಯಲ್ಲಿ ಒಳ್ಳೆಯ ವಾತಾವರಣ, ನಮ್ಮ ತಂದೆಯವರು ಕನ್ನಡ ಅಧ್ಯಾಪಕರಾಗಿದ್ದರು. ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಕಥೆ, ಕವನದ ಅನೇಕ ಪುಸ್ತಕಗಳು ಮನೆಯಲ್ಲಿದ್ದವು. ಸಾಹಿತ್ಯ ಕಾರ್ಯಕ್ರಮ (ನಾಟಕ, ಗೋಷ್ಠಿ, ಸಂಗೀತ ಸಭೆ) ಗಳಲ್ಲಿ ನಾನು ತಂದೆಯವರ ಜೊತೆ ಭಾಗಿಯಾಗುತ್ತಿದ್ದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಬೆಳೆಯ ತೊಡಗಿತು. ಅನೆಕ ಲೇಖಕರ (ಹಾ.ಮಾ.ನಾಯಕ, ಎಲ್.ಎಸ್.ಶೇಷಗಿರಿರಾವ್, ಚಂದ್ರಶೇಖರ್ ಪಾಟೀಲ್, ರಹಮತ್ ತರೀಕೆರೆ, ಅಮರೇಶ ನುಗಡೋಣಿ) ಜೊತೆ ಸಂಪರ್ಕ, ಸಂವಹನ ಬೆಳೆಯಿತು. ಅವರ ಮಾರ್ಗದರ್ಶನ, ಪ್ರೀತಿ, ಒಡನಾಟ, ಅವರ ಮಾತುಗಳು ನನಗೆ ಬರೆಯಲು ಪ್ರೇರಣೆಯಾಯಿತು.

ಬರಹಗಾರರಲ್ಲಿ ಪ್ರಥಮ ತೊಂದರೆ ಇರುತ್ತದೆ. ಅದನ್ನು ಅವರು ನಿವಾರಿಸಿಕೊಳ್ಳುವುದು ಹೇಗೆ?

ವೈವಿಧ್ಯಮಯವಾದ ಓದು ಬರಹಗಾರರನ್ನು ಸೂಕ್ಷ್ಮನನ್ನಾಗಿ ಮಾಡುತ್ತದೆ. ಕನ್ನಡ ಸಾಹಿತ್ಯ, ಮರಾಠಿ ಸಾಹಿತ್ಯ, ತೆಲುಗು ಸಾಹಿತ್ಯ, ಬಂಗಾಳಿ ಸಾಹಿತ್ಯ ಅನುವಾದದಲ್ಲಾದರೂ ಸರಿ, ಫ್ರೆಂಚ್ ಶೈಲಿ, ಅಮೇರಿಕನ್ ಶೈಲಿ ಓದಿ ತಿಳಿದುಕೊಂಡರೆ ಓದಿನ ಕ್ರಮ ಅರಿತು ಯಾವ ಬರವಣಿಗೆಯೊಳಗೆ ಜೀವಂತಿಕೆ ಇದೆ, ಯಾವ ಬರವಣಿಗೆಯೊಳಗೆ ಜೀವಂತಿಕೆ ಇಲ್ಲ ಎನ್ನುವುದು ತಿಳಿದು, ಓದುವ ದೃಷ್ಟಿಕೋನದಿಂದ ಬರವಣಿಗೆಯ ಪ್ರಥಮ ತೊಂದರೆ ನಿವಾರಿಸಬಹುದು. ನಮ್ಮ ಬರವಣಿಗೆಯ ಸಮಸ್ಯೆಗಳನ್ನು ಮೀರಿ ನಮ್ಮ ಸೃಜನಶೀಲತೆ ಕಾಪಾಡಿಕೊಳ್ಳಬೇಕು.

ಇತ್ತೀಚಿನ ಸಾಹಿತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕನ್ನಡದಲ್ಲಿ ಒಂದು ನಿಲುವು, ಘಟ್ಟ ಅನ್ನೋದು ಇಲ್ಲ. ಹಲವಾರು ಸಾಹಿತಿಗಳು, ಅನೇಕ ಲೇಖಕರು ಸೂಕ್ಷ್ಮವಾಗಿ ಬರೆಯುತ್ತಿದ್ದಾರೆ. ಸೂಕ್ಷ್ಮತೆ ಎನ್ನುವದು ಸಾಹಿತ್ಯದಲ್ಲಿ ಅತಿ ಮುಖ್ಯ. ಒಂದು ಗುಂಪಿನ ಮೂಲಕ ಸಾಹಿತ್ಯ ರಚನೆಯಾದರೆ ಅದು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತದೆ, ಚರ್ಚೆಗೊಳಪಡುತ್ತದೆ. ಆದರೆ ಒಬ್ಬ ವ್ಯಕ್ತಿಯ ಬರವಣಿಗೆಯ ಪರಿಶ್ರಮವೂ  ಚರ್ಚೆಯಾಗುತ್ತದೆ. ಆದರೆ ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. (ಹರೀಫ ರಾಜ, ಸುಮಂಗಲ, ಚಿದಾನಂದರ ಅನುವಾದಗಳು, ವಸುಧೇಂದ್ರರ ಪ್ರಬಂಧಗಳು, ಎ.ಎಂ. ಮಂಜುನಾಥ, ಎಂ.ಆರ್. ಭಾಗವತಿ, ಅಂಕೂರ ಬೆಟಗೇರಿ) ಹಲವಾರು ಸಾಹಿತಿಗಳಿದ್ದಾರೆ. ಸಾತ್ವಿಕತೆ, ದಾರ್ಶನಿಕತೆ ಅದು ಎಂಥಹ ರೂಪ ಪಡೆದುಕೊಳ್ಲುತ್ತಿದೆ ಎನ್ನುವಂಥದ್ದು. ಉತ್ತಮವಾದ ವಸ್ತು ವಿಷಯವನ್ನು ಇತ್ತೀಚಿನ ಸಾಹಿತ್ಯ ಒಳಗೊಂಡಿರಬೇಕು.

ಸಾಹಿತ್ಯ ಹಾಗೂ ವಿಮರ್ಶೆ ನಡುವಿನ ಸಂಬಂಧದ ಬಗ್ಗೆ ಏನು ಹೇಳುತ್ತೀರಿ?

ಸಾಹಿತ್ಯ ಬದುಕನ್ನು, ಸಮಾಜವನ್ನು ಸೃಜನಶೀಲವಾಗಿ ಗ್ರಹಿಸುವಂತಹ ಒಂದು ಕ್ರಮ. ಬದುಕಿನ ಚಲನೆಯ ಸಂಬಂಧ ಇದರಲ್ಲಿದೆ. ಸಮಾಜದ ಒಟ್ಟಾರೆ ಒಂದು ಸ್ಥಿತಿಯನ್ನು ಆಳವಾಗಿ, ಸೂಕ್ಷ್ಮವಾಗಿ ಗ್ರಹಿಸುವಂತಹ ಒಂದು ಅವಕಾಶ ಸಾಹಿತ್ಯದಲ್ಲಿದೆ. ಹೀಗೆ ರಚನೆಯಾದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ. ವಿಶ್ಲೇಷಣೆಗೆ ಈ ವಿಮರ್ಶೆ ಅಗತ್ಯ. ಯಾವ ದೃಷ್ಟಿಕೋನದಿಂದ ಓದಿದರೆ ಏನೇನು ಅರ್ಥಗಳು ಬರುತ್ತವೆ ಎನ್ನುವಂಥದ್ದು. ವಿಮರ್ಶೆ ಇಂದು ಬರವಣಿಗೆಯನ್ನು ತೂಕ ಮಾಡುತ್ತದೆ. ಓದಿನ ಸಾಧ್ಯತೆಗಳನ್ನು ತೋರಿಸುತ್ತದೆ. ವಿಮರ್ಶೆ ಬರೆಯುವುದು ತಪ್ಪಲ್ಲ. ಸಾಹಿತ್ಯ ತಪ್ಪು ಅಂತಾನು ಹೇಳಬಾರದು. ಒಂದು ಕೃತಿಯ ಮಿತಿಗಳಿಂದ ಹೊಸ ಬರಹಗಾರರು ಏನು ಕಲಿಯಬಹುದು, ಸಾಧನೆಗೆ ಏನು ಮಾಡಬಹುದು. ಇದನ್ನು ಹೇಳುವ ಕೆಲಸ ವಿಮರ್ಶೆ ಮಾಡುತ್ತದೆ.

ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕಾದರೆ ಅದಕ್ಕೆ ನಿಮ್ಮ ಸಲಹೆಗಳೆನು?

ಪ್ರಥಮವಾಗಿ ಕನ್ನಡ ಮಾಧ್ಯಮ ಶಾಲೆಗಳು ಕ್ರಿಯಾಶೀಲವಾಗಿರಬೆಕು. ಜನರು ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ವಾತಾವರಣ ನಿರ್ಮಾಣವಾಗಬೇಕು. ಬಹಳಷ್ಟು ಶಾಲೆಗಳು ಸಮಸ್ಯೆಗಳಿಂದ ಕೂಡಿವೆ. ಸರಕಾರಿ ಶಾಲೆಗಳು, ಮಾಧ್ಯಮ ಶಾಲೆಗಳು ಮೊದಲಿನಂತೆ ಈಗಿಲ್ಲ. ಬಹಳ ಅಸ್ತವ್ಯಸ್ಥಗೊಂಡಿವೆ. ಕನ್ನಡಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ನಡೆಸುವುದು. ಕನ್ನಡ ಭಾಷೆ ಬೆಳೆಸಲು ಅನುಕೂಲಗಳನ್ನು ಸೃಷ್ಟಿ ಮಾಡಬೆಕು. ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಲ್ಪ ಇತ್ತ ಕಡೆ ಗಮನ ಹರಿಸುವಂತಾಗಬೇಕು.

ಸೆಮಿಸ್ಟರ್ ಪದ್ದತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆಯಾ?

ಈ ಪದ್ದತಿಯಿಂದ ಸ್ವಲ್ಪ ಒತ್ತಡ ಜಾಸ್ತಿಯಾದಂತಿದೆ. ದೀರ್ಘವಾದ ಓದುವಿದ್ಯಾರ್ಥಿಗಳ ಮನನಕ್ಕೆ ತೊಂದರೆಯಾಗಿದೆ. ಉತ್ತಮ ಅಂಕ ಗಳಿಸಲು ಇದು ಸದಾವಕಾಶ. ಆದರೆ ಬರೀ ಅಂಕ ಗಳಿಸುವುದಕ್ಕೆ ಸೀಮಿತವಾಗಿ, ಕಲಿಕೆಯ ಸುಖವನ್ನು ಗೆಳೆಯರ ಜೊತೆ ಹಂಚಿಕೊಳ್ಳಲು ಕಾಲಾವಕಾಶ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಆಳವಾಗಿ ಓದುವುದಕ್ಕೆ, ಚಿಂತನೆಗೆ, ಆಲೋಚನೆಗೆ ಅನುಕೂಲವಾಗುವ ವ್ಯವಸ್ಥೆಯಾಗಬೆಕು. ಒಂದು ದೃಷ್ಟಿಕೋನ ಬೆಳೆಸಿಕೊಂಡು ಓದಿನ ವ್ಯಾಪ್ತಿ, ಓದಿನ ಕ್ರಮ, ಪಠ್ಯದ ಹೊರತು ಜ್ಞಾನ ಗಳಿಕೆಗೆ ದೀರ್ಘ ಓದು ಬೇಕಾಗುತ್ತದೆ.

ಗುಣಮಟ್ಟ ಶಿಕ್ಷಣಕ್ಕೆ ನಿಮ್ಮ ಸಲಹೆಗಳೇನು?

ಸಿಲಬಸ್ ಚನ್ನಾಗಿರಬೇಕು, ಪಾಠ, ಪ್ರವಚನಗಳು ಸುಸೂತ್ರವಾಗಿ ನಡೆಯುತ್ತಿರಬೇಕು. ಸೂಕ್ಷ್ಮಜ್ಞರು ಬೇಕು. ಕಾಳಜಿ ಇರುವಂತಹ ಶಿಕ್ಷಕರು ಅಗತ್ಯ. ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿರಬೇಕು. ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಚರ್ಚಿಸುತ್ತಿರಬೇಕು. ಕಲಿಕೆ ನಿರಂತರವಾಗಿರಬೇಕು. ಉತ್ತಮ ವಾತಾವರಣ, ಗ್ರಂಥಾಲಯವೂ ಅವಶ್ಯಕ. ಶಿಕ್ಷಕರು ಚಟುವಟಿಕೆಯಿಂದ ಕ್ರಿಯಾಶೀಲರಾಗಿರಬೇಕು. ವಿಚಾರ ಸಂಕಿರಣಗಳು, ಚರ್ಚಾ ಸ್ಪರ್ಧೆಗಳು, ಕ್ರಿಯಾಶೀಲ ಬರವಣಿಗೆ ಇವೆಲ್ಲಾ ಇದ್ದರೆ ಶಿಕ್ಷಣ ಸುಧಾರಿಸುತ್ತದೆ.



-ಅಮರೇಶ ನಾಯಕ ಜಾಲಹಳ್ಳಿ
Cell-9945268059

Tuesday, 10 January 2012

Interview is an Art (Published)

ಸಂದರ್ಶನ ಎಂಬುದು ಒಂದು ಕಲೆ
 ಸಂದರ್ಶನ ಮಾಡುವದೆಂದರೆ ಅದು ಸಾಮಾನ್ಯ ಮಾತಲ್ಲ. ಒಬ್ಬ ವ್ಯಕ್ತಿಯ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡು, ಪ್ರಸಿದ್ಧಿ ಹೊಂದಿದ ಆತನ ಜೀವನದ ಅನುಭವಗಳ ಬಗ್ಗೆ, ವ್ಯಕ್ತಿತ್ವದ ಬಗ್ಗೆ, ಜೀವನದ ಹಾಗು-ಹೋಗುಗಳ ಬಗ್ಗೆ, ಅವರ ಜೊತೆ ಮುಖಾ-ಮುಖಿಯಾಗಿ ಸಮಾಲೋಚಿಸಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬರವಣಿಗೆಯ ಮೂಲಕ ಒಂದು ಮೆರಗು ನೀಡಿ ಅವರ ಜೀವನದಲ್ಲಾಗಿರುವ ಬದಲಾವಣೆ, ಬೆಳವಣಿಗೆಗಳ ಬಗ್ಗೆ ಓದುಗರಿಗೆ ದರ್ಶನ ಮಾಡಿಸುವದಾಗಿದೆ.

ನಮ್ಮ ಗುರುಗಳಾದ ಸುಭಾಷ ಬಣಗಾರ್ ಪ್ರಕಟಿಸಿರುವ ಶೈಕ್ಷಣಿಕ ವಿಷಯಗಳ ಪ್ರಶ್ನೋತ್ತರ ಸರಮಾಲೆಯ ಈ ಸಂಭಾಷಣೆ ಪುಸ್ತಕ ನನ್ನ ಮೇಲೆ ಪ್ರಭಾವ ಬೀರಿತು. ಸಂದರ್ಶನ ಮಾಡಲು ನನಗೆ ಅಭಿಲಾಷೆ ಮೂಡುವಂತೆ ಇದು ಪ್ರೇರಣೆಯಾಯಿತು. ಯಾರಾದರೊಬ್ಬರನ್ನು ಸಂದಶರ್ಿಸಬೇಕೆಂದು ನನ್ನ ಮನಸ್ಸಿನ ಅಂತರಾಳದಲ್ಲಿ ಆಸೆ ಚಿಗುರೊಡೆಯ ತೊಡಗಿತು. ಆದರೆ ಯಾರನ್ನು ಆಯ್ಕೆ ಮಾಡುವದು? ಪ್ರಸಿದ್ಧ ವ್ಯಕ್ತಿಗಳನ್ನು ಹೇಗೆ ಸಂದಶರ್ಿಸಬೇಕು? ಅವರಿಗೆ ಎಂಥಹ ಪ್ರಶ್ನೆಗಳನ್ನು ಕೇಳಬೆಕು? ಎನ್ನುವ ಆತಂಕ, ಭಯ ಮನಸ್ಸಿನಲ್ಲಿ ಮೂಡಿತು. ಆಗ ನನಗೆ ಒಂದು ಆಲೋಚನೆ ಹೊಳೆಯಿತು. ನಾನು ಆಯ್ಕೆ ಮಾಡಿಕೊಂಡದ್ದು ಬೆರೆ ಯಾರನ್ನೂ ಅಲ್ಲ, ಬಹುಮುಖ ವ್ಯಕ್ತಿತ್ವದ, ಸರಳ ಸ್ವಭಾವದ ಪತ್ರಕರ್ತ, ಬಯಲು ಗ್ರಂಥಾಲಯದ ಸಂಸ್ಥಾಪಕ, ಕನರ್ಾಟಕ ಸೇವಾ ಸಿರಿ ಪ್ರಶಸ್ತಿ ಪುರಸ್ಕೃತ ಸುಭಾಷ ಬಣಗಾರ್ರವರನ್ನು.

ಅವರು ಒಬ್ಬ ಉತ್ತಮ ಸಂದರ್ಶಕರು. ಪ್ರತಿಭಾವಂತರನ್ನು ಹುಡುಕಿಕೊಂಡು ಹೋಗಿ, ಅಂಥವರ ಜೀವನದ ಸಾಧನೆಗಳ ಬಗ್ಗೆ ಚಚರ್ಿಸಿ, ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿರುವ ಕಾರ್ಯಗಳ ಒಂದು ಸ್ತೂಲ ಮಾಹಿತಿಯನ್ನು ನೀಡುವದರೊಂದಿಗೆ ಸಮಾಜದಲ್ಲಿ ಅವರನ್ನು ಗುರುತಿಸುವಂತೆ ಮಾಡಿದ ಕೀತರ್ಿ ಇವರಿಗೆ ಸಲ್ಲುತ್ತದೆ. ನಾನು ಅವರನ್ನು ಸಂದಶರ್ಿಸಿ ಪ್ರಶ್ನೆ ಕೆಳುವಾಗ ಒಂದು ರೀತಿಯ ಹೊಸ ಹೊಸ ಅನುಭವಗಳಾದವು. ನಾನು ಸಂದಶರ್ಿಸಿದ ವ್ಯಕ್ತಿಯ ಬಗ್ಗೆ ಆನ್ಲೈನ್ ಪತ್ರಿಕೆಯಾದ ಈ-ಕನಸು ವಾರಪತ್ರಿಕೆಯಲ್ಲಿ ಕ್ಲಿಕ್ ಆಯಿತು ಬಯಲು ಗ್ರಂಥಾಲಯ ಎಂಬ ಸಂದರ್ಶನಾಧಾರಿತ ಲೇಖನ ಪ್ರಕಟಣೆಗೊಂಡಿತು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಏಕೆಂದರೆ ಇದು ನನ್ನ ಜೀವನದಲ್ಲಿ ನಾನು ಮಾಡಿದ ಮೊದಲ ಸಂದರ್ಶನ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡು ಅವರ ಸಂಪೂರ್ಣ ವಿವರದ ಮಾಹಿತಿಯನ್ನು ಓದುಗರಿಗೆ ನೀಡುವದೆಂದರೆ ಎನೋ ಒಂದು ತರಹ ಉಲ್ಲಾಸ. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರ ಕೆಲಸ ಕಾರ್ಯಗಳಲ್ಲಿ ತೊಡಗುವದರೆಂದರೆ ಸುಮ್ಮನೆ ಅಲ್ಲ.



ಈ ಪ್ರಶ್ನಾರ್ಥಕ ಚಿಹ್ನೆ ಕುಡುಗೋಲು ಇದ್ದಂತೆ. ಹೊಲದಲ್ಲಿ ಬೆಳೆದಿರುವ ಕಸವನ್ನು ಕಿತ್ತು ಹಾಕುತ್ತದೆ. ಅದೇ ರೀತಿ ವ್ಯಕ್ತಿಯ ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಶಕ್ತಿಯನ್ನು ಈ ಪ್ರಶ್ನೆಗಳೆಂಬ ಆಯುಧದಿಂದ ಪರಿಚಯಿಸಬಹುದಾಗಿದೆ, ಅವರ ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕ. ಬದುಕಿನ ಅಗೋಚರ ಮುಖವನ್ನು ಓದುಗರಿಗೆ ದೊರಕಿಸಿ ಕೊಡುವ ಕಲೆಯೇ ಈ ಸಂದರ್ಶನ. ವ್ಯಕ್ತಿಯ ವ್ಯಕ್ತಿತ್ವದ ಆಂತರಿಕ ಹಾಗು ಬಹಿರಂಗ ಸಂಘರ್ಷದ ಅನಾವರಣ. ಲೋಕಾನುಭವ ಹಾಗು ವಿವಿಧ ನೆಲೆಗಳಿಂದ ರೂಡಿಸಿಕೊಂಡ ಜ್ಞಾನದ ಮೂಲಕ ರೂಪಗೊಂಡ ಪ್ರಶ್ನೆಗಳ ಸರಮಾಲೆಯೇ ಯಶಸ್ವಿ ಸಂದರ್ಶನಕ್ಕೆ ಆಧಾರ.

 ವ್ಯಕ್ತಿಯಲ್ಲಿ ಹುದುಗಿರುವ ಭಾವ, ಆಶಯ, ಕೌಶಲ್ಯಗಳನ್ನು ಹೊರ ತೆಗೆದು ಓರೆಗೆ ಹಚ್ಚಿದಂತೆ. ಬರವಣಿಗೆ ಮೂಲಕ ಬಿಂಬಿಸುವದು ಸಂದರ್ಶನದ ತಿರುಳು. ಇದೊಂದು ರೀತಿ ಸವಾಲು ಕೂಡ ಹೌದು, ವ್ಯಕ್ತಿಯ ಭಾವನೆ ಹಾಗು ವ್ಯಕ್ತಿತ್ವಕ್ಕೆ ಧಕ್ಕೆ ಬರದಂತೆ ವ್ಯಕ್ತಿಗತ ಭಾವ ಪ್ರದಶರ್ಿತವಾಗದಂತೆ ಯಥಾವತ್ತಾಗಿ, ಯಥೋಚಿತ ಅಂಶಗಳನ್ನು ತೆರೆದಿಡುವದೇ ಸಂದರ್ಶನ. ವ್ಯಕ್ತಿಯ ಗುಣಲಕ್ಷಣ, ಸಾಮಥ್ರ್ಯ, ಅರ್ಹತೆಗಳನ್ನು ಅಳೆಯಲೆಂದು ಅವರೊಂದಿಗೆ ಮುಖಾ-ಮುಖಿ ಮಾತನಾಡುವದು.

 ಯಾವುದಾದರೊಂದು ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ, ಯಶಸ್ಸು ಗಳಿಸಿರುವ, ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾಗಿರುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ಹಾಗು ಕುತೂಹಲ ಎಲ್ಲ ಓದುಗರಲ್ಲಿ ಇರುತ್ತದೆ. ಈ ವ್ಯಕ್ತಿಗಳು ಬೆಳೆದು ಬಂದ ರೀತಿ, ಅವರು ಅನುಭವಿಸಿದ ಕಷ್ಟ-ಸುಖ, ಅವರಿಗೆ ದೊರಕಿದ ಪ್ರೇರಣೆ, ಅವರ ಹವ್ಯಾಸಗಳು, ಅವರನ್ನು ಕಾಡಿದ ಸಮಸ್ಯೆಗಳು, ಅವರಿಗೆ ದೊರಕಿದ ಮಾರ್ಗದರ್ಶನ. ಇವುಗಳ ಬಗ್ಗೆ ಮಾಹಿತಿ ಪಡೆಯಲು ಓದುಗರು ಕಾತುರರಾಗಿರುತ್ತಾರೆ. ಇವೆಲ್ಲವೂ ಮತ್ತೊಬ್ಬರಿಗೆ ಸಹಾಯಕವಾಗುವದಾದರೆ ಅದೊಂದು ಉತ್ತಮ ಲೇಖನಕ್ಕೆ ಸಾಮಾಗ್ರ ಆಗಬಹುದು. ಈ ಪ್ರಮುಖ ವ್ಯಕ್ತಿಗಳನ್ನು ಬೇಟಿ ಮಾಡಿ ಸಂದರ್ಶನ ನಡೆಸಿದರೆ ಬರಹಗಾರರ ಕುಶಲತೆಗೂ ಒಂದು ಅಭಿವ್ಯಕ್ತಿ ದೊರೆಯಬಹುದು
.


-ಅಮರೇಶ ನಾಯಕ ಜಾಲಹಳ್ಳಿ
ಮೊ-9945268059



Mother is God (Published)

ಅಮ್ಮ ಎಂಬ ಎರಡಕ್ಷರದ ಮಹಿಮೆ...


ಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ ಎನ್ನುತ್ತಾರೆ, ಮಗುವನ್ನು ಒಂಭತ್ತು ತಿಂಗಳು ಹೊತ್ತು ಹೆತ್ತು, ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲುಹಿ ಕಾಪಾಡುವಳು ಹೆತ್ತ ತಾಯಿ. ಅಮ್ಮ ಎಂಬ ಶಬ್ದವನ್ನು ಬಾಯ್ತುಂಬಾ ಕರೆಯೋದೆ ಒಂದು ಹರುಷ ನಮ್ಮೆಲ್ಲರ ಪಾಲಿಗೆ ಅವಳೇ ದೈವವಾಗಿದ್ದಾಳೆ, ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ತಾಯಿ ಮಗುವಿಗೆ ತೋರಿಸುವ ಮಮತೆಯು ನಿಷ್ಕಲ್ಮಶವಾಗಿರುತ್ತದೆ, ನಿರ್ಮಲವಾಗಿರುತ್ತದೆ. ಆ ತಾಯಿಯ ಮಮತೆ ಪಡೆಯುವ ಮಗುವೇ ಧನ್ಯ. ತಾಯಿ ಮಗುವಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಎಷ್ಟು ಬಣ್ಣಿಸಿದರೂ ಸಾಲದು, ಅಳುವ ಕಂದನನ್ನು ಅಪ್ಪಿಕೊಂಡು ತನ್ನ ಮಡಿಲಲ್ಲಿ ಹಾಕಿಕೊಂಡು ಅಮೃತಕ್ಕಿಂತ ಮಿಗಿಲಾದ ಆ ತಾಯಿಯ ಎದೆಹಾಲು ಉಣಿಸುವದರ ಮೂಲಕ ಆ ಮಗುವಿಗೆ ಸಮಾಧಾನ ಮಾಡುತ್ತಾಳೆ. ತಾಯಿಯ ಎದೆ ಹಾಲು ಬಹಳ ಶ್ರೇಷ್ಠವಾದದು ಎದೆ ಹಾಲು ಕುಡಿದ ಮಕ್ಕಳು ಯಾವುದೇ ನ್ಯೂನ್ಯತೆ ಇಲ್ಲದೆ ದಷ್ಟ ಪುಷ್ಟವಾಗಿ ಬೆಳೆಯುತ್ತಾರೆ, ಹಾಲನ್ನು ಕುಡಿಯದೇ ಇರುವಂತಹ ಮಕ್ಕಳು ಅನಾರ್ಯೊಗ್ಯದಿಂದ ಬಳಲುವದನ್ನು ಕಾಣುತ್ತೇವೆ. ಇದರಿಂದ ಕಣ್ಣಿನ ಸಮಸ್ಯೆ, ಜ್ಞಾಪಕ ಶಕ್ತಿ, ಮೆದುಳಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. 

ಹುಟ್ಟಿದ ಮಗು ಮೂರು ವರ್ಷಗಳ ವರೆಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿಯೇ ನಿದ್ರಿಸಬೇಕು, ಇಲ್ಲವಾದರೆ ಮಗು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಹೊಸ ಸಂಶೋಧನೆಯೊಂದು ಇತ್ತೀಚೆಗೆ ಹೇಳಿದೆ. ದಕ್ಷಿಣ ಆಫ್ರಿಕಾದ ಕೇಪ್ಟೌನ್ ವಿಶ್ವವಿದ್ಯಾಲಯದ ಡಾ.ನೀಲ್ಸ್ ಬ್ರಿಜ್ಮನ್ ನೇತೃತ್ವದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿ, ತಾಯಿಯ ಜೊತೆ ಮಗು ನಿದ್ರಿಸದಿದ್ದರೆ ಮಗುವಿನ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ ಎಂದು ಹೇಳಿದೆ. ಅಮ್ಮನ ಹಿತವಾದ ಸಾಮೀಪ್ಯದಲ್ಲಿ ನಿದ್ರಿಸಿದರೆ ಮಗುವಿನ ಮೆದುಳು ಬೆಳವಣಿಗೆ ಹೊಂದುತ್ತದೆ. ಒಂದು ವೇಳೆ ತಾಯಿಯಿಂದ ಬೇರ್ಪಟ್ಟು ನಿದ್ರಿಸಿದರೆ ಮೆದುಳಿನಲ್ಲಿ ದೋಷ ಕಾಣಿಸಿಕೊಳ್ಳಲಿದೆ. ಅಲ್ಲದೇ ವರ್ತನೆಯಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಸಂಶೋಧಕರು ತಿಳಿಸಿರುವ ವಿಚಾರವನ್ನು ಕನ್ನಡ ದಿನ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿತ್ತು. ಈ ವಿಷಯದಿಂದ ತಾಯಿ ಮಗುವಿನ ಸಂಬಂಧ ಎಷ್ಟೊಂದು ಮಹತ್ವದ್ದು ಎಂದು ತಿಳಿದು ಬರುತ್ತದೆ. ತಾಯಿ ಮತ್ತು ಮಗುವಿನ ಸಂಬಂಧ ಬಹಳ ಅನ್ಯೋನ್ಯವಾದುದು. ಮಾತೃ ಪ್ರೇಮ ಮಕ್ಕಳಿಗೆ ದೊರೆತರೆ ಅವರು ಲವಲವಿಕೆಯಿಂದ ಬೆಳೆಯುತ್ತಾರೆ, ಇಲ್ಲವಾದರೆ ಚೈತನ್ಯವಿಲ್ಲದೇ ಸುಂದಾಗಿ ಬೆಳೆಯುತ್ತಾರೆ. ತಾಯಿ ಪ್ರೀತಿ ಎಲ್ಲರಿಗೂ ದೊರೆಯುವದಿಲ್ಲ. ಪ್ರೀತಿ ಕಳೆದುಕೊಂಡ ಮಕ್ಕಳ ದು;ಖವನ್ನು ಹೇಳಲಾಗದು ಯಾಕೆಂದರೆ ದಾಹ ಆದಾಗಲೇ ನೀರಿನ ಮಹತ್ವ ತಿಳಿಯುವಂತೆ, ತಾಯಿ ಇಲ್ಲವಾದಾಗ ಅವಳ ಪ್ರೀತಿಯ ಮಹಿಮೆ ಗೊತ್ತಾಗುವದು. ಮಕ್ಕಳು ಚಿಕ್ಕವರಿದ್ದಾಗಲೇ ಅವರನ್ನು ಬೆಳೆಸಿ ಸರಿ ದಾರಿಗೆ ತರುವವಳು ಈ ಮಹಾತಾಯಿ.


 ಗುಲಬಗರ್ಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅಂತರ ಮಹಾವಿದ್ಯಾಲಯ ಯುವಜನೋತ್ಸವ 2011ರ ಸ್ಪಧರ್ಾ ಕಾರ್ಯಕ್ರಮಗಳಲ್ಲಿ ಕ್ಲೇ ಮಾಡೆಲಿಂಗ್ ಸ್ಪಧರ್ೆಯಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳು ತಾಯಿ ಮಗುವಿಗೆ ಹಾಲುಣಿಸುವ ಹಾಗೂ ಮಮತೆ ತೋರಿಸುವ ಸುಂದರ ಕಲಾಕೃತಿಯನ್ನು ರಚಿಸಿ ಎಲ್ಲರ ಗಮನ ಸೆಳೆದರು. ಒಂದೊಂದು ಕಲಾಕೃತಿಯನ್ನು ನೋಡಿದ ಪ್ರತಿಯೊಬ್ಬರಿಗೂ ತಾಯಿಯ ಮಮತೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ. ಈ ಅಗಮ್ಯ, ಅಗೋಚರವಾದ ಅಮ್ಮನ ಪ್ರೀತಿ ಮುಂದೆ ಎಲ್ಲವೂ ತೃಣಕ್ಕೆ ಸಮಾನವಾಗುತ್ತದೆ. ಅಮ್ಮ ಎಂದರೆ ಸಿಗುವ ತೃಪ್ತಿ,  ಮಕ್ಕಳಲ್ಲಿ ಚಿಮ್ಮುವ ಉತ್ಸಾಹ, ಉಲ್ಲಾಸ ಅವರ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳಿಗೆ ತಾಯಿಯೇ ಬಾಳನ ಬೆಳಕಾಗಿ, ಅವರ ಜೀವನದ ಜ್ಯೋತಿಯನ್ನು ಬೆಳಗುತ್ತಾಳೆ ಅವಳಿಲ್ಲದೇ ಎಲ್ಲವೂ ಶೂನ್ಯ.

 ಇಂದಿನ ದಿನಮಾನಗಳಲ್ಲಿ ಕಾಲ ಬದಲಾದಂತೆ ಎಲ್ಲವೂ ಬದಲಾವಣೆಯಾಗುವದನ್ನು ನಾವು ಕಾಣುತ್ತೇವೆ. ಈ ಹೈಬ್ರಿಡ್ ಕಾಲದಲ್ಲಿ ಎಲ್ಲವೂ ದೊರೆಯುತ್ತದೆ, ಆದರೆ ಮಕ್ಕಳಿಗೆ ತಾಯಿ ಪ್ರೀತಿ ಸಿಗುವದೇ ಕಷ್ಟವಾಗಿದೆ. ಇಂದಿನ ಒತ್ತಡ ಜೀವನದಲ್ಲಿ ತಂದೆ, ತಾಯಿಗಳು ಹಣ ಗಳಿಸಿಲೆಂದು ಇರುವ ಸಮಯವನ್ನೇ ಅದರಲ್ಲಿ ಕಳೆಯುತ್ತಿದ್ದಾರೆ. ತಾವು ಹೆತ್ತ ಮಕ್ಕಳ ಬಗ್ಗೆ ಸ್ವಲ್ಪಾನು ಚಿಂತೆ ಇಲ್ಲದೆ ಅವರನ್ನು ಕಾನ್ವೆಂಟ್ ಸ್ಕೂಲಿಗೆ ಸೇರಿಸಿ ತಮ್ಮ ಜವಾಬ್ದಾರಿ ಕಳೆಯಿತೆಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ತಂದೆ, ತಾಯಿಯನ್ನು ಕಾಣಬೇಕೆಂಬ ಮಕ್ಕಳ ಆಸೆ ಹಾಗೆ ಕಮರಿ ಹೋಗುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮ ಸಂವೇದನೆಯಿಂದ ಕೂಡಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳದೆ ಅವರು ಮಕ್ಕಳಿಗೆ ಬೇಸರ ಉಂಟು ಮಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ ಎಂದು ತಿಳಿದರೂ ಸಹ ಅವರು ಮತ್ತೆ ಅದೇ ರೀತಿ ಮಾಡುವದು ವಿಷಾದದ ಸಂಗತಿ.

ಈಗತಾನೇ ಭೂಮಿಗೆ ಕಾಲಿಟ್ಟ ಏನು ಅರಿಯದಿರುವ ಹಸುಳೆ ಶಿಶುವನ್ನು ಹೆತ್ತ ಎಷ್ಟೋ ತಾಯಂದಿರು ಅವರನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವದು ಇತ್ತೀಚಿನ ದಿನಗಳಲ್ಲಿ ಸವರ್ೇ ಸಾಮಾನ್ಯವಾದ ಕೆಲಸವಾಗಿದೆ. ಈ ರೀತಿಯ ಘಟನೆಗಳು ಅಮಾನವೀಯ ಕೃತ್ಯಗಳಾಗಿವೆ. ಮನವೀಯ ಮೌಲ್ಯ ಹೊಂದಿದ ಯಾವುದೇ ವ್ಯಕ್ತಿ ಇಂಥಹ ಘಟನೆಗೆ ಆಸ್ಪದ ಕೊಡಬಾರದು. ಮಕ್ಕಳು ದೇವರು ಸಮಾನ ಎನ್ನುತ್ತಾರೆ. ಅವರನ್ನು ಕಾಪಾಡುವದು ಅವರವರ ಕರ್ತವ್ಯವಾಗಿದೆ. ಅದೇ ರೀತಿ ಯಾವ ತಾಯಿಯು ಕೆಟ್ಟವರಿರುವದಿಲ್ಲ ಆದರೆ ಸಮಯ, ಸಂದರ್ಭಗಳು ಮನುಷ್ಯನನ್ನು ಆಟ ಆಡಿಸುತ್ತವೆ. ಜೀವನದಲ್ಲಿ ನಂಬಿಕೆ ಮುಖ್ಯ, ನಂಬಿಕೆಯಿಂದಲೇ ಜೀವನ ನಡೆಸಬೇಕು. ಗಾಳಿಯೂ ನಿನ್ನದೇ, ದೀಪವೂ ನಿನ್ನದೇ ಆರದಿರಲಿ ಬದುಕು. ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ ಬಾಳುವದು ಜೀವನದ ನಿಯಮ. ನೋಡಲು ದೇವರಿಲ್ಲ, ಆ ದೇವರನ್ನೇ ತಾಯಿಯಲ್ಲಿ ಕಾಣಬೇಕು.



-ಅಮರೇಶ ನಾಯಕ ಜಾಲಹಳ್ಳಿ
ಮೊ-9945268059